ಪುರಚ್ಚಿ ತಲೈವಿ ಆಡಳಿತ ಸ್ಥಾಪಿಸುವ ತನಕ ಧರ್ಮಯುದ್ಧ: ಪನ್ನೀರ್ ಶಪಥ
Team Udayavani, Feb 16, 2017, 4:26 PM IST
ಚೆನ್ನೈ : ನಿರ್ಗಮನ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರಿಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ನಟರಾಜನ್ ಹಾಗೂ ಆಕೆಯ ಕುಟುಂಬದ ವಿರುದ್ಧದ ಧರ್ಮ ಯುದ್ಧವನ್ನು, ರಾಜ್ಯದಲ್ಲಿ ಜೆ ಜಯಲಲಿತಾ ಅವರ ಆಡಳಿತೆಯನ್ನು ಪುನರ್ ಸ್ಥಾಪಿಸುವ ತನಕವೂ, ಮುಂದುವರಿಸುವುದಾಗಿ ಶಪಥ ಮಾಡಿದ್ದಾರೆ.
“ಪಕ್ಷ ಮತ್ತು ಸರಕಾರ ಪುನಃ ಏಕ ಕುಟುಂಬದ ಕೈವಶವಾಗುವುದನ್ನು ನಾವೆಲ್ಲರೂ ಒಗ್ಗೂಡಿ ತಡೆಯೋಣ; ರಾಜ್ಯದ ಜನರ ಆಶೋತ್ತರಗಳಿಗೆ ಅನುಗುಣವಾಗಿ ಜನತಾ ಸರಕಾರವನ್ನು ಸ್ಥಾಪಿಸಲು ನಾವು ಶ್ರಮಿಸೋಣ; ಅಲ್ಲಿಯ ವರೆಗೂ ನಮ್ಮ ಹೋರಾಟವನ್ನು ನಾವು ಜತೆಗೂಡಿ ಮುಂದುವರಿಸೋಣ’ ಎಂದು ಪನ್ನೀರ್ಸೆಲ್ವಂ ಹೇಳಿದರು.
“ಪುರಚ್ಚಿ ತೈಲವಿ ಅಮ್ಮಾ ಸರಕಾರ ಪುನರ್ ಸ್ಥಾಪನೆಯಾಗುವ ತನಕವೂ ನಾವು ಧರ್ಮ ಯುದ್ಧವನ್ನು ಮುಂದುವರಿಸೋಣ’ ಎಂದು ಪನ್ನೀರ್ ಸೆಲ್ವಂ ಅವರು, ರಾಜ್ಯಪಾಲ ಸಿ ವಿದ್ಯಾಸಾಗರ ರಾವ್ ಅವರು ಶಶಿಕಲಾ ನಿಷ್ಠ ಹಾಗೂ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕನಾಗಿರುವ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರಿಗೆ ಸರಕಾರ ರಚಿಸುವಂತೆ ಆಹ್ವಾನ ನೀಡಿದ ಬಳಿಕದಲ್ಲಿ ಹೊರಗೆಡಹಿದ ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ಹೇಳಿದರು.
ಮಾಜಿ ಸಚಿವ ಕೆ ಪಿ ಮುನುಸಾಮಿ ಸಹಿತವಾಗಿ ತಮ್ಮ ಪಕ್ಷದ ನಾಯಕರೊಡಗೂಡಿ ಮಾಧ್ಯಮದೊಂದಿಗೆ ಮಾತನಾಡಿದ ಪನ್ನೀರ್ ಸೆಲ್ವಂ, ತಮ್ಮನ್ನು ಬೆಂಬಲಿಸಿದ ಹಿಂಬಾಲಕರು ಹಾಗೂ ಜನರಿಗೆ ಕೃತಜ್ಞತೆ ಹೇಳಿದರು.
ಜಯಲಲಿತಾ ಅವರ ಜೀವಂತವಿದ್ದಾಗ ಎರಡು ಬಾರಿ ತಾತ್ಕಾಲಿಕ ಮುಖ್ಯಮಂತ್ರಿಯಾಗಿ, ಜಯಲಲಿತಾ ಅಪೇಕ್ಷೆ ಪ್ರಕಾರ, ಕರ್ತವ್ಯ ನಿಭಾಯಿಸಿದ್ದ ಪನ್ನೀರ್ ಸೆಲ್ವಂ, “ಅಮ್ಮಾ ಅನುಯಾಯಿಗಳ ಬೆಂಬಲದಿಂದ ನಾವು ಈ ಹೋರಾಟವನ್ನು ಜಯಿಸಿಯೇ ತೀರುವೆವು’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
MUST WATCH
ಹೊಸ ಸೇರ್ಪಡೆ
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.