ಕೇಂದ್ರದಿಂದ ನ್ಯಾಯಾಂಗದಲ್ಲಿ ಹಸ್ತಕ್ಷೇಪ: ಸುಪ್ರೀಂ ಕೋರ್ಟ್ ಬಾರ್
Team Udayavani, Apr 26, 2018, 11:54 AM IST
ಹೊಸದಿಲ್ಲಿ : ಹಿರಿಯ ನ್ಯಾಯವಾದಿ ಇಂದು ಮಲ್ಹೋತ್ರ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿ ಕೇಂದ್ರ ಸರಕಾರ ನೇಮಿಸಿದ ಒಂದು ದಿನದ ತರುವಾಯ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಕೇಂದ್ರದ ಈ ನಿರ್ಧಾರವನ್ನು ಸ್ವಾಗತಿಸಿತಾದರೂ ಉತ್ತರಾಖಂಡ ಹೈಕೋರ್ಟ್ ಚೀಫ್ ಜಸ್ಟಿಸ್ ಕೆ ಎಂ ಜೋಸೆಫ್ ಅವರ ಭಡ್ತಿ ಇನ್ನೂ ಬಾಕಿ ಇರುವಾಗ ಕೇಂದ್ರದ ಈ ಕ್ರಮವು ನ್ಯಾಯಾಂಗದ ಕಾರ್ಯದಲ್ಲಿ ನಡೆಸಿರುವ ಹಸ್ತಕ್ಷೇಪವಾಗಿದೆ ಎಂದು ಹೇಳಿದೆ.
“ಇಂದು ಮಲ್ಹೋತ್ರ ಅವರು ಒಬ್ಬ ಒಳ್ಳೆಯ ವಕೀಲೆ; ಆಕೆ ನ್ಯಾಯಾಧೀಶೆಯಾಗಿ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಲಿದ್ದಾರೆ. ಆದರೆ ಜಸ್ಟಿಸ್ ಕೆ ಎಂ ಜೋಸೆಫ್ ಅವರ ಭಡ್ತಿಯನ್ನು ಇನ್ನೂ ಬಾಕಿ ಇರಿಸಿರುವ ಕೇಂದ್ರ ಕ್ರಮದ ಬಗ್ಗೆ ನನ್ನ ಆಕ್ಷೇಪವಿದೆ. ಒಂದು ನೇಮಕ ಮಾಡುವುದು ಮತ್ತು ಇನ್ನೊಂದು ನೇಮಕವನ್ನು ಮಾಡದೇ ಇರುವ ಕೇಂದ್ರದ ಕ್ರಮವು ನ್ಯಾಯಾಂಗದ ಕಾರ್ಯದಲ್ಲಿ ಹಸ್ತಕ್ಷೇಪಿಸಿದ ಹಾಗೆಯೇ ಎಂದು ನಾನು ತಿಳಿಯುತ್ತೇನೆ; ನಿಜಕ್ಕೂ ಇದೊಂದು ಗಂಭೀರ ವಿಷಯ ಮತ್ತು ಇದನ್ನು ಸರಕಾರದ ಮುಂದೆ ಪ್ರಬಲವಾಗಿ ಎತ್ತಬೇಕಾಗಿದೆ’ ಎಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷರಾಗಿರುವ ವಕೀಲ ವಿಕಾಸ್ ಸಿಂಗ್ ಮಾಧ್ಯಮಕ್ಕೆ ಹೇಳಿದ್ದಾರೆ.
ಇಂದು ಮಲ್ಹೋತ್ರ ಅವರು ವಕೀಲರ ಸಂಘದಿಂದ ನೇರವಾಗಿ ನ್ಯಾಯಾಧೀಶರ ಹುದ್ದೆಗೆ ನೇಮಕಗೊಂಡಿರುವ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿ ನೇಮಿಸುವ ಕ್ರಮದಿಂದ ಕೇಂದ್ರ ಸರಕಾರ ಜಸ್ಟಿಸ್ ಕೆ ಎಂ ಜೋಸೆಫ್ ಅವರ ಭಡ್ತಿಯನ್ನು ತಡೆಹಿಡಿಯಲು ನಿರ್ಧರಿಸುವುದು ಸ್ಪಷ್ಟವಾಗಿದೆ ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ಏಜೆನ್ಸಿ ನಮ್ಮ ನಿಯಂತ್ರಣದಲ್ಲಿಲ್ಲ: ಸುಪ್ರೀಂಗೆ ಕೇಂದ್ರ ಮಾಹಿತಿ
PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ಕಳ್ಳರು & ದರೋಡೆಕೋರರ ಗ್ಯಾಂಗ್ ಚುಚ್ಚಿದ್ದ ವಿಷಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಮೃತ್ಯು