![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ಶಶಿಕಲಾ ಕೇಸ್ : ಎಂಟೇ ನಿಮಿಷದಲ್ಲಿ ಮುಗಿದು ಹೋದ ಸುಪ್ರೀಂ ತೀರ್ಪು
Team Udayavani, Feb 14, 2017, 12:36 PM IST
![Supreme Court-700.jpg](https://www.udayavani.com/wp-content/uploads/2017/02/14/Supreme Court-700-620x354.jpg)
ಹೊಸದಿಲ್ಲಿ : ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ನಟರಾಜನ್ ವಿರುದ್ದದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಇಂದು ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ ಹತ್ತು ಕೋಟಿ ರೂ. ದಂಡವನ್ನು ವಿಧಿಸಿ ತೀರ್ಪು ನೀಡಲು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ತೆಗೆದುಕೊಂಡ ಕಾಲಾವಧಿ ಕೇವಲ ಎಂಟು ನಿಮಿಷ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟಿಸ್ ಪಿ ಸಿ ಘೋಷ್ ಮತ್ತು ಜಸ್ಟಿಸ್ ಅಮಿತಾವ್ ರಾಯ್ ಅವರು ಇಂದು ಮಂಗಳವಾರ ಬೆಳಗ್ಗೆ 10.32ಕ್ಕೆ ಸರಿಯಾಗಿ ಕೋರ್ಟ್ ರೂಮ್ ನಂಬರ್ 6 ಪ್ರವೇಶಿಸಿದರು. ಕೋರ್ಟಿನಲ್ಲಿ ಭಾರೀ ಸಂಖ್ಯೆಯ ವಕೀಲರು ಮತ್ತು ಮಾಧ್ಯಮದವರು ಅದಾಗಲೇ ಜಮಾಯಿಸಿದ್ದರು.
ನ್ಯಾಯಮೂರ್ತಿ ದ್ವಯರ ಸಮ್ಮುಖದಲ್ಲಿ ಭಾರೀ ಗಾತ್ರದ ಕೋರ್ಟ್ ತೀರ್ಪಿನ ಸೀಲನ್ನು ತೆರೆಯಲಾಯಿತು. ಅದನ್ನು ಅನುಸರಿಸಿ ಇಬ್ಬರು ನ್ಯಾಯಾಧೀಶರು ಕೆಲ ಕ್ಷಣಗಳ ಕಾಲ ಪರಸ್ಪರ ಚರ್ಚೆ ನಡೆಸಿದರು.
ಸೂಜಿ ಬಿದ್ದರೂ ಸದ್ದು ಕೇಳುವಷ್ಟು ನಿಶಬ್ದವಾಗಿದ್ದ ಕೋರ್ಟಿನಲ್ಲಿ ಜಸ್ಟಿಸ್ ಘೋಷ್ ಅವರು ತೀರ್ಪನ್ನು ಪ್ರಕಟಿಸಿದರು. ಭಾರೀ ಗಾತ್ರದ ತೀರ್ಪನ್ನು ನೀವು ಅರ್ಥ ಮಾಡಿಕೊಳ್ಳಬಲ್ಲಿರಿ ; ಆದರೂ ನಾವದರ ಹೊಣೆ ಹೊತ್ತಿದ್ದೇವೆ’ ಎಂದು ಜಸ್ಟಿಸ್ ಘೋಷ್ ಹೇಳಿದರು.
ಅದಾಗಿ ಒಡನೆಯೇ ಜಸ್ಟಿಸ್ ಘೋಷ್ ಅವರು ಬೃಹತ್ ಗಾತ್ರದ ತೀರ್ಪಿನಲ್ಲಿ ಜಾರಿಗೆ ಬರಬೇಕಿರುವ ಅಂಶಗಳನ್ನು ಓದಿ ಹೇಳಿದರು. ಇದು 10.40ರ ಹೊತ್ತಿಗೆ ಮುಕ್ತಾಯವಾಯಿತು.
ಘೋಷ್ ಅವರಿಂದ ತೀರ್ಪಿನ ಅನುಷ್ಠಾನ ಭಾಗದ ಓದುವಿಕೆ ಮುಗಿದೊಡನೆಯೇ ಕೋರ್ಟಿನಲ್ಲಿ ಸದ್ದು ಗುಲ್ಲು ಕೇಳಿ ಬಂತು. ಮಾಧ್ಯಮದವರು ಮತ್ತು ಕೆಲ ವಕೀಲರು ಕೋರ್ಟ್ ರೂಮ್ ಪ್ರಹಸನದ ವಿವರಗಳನ್ನು ನೀಡಲು ಹೊರ ಧಾವಿಸಿ ಬಂದಿರು.
ಈ ನಡುವೆ ಜಸ್ಟಿಸ್ ರಾಯ್ ಅವರು ಜಸ್ಟಿಸ್ ಘೋಷ್ ಪ್ರಕಟಿಸಿರುವ ತೀರ್ಪಿನ ಪೂರಕ ತೀರ್ಪನ್ನು ತಾನು ಮಾಡುತ್ತಿರುವುದಾಗಿ ಪ್ರಕಟಿಸಿದರು. ಸಮಾಜದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದ ಪಿಡುಗಿನ ಬಗ್ಗೆ ತೀವ್ರವಾದ ಕಳವಳವನ್ನು ನಾವು ವ್ಯಕ್ತಪಡಿಸುತ್ತಿದ್ದೇವೆ ಎಂದು ಜಸ್ಟಿಸ್ ರಾಯ್ ಹೇಳಿದರು.
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
![Exam](https://www.udayavani.com/wp-content/uploads/2024/07/Exam-8-150x84.jpg)
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
MUST WATCH
ಹೊಸ ಸೇರ್ಪಡೆ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.