
ಭಿವಂಡಿ ತೈಲ ಗೋದಾಮಿನಲ್ಲಿ ಭಾರೀ ಬೆಂಕಿ: ಜೀವ ಹಾನಿ ಇಲ್ಲ
Team Udayavani, Apr 2, 2018, 12:23 PM IST

ಥಾಣೆ : ಭಿವಂಡಿ ತಾಲೂಕಿನ ಗುಂಡಾವಳಿ ಗ್ರಾಮದಲ್ಲಿನ ತೈಲ ಆವರಣದೊಳಗೆ ನಿನ್ನೆ ರಾತ್ರಿ ತಡ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಹಲವು ತೈಲ ಗೋದಾಮುಗಳು ನಾಶವಾಗಿರುವುದಾಗಿ ವರದಿಯಾಗಿದೆ.
ಬೆಂಕಿ ಕಾಣಿಸಿಕೊಂಡ ಕೂಡಲೇ ಆರು ಅಗ್ನಿ ಶಾಮಕಗಳು ಧಾವಿಸಿ ಬಂದು ಬೆಂಕಿ ನಂದಿಸುವ ಕಾರ್ಯಾಚರಣೆಗೆ ತೊಡಗಿದವು. ಗಣೇಶ್ ಕಾಂಪೌಂಡ್ನಲ್ಲಿ ಕಾಣಿಸಿಕೊಂಡ ಬೆಂಕಿಯು ಆವರಣದೊಳಗಿನ ಹಲವು ತೈಲ ಗೋದಾಮುಗಳಿಗೆ ಹಬ್ಬಿಕೊಂಡಿತು.
ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆಯಾದರೂ ಸೋಮವಾರ ಸಂಜೆಯ ವೇಳೆಗೆ ಬೆಂಕಿಯನ್ನು ಪೂರ್ತಿಯಾಗಿ ನಂದಿಸಲು ಸಾಧ್ಯವಾದೀತು ಎಂದು ಎಎನ್ಐ ವರದಿ ಮಾಡಿದೆ.
ಬೆಂಕಿ ಅವಘಡ ಸಂಭವಿಸಿರುವ ಇಡಿಯ ಆವರಣವನ್ನು ಭದ್ರತಾ ದೃಷ್ಟಿಯಲ್ಲಿ ಪೊಲೀಸರು ಸುತ್ತು ವರಿದಿದ್ದಾರೆ.ಯಾವುದೇ ಜೀವ ಹಾನಿಯಾಗಿರುವ ವರದಿಗಳಲ್ಲಿ. ಸೊತ್ತು ನಾಶ-ನಷ್ಟದ ಪ್ರಮಾಣ ಇನ್ನಷ್ಟೇ ಗೊತ್ತಾಗಬೇಕಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
