ಪ್ರಯಾಗ್ರಾಜ್ ಆದ ಅಲಹಾಬಾದ್: ಯುಪಿ ಕ್ಯಾಬಿನೆಟ್ ಅನುಮೋದನೆ
Team Udayavani, Oct 16, 2018, 3:38 PM IST
ಲಕ್ನೋ : ಅಲಹಾಬಾದ್ ನಗರವನ್ನು ಪ್ರಸಿದ್ಧ ಯಾತ್ರಾಸ್ಥಳವಾಗಿ ಪ್ರಯಾಗ್ರಾಜ್ ಎಂದು ಪುನರ್ ನಾಮಕರಣ ಮಾಡುವ ಪ್ರಸ್ತಾವಕ್ಕೆ ಉತ್ತರ ಪ್ರದೇಶ ಸಚಿವ ಸಂಪುಟ ಇಂದು ಮಂಗಳವಾರ ಅನುಮೋದನೆ ನೀಡಿತು.
ಹಾಗಿದ್ದರೂ ವಿರೋಧ ಪಕ್ಷಗಳು ಸರಕಾರದ ಈ ಕ್ರಮವನ್ನು ವಿರೋಧಿಸಿವೆ ಮತ್ತು ಮುಂದಿನ ವರ್ಷ ಜನವರಿಯಲ್ಲಿ ಆರಂಭವಾಗುವ ಕುಂಭ ಮೇಳಕ್ಕೆ ಮುನ್ನವೇ ಈ ಪುನರ್ ನಾಮಕರಣದ ನಿರ್ಧಾರ ಮಾಡಿರುವುದರಲ್ಲಿ ರಾಜಕೀಯ ಇದೆ ಎಂದು ಆರೋಪಿಸಿವೆ.
ಪುನರ್ ನಾಮಕರಣ ನಿರ್ಧಾರದ ಕ್ಯಾಬಿನೆಟ್ ಸಭೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಹಿಸಿದ್ದರು.
“ಅಲಹಾಬಾದ್ ಈಗಿನ್ನು ಪ್ರಯಾಗ್ರಾಜ್ ಎಂದು ಕರೆಯಲ್ಪಡುವುದಕ್ಕೆ ನಾನು ಸಂತಸಗೊಂಡಿದ್ದೇನೆ’ ಎಂದು ಯುಪಿ ಕ್ಯಾಬಿನೆಟ್ ಹಿರಿಯ ಸಚಿವ ಸಿದ್ಧಾರ್ಥ ನಾಥ್ ಸಿಂಗ್ ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ