ಏರಿಂಡಿಯಾ ಖಾಸಗೀಕರಣ ಪ್ರಸ್ತಾಪ ತಿರಸ್ಕರಿಸಿದ್ದ ಪ್ರಣಬ್
Team Udayavani, Feb 20, 2017, 3:45 AM IST
ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾ ಸಂಸ್ಥೆಯನ್ನು ಖಾಸಗಿಯವರಿಗೆ ಒಪ್ಪಿಸುವ ಬಗ್ಗೆ ಯುಪಿಎ ಸರ್ಕಾರ ಯೋಜಿಸಿತ್ತು. ಆದರೆ ಉನ್ನತಾಧಿಕಾರದ ಸಚಿವರ ಸಭೆಯಲ್ಲಿ ಈ ಪ್ರಸ್ತಾಪ ಚರ್ಚೆಗೆ ಬಂದಾಗ ಸಮಿತಿ ಸದಸ್ಯರಾಗಿದ್ದ ಹೆಚ್ಚಿನ ಸಚಿವರು ಖಾಸಗಿಯವರಿಗೆ ವಹಿಸಲು ಒಲವು ವ್ಯಕ್ತಪಡಿಸಿದ್ದರು.
ಆದರೆ ಆ ಸಂದರ್ಭದಲ್ಲಿ ಹಣಕಾಸು ಸಚಿವರಾಗಿದ್ದ ಪ್ರಣಬ್ ಅದನ್ನು ವಿರೋಧಿಸಿದ್ದರು. ಹಿರಿಯ ಅಧಿಕಾರಿಗಳು ಸೂಚಿಸಿದ್ದ ಶಿಫಾರಸುಗಳನ್ನು ಸಮಿತಿ ಒಪ್ಪಿಕೊಳ್ಳಲು ಮುಂದಾಗಿತ್ತು. ಮುಖರ್ಜಿ ಅವರು ಖಾಸಗೀಕರಣ ಬಿಟ್ಟು ಉಳಿದೆಲ್ಲ ಶಿಫಾರಸುಗಳ ಜಾರಿಗೆ ಒಪ್ಪಿದ್ದರು. ಸಂಸ್ಥೆಯನ್ನು ಖಾಸಗೀಕರಣ ಮಾಡುವುದು ಹಾಗೂ ಮುಚ್ಚುವುದನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದಿದ್ದರು.
ಈ ಕುರಿತು ಮಾಹಿತಿ ಹಕ್ಕಿನಡಿ ವಿವರ ಸಂಗ್ರಹಿಸಿರುವುದಾಗಿ “ದಿ ಹಿಂದೂ’ ಹೇಳಿಕೊಂಡಿದೆ. ಹೀಗಾಗಿ ಅದನ್ನು ಕೈಬಿಡಲಾಯಿತು. ಸಚಿವರಾಗಿದ್ದ ಜೈಪಾಲ್ ರೆಡ್ಡಿ ವಿರೋಧ ವ್ಯಕ್ತಪಡಿಸಿದ್ದರೆ, ಸಚಿವರಾಗಿದ್ದ ಅಜಿತ್ ಸಿಂಗ್, ಚಿದಂಬರಂ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು.