![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಗೋವಾದಲ್ಲಿ ಪೆನ್ನಿ ತರಬೇತಿ
Team Udayavani, Nov 4, 2018, 6:00 AM IST
![w-10.jpg](https://www.udayavani.com/wp-content/uploads/2018/11/4/w-10.jpg)
ಪಣಜಿ: ಗೋವಾದ ಪಾರಂಪರಿಕ ಸ್ಪಿರಿಟ್ ಪೆನ್ನಿಯನ್ನು ಇನ್ನಷ್ಟು ಜನಪ್ರಿಯಗೊಳಿಸಲು, ಇದರ ತಯಾರಿಕೆಗಾಗಿ ಯುವಕರಿಗೆ ತರಬೇತಿ ನೀಡಲು ಕ್ಯಾಷೂ ಪೆನ್ನಿ ಬಾಟಲ್ಸ್ ಆ್ಯಂಡ್ ಡಿಸ್ಟಿಲ್ಲರ್ಸ್ ಅಸೋಸಿಯೇಷನ್ ನಿರ್ಧರಿಸಿದೆ. ವಿದೇಶಗಳಲ್ಲಿರುವಂತೆ ವೈನ್ಪರಿಣಿತರ ರೀತಿಯಲ್ಲಿಯೇ ಪೆನ್ನಿ ತಯಾ ರಿಕೆಯ ಪರಿಣಿತರನ್ನು ತಯಾರಿಸುವುದು ಇದರ ಉದ್ದೇಶ. ಸಾಮಾನ್ಯವಾಗಿ ವೈನ್ ಪರಿಣಿತರಿಗೆ ಎಲ್ಲ ರೀತಿಯ ವೈನ್ ಬಗ್ಗೆ ತಿಳಿವಳಿಕೆ ಇರುತ್ತದೆ ಹಾಗೂ ಅದರ ತಯಾರಿಕೆ, ರುಚಿ ಇತ್ಯಾದಿ ವಿಚಾರದಲ್ಲಿ ಅಪಾರ ಅನುಭವ ಇರುತ್ತದೆ. ಅಂಥವರನ್ನು “ಸೊಮೆಲಿಯರ್ಸ್’ ಎಂದು ಕರೆಯಲಾಗುತ್ತದೆ. ಈಗ ಯುವಕ ರಿಗೆ ಪೆನ್ನಿ ತಯಾರಿಸುವ ಪ್ರಕ್ರಿಯೆ ಕಲಿಸಿಕೊಟ್ಟ ಬಳಿಕ, ಅವರನ್ನು “ಪೆನ್ನಿಲಿಯರ್ಸ್’ ಎಂದು ಕರೆಯಲಾಗುತ್ತದೆ.
ಗೋವಾ ಸರಕಾರ ಈಗಾಗಲೇ ಪೆನ್ನಿಗೆ ಪಾರಂಪರಿಕ ಸ್ಥಾನಮಾನ ನೀಡಿದೆ. ಪೆನ್ನಿ ಯನ್ನು ಗೇರುಹಣ್ಣಿನಿಂದ ತಯಾರಿಸಲಾ ಗುತ್ತದೆ. ಇದಕ್ಕೆ ಪ್ರದೇಶ ಸೂಚಕ (ಜಿಐ) ಟ್ಯಾಗ್ ಕೂಡ ಇದ್ದು, ಗೋವಾ ಪ್ರವಾಸಿಗರಲ್ಲಿ ಸಾಕಷ್ಟು ಪ್ರಸಿದ್ಧಿಯನ್ನೂ ಪಡೆದಿದೆ. ಸದ್ಯ ಪೆನ್ನಿಯಲ್ಲಿ ಗೋವಾ ಮೂಲದ ಯುವಕ ಜಫ್ರಿ ಮ್ಯಾನ್ಯುವಲ್ ಪರಿಣತಿ ಹೊಂದಿದ್ದು, ಇವರು ಇತರ ಯುವಕರಿಗೆ ತರಬೇತಿ ನೀಡ ಲಿದ್ದಾರೆ. ಈ ಪೆನ್ನಿ ಪರಿಣಿತರು ಹೊಟೇಲ್ಗಳು, ಟ್ರಾವೆಲ್ ಮಾರ್ಟ್ಗಳು, ಖಾಸಗಿ ಪಾರ್ಟಿಗಳಿಗೆ ತೆರಳಿ ಅದನ್ನು ಹೇಗೆ ಸೇವಿಸಬೇಕು ಮತ್ತು ಇದರ ಪರಿಣಾಮ ಏನು ಎಂಬುದರ ಬಗ್ಗೆ ವಿವರಿಸ ಲಿದ್ದಾರೆ. ಅಷ್ಟೇ ಅಲ್ಲ, ಮಾಹಿತಿ ವೀಡಿಯೋ ವನ್ನೂ ಈ ಪರಿಣಿತರು ಹೊಂದಿರಲಿದ್ದು, ಇದನ್ನು ಜನರಿಗೆ ಪ್ರದರ್ಶಿಸಲಿದ್ದಾರೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
![Exam](https://www.udayavani.com/wp-content/uploads/2024/07/Exam-8-150x84.jpg)
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.