ಭಿವಂಡಿ ತೈಲ ಗೋದಾಮಿನಲ್ಲಿ ಭಾರೀ ಬೆಂಕಿ: ಜೀವ ಹಾನಿ ಇಲ್ಲ
Team Udayavani, Apr 2, 2018, 12:23 PM IST
ಥಾಣೆ : ಭಿವಂಡಿ ತಾಲೂಕಿನ ಗುಂಡಾವಳಿ ಗ್ರಾಮದಲ್ಲಿನ ತೈಲ ಆವರಣದೊಳಗೆ ನಿನ್ನೆ ರಾತ್ರಿ ತಡ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಹಲವು ತೈಲ ಗೋದಾಮುಗಳು ನಾಶವಾಗಿರುವುದಾಗಿ ವರದಿಯಾಗಿದೆ.
ಬೆಂಕಿ ಕಾಣಿಸಿಕೊಂಡ ಕೂಡಲೇ ಆರು ಅಗ್ನಿ ಶಾಮಕಗಳು ಧಾವಿಸಿ ಬಂದು ಬೆಂಕಿ ನಂದಿಸುವ ಕಾರ್ಯಾಚರಣೆಗೆ ತೊಡಗಿದವು. ಗಣೇಶ್ ಕಾಂಪೌಂಡ್ನಲ್ಲಿ ಕಾಣಿಸಿಕೊಂಡ ಬೆಂಕಿಯು ಆವರಣದೊಳಗಿನ ಹಲವು ತೈಲ ಗೋದಾಮುಗಳಿಗೆ ಹಬ್ಬಿಕೊಂಡಿತು.
ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆಯಾದರೂ ಸೋಮವಾರ ಸಂಜೆಯ ವೇಳೆಗೆ ಬೆಂಕಿಯನ್ನು ಪೂರ್ತಿಯಾಗಿ ನಂದಿಸಲು ಸಾಧ್ಯವಾದೀತು ಎಂದು ಎಎನ್ಐ ವರದಿ ಮಾಡಿದೆ.
ಬೆಂಕಿ ಅವಘಡ ಸಂಭವಿಸಿರುವ ಇಡಿಯ ಆವರಣವನ್ನು ಭದ್ರತಾ ದೃಷ್ಟಿಯಲ್ಲಿ ಪೊಲೀಸರು ಸುತ್ತು ವರಿದಿದ್ದಾರೆ.ಯಾವುದೇ ಜೀವ ಹಾನಿಯಾಗಿರುವ ವರದಿಗಳಲ್ಲಿ. ಸೊತ್ತು ನಾಶ-ನಷ್ಟದ ಪ್ರಮಾಣ ಇನ್ನಷ್ಟೇ ಗೊತ್ತಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ