ವಣ್ಣಿಯಾರ್ಗೆ ಮೀಸಲು ರದ್ದುಗೊಳಿಸಿದ ಸುಪ್ರೀಂ
Team Udayavani, Apr 1, 2022, 6:30 AM IST
ಹೊಸದಿಲ್ಲಿ/ಚೆನ್ನೈ: ತಮಿಳುನಾಡಿನಲ್ಲಿ ಅತ್ಯಂತ ಹಿಂದುಳಿದ ವರ್ಗ (ಎಂಬಿಸಿ)ಕ್ಕೆ ಸೇರಿರುವ ವಣ್ಣಿಯಾರ್ ಸಮುದಾಯಕ್ಕೆ ನೀಡಲಾಗಿರುವ ಶೇ.10.5 ಮೀಸಲು ವ್ಯವಸ್ಥೆ ಯನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದು ಗೊಳಿಸಿದೆ.
ನ್ಯಾ| ಎಲ್.ನಾಗೇಶ್ವರ ರಾವ್ ಮತ್ತು ನ್ಯಾ| ಬಿ.ಆರ್.ಗವಾಯಿ ಅವರನ್ನೊಳಗೊಂಡ ನ್ಯಾಯ ಪೀಠ ಮೀಸಲು ವ್ಯವಸ್ಥೆಯನ್ನು ರದ್ದುಗೊಳಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.
ವಣ್ಣಿಕುಲ ಕ್ಷತ್ರಿಯ ಸಮುದಾಯವನ್ನು ತಮಿಳುನಾಡಿ ನ ಅತ್ಯಂತ ಹಿಂದುಳಿದಿರುವ (ಎಂಬಿಸಿ)115 ಸಮು ದಾಯಗಳಿಗಿಂತ ಭಿನ್ನವಾಗಿ ಕಾಣುವ ಬಗ್ಗೆ ಸಮರ್ಥನೆಯಲ್ಲಿ ಅರ್ಥವಿಲ್ಲ. ಹೀಗಾಗಿ 2021ರಲ್ಲಿ ಜಾರಿಗೊಳಿಸಿದ ಕಾಯ್ದೆ ಸಂವಿಧಾನದ 14,15 ಮತ್ತು 16ನೇ ವಿಧಿಗಳ ಸ್ಪಷ್ಟ ಉಲ್ಲಂಘನೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.