ತೀವ್ರ ಮೊಣಕಾಲ ನೋವು: ಉಮಾ ಭಾರತಿ ಆಸ್ಪತ್ರೆಗೆ ದಾಖಲು
Team Udayavani, Feb 3, 2018, 7:03 PM IST
ಹೊಸದಿಲ್ಲಿ : ತೀವ್ರ ಮೊಣಕಾಲು ನೋವಿನಿಂದ ಬಳಲುತ್ತಿರುವ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ಉಮಾ ಭಾರತಿ ಅವರನ್ನು ಇಲ್ಲಿನ ಏಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಉಮಾ ಭಾರತಿ ಅವರು ಕಳೆದ ಕೆಲವು ವರ್ಷಗಳಿಂದ ಮೊಣಕಾಲ ನೋವಿನಿಂದ ಬಳಲುತ್ತಿದ್ದರು. ನಿನ್ನೆ ಸಂಜೆ ಅವರಿಗೆ ಮೋಣಕಾಲ ನೋವು ಸಹಿಸಲಸಾಧ್ಯವಾಗಿತ್ತು. ಹಾಗಾಗಿ ಅವರನ್ನು ಅಗತ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಉಮಾ ಭಾರತಿ ಅವರ ನಿಕಟವರ್ತಿಯೋರ್ವರು ಮಾಧ್ಯಮಕ್ಕೆ ತಿಳಿಸಿದರು.