ಬಿಜೆಪಿ ಪಿತೂರಿಯಿಂದ ತೇಜ್ ಬಹಾದ್ದೂರ್ ನಾಮಪತ್ರ ತಿರಸ್ಕೃತ: ಎಸ್ಪಿ ನಾಯಕ
Team Udayavani, May 3, 2019, 7:19 PM IST
ಆಜಂಗಢ : ‘ವಾರಾಣಸಿಯಲ್ಲಿ ಅಸಲಿ ಚೌಕೀದಾರ್ ತನ್ನ ಎದುರು ಸ್ಪರ್ಧೆಗೆ ನಿಂತರೆ ತಾನು ಸೋಲುವೆನೆಂಬ ನಕಲಿ ಚೌಕೀದಾರನ ಭಯದ ಕಾರಣದಿಂದಲೇ ಎಸ್ಪಿ ಅಭ್ಯರ್ಥಿ, ಮಾಜಿ ಬಿಎಸ್ಎಫ್ ಜವಾನ, ತೇಜ್ ಬಹಾದ್ದೂರ್ ನಾಮಪತ್ರ ತಿರಸ್ಕೃತವಾಯಿತು’ ಎಂದು ಸಮಾಜವಾದಿ ಪಕ್ಷದ ನಾಯಕ ಮತ್ತು ಸಂಸದ ಧರ್ಮೇಂದ್ರ ಯಾದವ್ ಇಂದು ಶುಕ್ರವಾರ ಹೇಳಿದ್ದಾರೆ.
‘ವಾರಾಣಸಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದ ಎಸ್ಪಿ ಅಭ್ಯರ್ಥಿ ತೇಜ್ ಬಹಾದ್ದೂರ್ ನಾಮಪತ್ರ ತಿರಸ್ಕೃತವಾಗುವುದರ ಹಿಂದೆ ಬಿಜೆಪಿಯ ಪಿತೂರಿ ಇದೆ. ನಕಲಿ ಚೌಕೀದಾರನಿಗೆ ತಾನು ಅಸಲಿ ಚೌಕೀದಾರನ ಎದುರು ಸೋಲುವೆನೆಂಬ ಭಯವಿತ್ತು. ಹಾಗಾಗಿ ಬಿಜೆಪಿಯ ಇಡಿಯ ತಂಡವೇ ಅಂದು ಚುನಾವಣಾ ಆಯೋಗದ ಕಚೇರಿಯಲ್ಲಿ ಕುಳಿತಿತ್ತು ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ವಾರಾಣಸಿಯಲ್ಲಿ ಪ್ರಚಾರ ನಿರತರಾಗಿದ್ದರು’ ಎಂದು ಯಾದವ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ಏಜೆನ್ಸಿ ನಮ್ಮ ನಿಯಂತ್ರಣದಲ್ಲಿಲ್ಲ: ಸುಪ್ರೀಂಗೆ ಕೇಂದ್ರ ಮಾಹಿತಿ
PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ಕಳ್ಳರು & ದರೋಡೆಕೋರರ ಗ್ಯಾಂಗ್ ಚುಚ್ಚಿದ್ದ ವಿಷಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಮೃತ್ಯು