ಕನಸು ಭಗ್ನ;ಇಂಡೋನೇಷ್ಯಾ ವಿಮಾನ ಚಲಾಯಿಸುತ್ತಿದ್ದ ಪೈಲಟ್ ದೆಹಲಿ ನಿವಾಸಿ
Team Udayavani, Oct 29, 2018, 2:39 PM IST
ಜಕಾರ್ತಾ: ಜಕಾರ್ತಾದಿಂದ ಪ್ಯಾಂಕಾಲ್ ಪಿನಾಂಗ್ ಗೆ 188 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಲಯನ್ ಏರ್ ಫ್ಲೈಟ್ ಟೇಕಾಫ್ ಆದ ಕೇವಲ 13 ನಿಮಿಷಗಳಲ್ಲಿ ಸಮುದ್ರದಲ್ಲಿ ಪತನಗೊಂಡಿದ್ದು, ಇಂಡೋನೇಷ್ಯಾ ವಿಮಾನ ಪೈಲಟ್ ಆಗಿದ್ದವರು ದೆಹಲಿ ನಿವಾಸಿ ಭಾವಯೈ ಸುನೇಜಾ(31) ಅವರು. ಏಳು ವರ್ಷದ ಹಿಂದೆ ಸುನೇಜಾ ಅವರು ಇಂಡೋನೇಷ್ಯಾ ಏರ್ ಲೈನ್ಸ್ ಸಂಸ್ಥೆಗೆ ಸೇರಿದ್ದರು.
ಇಂಡೋನೇಷ್ಯಾ ವಿಮಾನದ ಕ್ಯಾಪ್ಟನ್ ಆಗಿದ್ದದ್ದು ಸುನೇಜಾ ಹಾಗೂ ಸಹ ಪೈಲಟ್ ಹಾರ್ವಿನೋ ಸೇರಿದಂತೆ ಇತರ ಆರು ಮಂದಿ ವಿಮಾನದಲ್ಲಿದ್ದರು. 31ರ ಹರೆಯದ ಕ್ಯಾಪ್ಟನ್ ಸುನೇಜಾ ಅವರು ಆರು ಸಾವಿರ ಗಂಟೆಗಳ ಕಾಲ ವಿಮಾನದ ಪೈಲಟ್ ಆಗಿ ಅನುಭವ ಹೊಂದಿದ್ದರೆ, ಸಹ ಪೈಲಟ್ ಹಾರ್ವಿನೋ 5 ಸಾವಿರ ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿದ್ದ ಅನುಭವ ಹೊಂದಿದ್ದರು ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: 188ಪ್ರಯಾಣಿಕರಿದ್ದ ಇಂಡೋನೇಶ್ಯ ಲಯನ್ ಏರ್ ಫ್ಲೈಟ್ ಸಮುದ್ರದಲ್ಲಿ ಪತನ
ಭಾವಯೈ ಅವರು ದೆಹಲಿಯ ಮಯೂರ್ ವಿಹಾರ್ ನಿವಾಸಿ. 2011ರಲ್ಲಿ ಲಯನ್ ಏರ್ ಸಂಸ್ಥೆಯನ್ನು ಸೇರ್ಪಡೆಗೊಂಡಿದ್ದರು. ಸುನೇಜಾ ಅವರು 737 ಏರ್ ಬೋಯಿಂಗ್ ಹಾರಾಟ ನಡೆಸಿದ್ದರು. 2016ರಲ್ಲಿ ಕ್ಯಾಪ್ಟನ್ ಆಗಿ ಭಡ್ತಿ ಪಡೆದಿದ್ದರು. ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದ ಸುನೇಜಾ ಅವರು, ಅಧಿಕಾರಿಗಳ ಬಳಿ ತನಗೆ ದೆಹಲಿಗೆ ವರ್ಗಾಯಿಸಿ ಎಂದು ಕೇಳಿಕೊಂಡಿದ್ದರಂತೆ. ಆದರೆ ವಿಧಿ ವಿಪರ್ಯಾಸ ಸುನೇಜಾ ಅವರ ಕನಸು ಭಗ್ನಗೊಂಡಂತಾಗಿದೆ.
ಇಂಡೋನೇಷ್ಯಾ ವಿಮಾನ ಸಮುದ್ರದಲ್ಲಿ ಪತನಗೊಂಡು 30ರಿಂದ 40 ಮೀಟರ್ ಆಳಕ್ಕೆ ಮುಳುಗಿತ್ತು ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಡೈರೆಕ್ಟರೇಟ್ ಜನರಲ್ ಸಿಂಧು ಅವರು ನೀಡಿದ ಮಾಹಿತಿ ಪ್ರಕಾರ, ವಿಮಾನದಲ್ಲಿ 178 ವಯಸ್ಕ ಪ್ರಯಾಣಿಕರು, ಒಂದು ಮಗು ಮತ್ತು ಎರಡು ಪುಟ್ಟ ಕಂದಮ್ಮಗಳು, ಇಬ್ಬರು ಪೈಲಟ್, ಐದು ವಿಮಾನದ ಸಿಬ್ಬಂದಿಗಳು ಮುಳುಗಿ ಹೋಗಿರುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…
MUST WATCH
ಹೊಸ ಸೇರ್ಪಡೆ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ