Farmers Protest; ಫೆ. 29ರ ವರೆಗೆ ದಿಲ್ಲಿ ಚಲೋ ಸ್ಥಗಿತ: ಹರಿಯಾಣದಲ್ಲಿ ಸಂಘರ್ಷ
Team Udayavani, Feb 24, 2024, 12:28 AM IST
ಹೊಸದಿಲ್ಲಿ: “ದಿಲ್ಲಿ ಚಲೋ’ ಪ್ರತಿಭಟನೆಯನ್ನು ಫೆ.29ರ ವರೆಗೆ ಸ್ಥಗಿತಗೊಳಿಸಿರುವುದಾಗಿ ಕಿಸಾನ್ ಮಜ್ದೂರ್ ಮೋರ್ಚಾದ ನಾಯಕ ಸರ್ವನ್ ಸಿಂಗ್ ಫಂದೇರ್ ಶುಕ್ರವಾರ ತಿಳಿಸಿದ್ದಾರೆ.
ಪ್ರತಿಭಟನ ನಿರತ ಯುವ ರೈತ ಶುಭಕರಣ್ ಸಿಂಗ್ ಸಾವಿನ ಬೆನ್ನಲ್ಲೇ ಫೆ.26ರ ವರೆಗೆ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಶುಭಕರಣ್ ಸಾವಿಗೆ ಕಾರಣರಾದವರ ವಿರುದ್ಧ ಎಫ್ಐಆರ್ ದಾಖಲಿಸುವವರೆಗೂ ಅಂತ್ಯಸಂಸ್ಕಾರ ನೆರವೇರಿಸುವುದಿಲ್ಲವೆಂದು ರೈತರು ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಶುಕ್ರವಾರ ಸಂಜೆ ರೈತ ಮುಖಂಡರು ಸಭೆ ನಡೆಸಿ ದ್ದು, ಫೆ. 29ರ ವರೆಗೆ ದಿಲ್ಲಿ ಚಲೋ ಪ್ರತಿಭಟನೆ ಸ್ಥಗಿತಗೊಳಿಸುತ್ತಿದ್ದೇವೆ. ಮುಂದಿನ ನಿರ್ಧಾರ ಆ ಬಳಿಕ ತಿಳಿಸುತ್ತೇವೆ ಎಂದಿದ್ದಾರೆ.
ಇತ್ತ ಹರಿಯಾಣದ ಖೇಡಿ ಚಾÌಪಾಟಾದಲ್ಲಿ ರೈತರು- ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿದ್ದು, ಘಟನೆಯಲ್ಲಿ ಪೊಲೀಸ್ ಸಿಬಂದಿ ಒಬ್ಬರು ಗಾಯಗೊಂಡಿದ್ದಾರೆ. ಸಂಘರ್ಷ ನಿಗ್ರಹ ಪಡೆಯ ಸಿಬಂದಿ ಬಂದು ಪೊಲೀಸರನ್ನು ರಕ್ಷಿಸು ವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ವೇಳೆ ಹೃದಯಾಘಾತದಿಂದ ದರ್ಶನ್ ಸಿಂಗ್ (62) ಎಂಬ ರೈತ ಮೃತಪಟ್ಟಿದ್ದಾರೆ.
ಪಂಜಾಬ್ ಸರಕಾರದಿಂದ 1 ಕೋಟಿ ರೂ. ಪರಿಹಾರ
ಇತ್ತೀ ಚೆಗೆ ಮೃತ ಪಟ್ಟ ಪ್ರತಿಭಟನಾನಿರತ ರೈತ ಶುಭಕರಣ್ ಸಿಂಗ್ ಅವರ ಕುಟುಂಬಕ್ಕೆ ಪಂಜಾಬ್ನ ಸಿಎಂ ಭಗವಂತ್ ಮಾನ್ ಸಿಂಗ್ ನೇತೃ ತ್ವದ ಆಪ್ ಸರಕಾರ 1 ಕೋಟಿ ರೂ.ಗಳ ಪರಿಹಾರ ಘೋಷಿಸಿದೆ. ಜತೆಗೆ, ಮೃತನ ಸಹೋದರಿಗೆ ಸರಕಾರಿ ಉದ್ಯೋಗದ ಭರವಸೆಯನ್ನೂ ನೀಡಿದೆ. ಇನ್ನೊಂದೆಡೆ, ಶುಕ್ರವಾರ ಪಂಜಾಬ್ನ 17 ಜಿಲ್ಲೆಗಳ 47 ಸ್ಥಳಗಳಲ್ಲಿ ಪ್ರತಿಭಟನೆ ಮೂಲಕ ರೈತರು ಕರಾಳ ದಿನ ಆಚರಿಸಿದ್ದು, ಬಿಜೆಪಿ ನಾಯಕರ ಪ್ರತಿಕೃತಿಗಳನ್ನು ದಹಿಸಿದ್ದಾರೆ.
ರೈತರ ರಕ್ಷಣೆಗೆ ಕಾಲಿಟ್ಟರು ಶಸ್ತ್ರಧಾರಿ ನಿಹಾಂಗ್ ಸಿಕ್ಖರು
ರೈತ ಪ್ರತಿಭಟನೆಗೆ ನಿಹಾಂಗ್ ಸಿಕ್ಖರು ಸೇರ್ಪಡೆಗೊಂಡಿದ್ದು, ಕತ್ತಿ, ಈಟಿಗಳಂಥ ಶಸ್ತ್ರಗಳಿಂದ ಸಜ್ಜಿತರಾಗಿಯೇ ಪ್ರತಿಭಟನೆಗೆ ಧುಮುಕಿರು ವುದು ವರದಿಯಾಗಿದೆ. ಪ್ರತಿಭಟನ ನಿರತ ರೈತರನ್ನು ಬೆದರಿಸಿ, ಓಡಿಸಬಹುದೆಂದು ಸರಕಾರ ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ರೈತರ ರಕ್ಷಣೆಗಾಗಿಯೇ ನಾವು ಬಂದಿದ್ದೇವೆ. ಪ್ರತಿಭಟನೆ ಪುನರಾರಂಭ ಆಗುವವರೆಗೂ ಕುದುರೆ ಸವಾರಿ, ಕತ್ತಿ ವರಸೆ, ಧ್ಯಾನದಂಥ ನಮ್ಮ ಶಕ್ತಿ ಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತೇವೆ. ಯಾವುದೇ ಸಂದರ್ಭ ಎದುರಿಸಲು ಸಿದ್ಧ ಎಂದು ಶೇರ್ಸಿಂಗ್ ಹೇಳಿದ್ದಾರೆ.
ಪೊಲೀಸರ ಯೂಟರ್ನ್!
ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಕೆಲವು ರೈತ ಮುಖಂಡರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅನ್ವಯ ಕೇಸು ದಾಖಲಿಸುವ ತನ್ನ ಹಿಂದಿನ ನಿರ್ಣಯವನ್ನು ಹರಿಯಾಣ ಪೊಲೀಸರು ಹಿಂಪಡೆಯುವು ದಾಗಿ ಶುಕ್ರವಾರ ಹೇಳಿದ್ದಾರೆ. ಪೊಲೀ ಸರ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತ ವಾದ ಬೆನ್ನಲ್ಲೇ ಅವರು ಯೂಟರ್ನ್ ಹೊಡೆ ದಿ ದ್ದಾ ರೆ. ಇದೇ ವೇಳೆ ಪ್ರತಿಭಟನಕಾರರು ಮಾಡುತ್ತಿ ರುವ ಸಾರ್ವಜನಿಕ ಆಸ್ತಿ-ಪಾಸ್ತಿಗಳ ನಷ್ಟವನ್ನು ಅವರಿಂದಲೇ ವಸೂಲು ಮಾಡಬೇಕಾಗುತ್ತದೆ ಎಂದೂ ಪೊಲೀಸರು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ