ಫೋರ್ಟ್ ಫೌಂಟನ್ನಲ್ಲಿ 27ನೇ ವಾರ್ಷಿಕ ಮಹಾಪೂಜೆ
Team Udayavani, Oct 24, 2017, 12:21 PM IST
ಮುಂಬಯಿ: ಫೋರ್ಟ್ ಪರಿಸರದ ಉದ್ಯಮಿ ಭಾಸ್ಕರ್ ಎಂ. ಸಾಲ್ಯಾನ್ ಅವರ ನೇತೃತ್ವದಲ್ಲಿ 27ನೇ
ವಾರ್ಷಿಕ ಮಹಾಪೂಜೆಯು ಇತ್ತೀಚೆಗೆ ಫೋರ್ಟ್ ಪರಿಸರದ ಫೌಂಟನ್ ಇನ್ನಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಉದ್ಯಮಿ ಭಾಸ್ಕರ ಎಂ. ಸಾಲ್ಯಾನ್ ದಂಪತಿಯು ಪೂಜೆಯ ಯಜಮಾನತ್ವ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸೇವಾ ಭಜನ ಸಮಿತಿ ಫೋರ್ಟ್ ಇದರ ಪುರುಷೋತ್ತಮ ಪುತ್ರನ್ ಮತ್ತು ಬಳಗದವರಿಂದ ಭಜನ ಕಾರ್ಯಕ್ರಮ ಜರಗಿತು.
ಪ್ರಧಾನ ಅರ್ಚಕ ಅಜಿಲಮೊಗರು ದೇವದಾಸ ಪೂಜಾರಿ ಅವರು ಶ್ರೀ ದುರ್ಗಾದೇವಿಗೆ ಮಹಾಮಂಗಳಾರತಿಗೈದರು. ಪರಿಸರದ ಉದ್ಯಮಿಗಳು, ತುಳು-ಕನ್ನಡಿಗರು, ಕಾರ್ಯಕರ್ತರು, ಸಿಬಂದಿ ವರ್ಗದವರು, ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಉಮೇಶ್ ಕಾಂತಾವರ ಅವರು ಸಹಕರಿಸಿದರು. ಕೊನೆಯಲ್ಲಿ ಪ್ರಸಾದ ರೂಪದಲ್ಲಿ ಅನ್ನದಾನ ನಡೆಯಿತು.