North India ಮಂಜಿನ ಹೊದಿಕೆ ; ವಿಪರೀತ ಚಳಿ, ಝಾರ್ಖಂಡ್ ಶಾಲೆಗಳಿಗೆ ರಜೆ
Team Udayavani, Dec 22, 2023, 5:50 AM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿ, ಪಂಜಾಬ್, ಹರಿಯಾಣ ಸೇರಿ ಉತ್ತರ ಭಾರತದಲ್ಲಿ ಚಳಿಗಾಳಿ ತೀವ್ರಗೊಂಡಿದ್ದು, ದಟ್ಟ ಮಂಜು ಆವರಿಸಿದೆ. ಮುಂದಿನ 3 ದಿನಗಳಲ್ಲಿ ಪಂಜಾಬ್, ಹರಿಯಾಣ, ಅಸ್ಸಾಂ, ಮೇಘಾಲಯ, ನಾಗಾ ಲ್ಯಾಂಡ್, ಮಿಜೋರಾಂ, ಮಣಿಪುರ ಮತ್ತು ತ್ರಿಪುರಾದ ಹಲವು ಪ್ರದೇಶಗಳಲ್ಲಿ ದಟ್ಟ ಮಂಜು ಆವರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಜೆ ಘೋಷಣೆ: ವಿಪರೀತ ಚಳಿಯ ಕಾರಣ ಡಿ. 26ರಿಂದ 31ರ ವರೆಗೆ ಝಾರ್ಖಂಡ್ನ ಎಲ್ಲ ಸರಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಮ್ಮು – ಕಾಶ್ಮೀರದಲ್ಲಿ ತೀವ್ರ ಚಳಿಯ ಅವಧಿ “ಚಿಲ್ಲಾ-ಇ-ಕಲನ್’ ಗುರುವಾರ ದಿಂದ ಆರಂಭವಾಗಿದೆ. ಈ ಸಮಯದಲ್ಲಿ ಕಾಶ್ಮೀರದ ಹಲವು ಭಾಗಗಳು ಚಳಿಯಿಂದ ತತ್ತರಿಸಲಿದ್ದು, ನೀರು ಮಂಜುಗಡ್ಡೆಯಾಗಲಿದೆ. ಜ. 31 ರಂದು “ಚಿಲ್ಲಾ – ಇ – ಕಲನ್’ ಮುಗಿಯಲಿದೆ. ಇದೇ ವೇಳೆ ಮಂಗಳವಾರ ರಾತ್ರಿ ಶ್ರೀನಗರದಲ್ಲಿ -4.3 ಡಿ.ಸೆ., ಪಹಲ್ಗಾಮ್ನಲ್ಲಿ -5.8 ಡಿ.ಸೆ., ಗುಲ್ಮಾರ್ಗ್ ನಲ್ಲಿ -3.0 ಡಿ.ಸೆ. ಮತ್ತು ಕುಪ್ವಾರಾದಲ್ಲಿ -4.0 ಡಿ.ಸೆ. ದಾಖಲಾಗಿದೆ. ದಿಲ್ಲಿಯಲ್ಲಿ 6 ಡಿ.ಸೆ. ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ