ಟರ್ಬೈನ್ ಸುಂಟರಗಾಳಿಗೆ ಸಿಲುಕಿದ ರಾಹುಲ್
Team Udayavani, Oct 10, 2020, 6:10 AM IST
ಹೊಸದಿಲ್ಲಿ: “ಗಾಳಿಯ ಟರ್ಬೈನ್ಗಳಿಂದ ಕೇವಲ ಶಕ್ತಿಯನ್ನಷ್ಟೇ ಅಲ್ಲ, ಶುದ್ಧ ಕುಡಿಯುವ ನೀರು- ಆಮ್ಲಜನಕವನ್ನೂ ಉತ್ಪಾದಿಸಬಹುದು’ ಎಂಬ ಪ್ರಧಾನಿ ಮೋದಿ ಅವರ ಸಲಹೆಯನ್ನು ಅಪಹಾಸ್ಯ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಪವನಶಕ್ತಿ ಉತ್ಪಾದಕ ಕಂಪೆನಿಯ ಸಿಇಒ ಜತೆ ಮೋದಿ ಸಂವಾದಿಸುತ್ತಿರುವ ವಿಡಿಯೊವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್, “ನಮ್ಮ ಪ್ರಧಾನಿಗೆ ಏನೂ ಗೊತ್ತಿಲ್ಲ ಎನ್ನುವುದೇ ಭಾರತದ ಪಾಲಿಗೆ ನೈಜ ಅಪಾಯ. ಈ ಸತ್ಯ ಹೇಳಲು ಅವರ ಸುತ್ತಮುತ್ತಲಿನವರಿಗೆ ಧೈರ್ಯ ವಿಲ್ಲ’ ಎಂದು ಹೇಳಿದ್ದರು.
ಇದಕ್ಕೆ ಪ್ರತ್ಯುತ್ತರಿಸಿರುವ ಕೇಂದ್ರ ಸಚಿವ ಪಿಯೂಶ್ ಗೋಯಲ್, “ಜಗತ್ತಿನ ಮುಂಚೂಣಿ ಕಂಪೆನಿಯ ಸಿಇಒ ಪ್ರಧಾನಿ ಸಲಹೆಯನ್ನು ಶ್ಲಾ ಸಿರುವಾಗ, ರಾಹುಲ್ ಇದನ್ನು ಟೀಕಿಸುತ್ತಿದ್ದಾರೆ’ ಎಂದಿದ್ದಾರೆ.
ಪಾತ್ರಾ ವಾಗ್ಧಾಳಿ: ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಕೂಡ ರಾಹುಲ್ ಮೇಲೆ ವಾಗ್ಧಾಳಿ ನಡೆಸಿದ್ದು, “ರಾಹುಲ್ ಜಿ ನಾಳೆ ಬೆಳಗ್ಗೆ ಬೇಗನೆ ಎದ್ದು ಈ ವೈಜ್ಞಾನಿಕ ವರದಿಗಳನ್ನು ಓದಿ. ನಿಮಗೆ ವೈಜ್ಞಾನಿಕ ಸಂಗತಿ ಅರ್ಥವಾಗುವುದಿಲ್ಲ ಎಂಬುದು ನಮಗೆ ಗೊತ್ತಿದೆ’ ಎಂದು ಸವಾಲೆಸೆದಿ ದ್ದಾರೆ. ನೀರನ್ನು ಸೃಷ್ಟಿಸುವ ಟರ್ಬೈನ್ ಮತ್ತು ಮರುಭೂಮಿಯಲ್ಲಿ 1 ಸಾವಿರ ಲೀ. ಗಾಳಿ ಶುದ್ಧೀಕರಿಸಿದ ಟರ್ಬೈನ್ ಕುರಿತಾಗಿ 2 ವರದಿಗಳನ್ನು ಪಾತ್ರ ಪೋಸ್ಟ್ ಮಾಡಿದ್ದಾರೆ.
ರಾಹುಲ್ರ ಅಜ್ಞಾನ, ಅನರ್ಹತೆಗೆ ಚಿಕಿತ್ಸೆಗಳಿಲ್ಲ.
ಅಮಿತ್ ಮಾಳವೀಯ, ಬಿಜೆಪಿ ಸಾಮಾಜಿಕ ಜಾಲತಾಣ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ
Hamida Banu: ಭಾರತದ ಮೊದಲ ಮಹಿಳಾ ಕುಸ್ತಿಪಟು ಹಮೀದಾ ಬಾನುಗೆ ಗೂಗಲ್ ಡೂಡಲ್ ಗೌರವ
Loksabha; ಪ್ರಚಾರಕ್ಕೆ ಸಿಗದ ಹಣಕಾಸು ನೆರವು..: ಟಿಕೆಟ್ ಮರಳಿಸಿದ ಕಾಂಗ್ರೆಸ್ ಅಭ್ಯರ್ಥಿ
Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ
ಅರವಿಂದ್ ಕೇಜ್ರಿವಾಲ್ಗೆ ಮಧ್ಯಂತರ ಜಾಮೀನು? ಸುಪ್ರೀಂ ಸುಳಿವು
MUST WATCH
ಹೊಸ ಸೇರ್ಪಡೆ
ಗದಗ: ಸಂವಿಧಾನ ಧರ್ಮಗ್ರಂಥ ಎಂದವರು ಮೋದಿ- ಬೊಮ್ಮಾಯಿ
ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ
BJP ಕುರುಬ ಸಮುದಾಯಕ್ಕೆ ಒಂದೂ ಟಿಕೆಟ್ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ
ಅಮಿತಾಭ್ ಟು ಶಾರುಖ್: ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?
Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ