ಪ್ರೇಕ್ಷಕರಿಗೆ ಹೊಸತನದ ಅನುಭವ ನೀಡಿದ ಸೀತಾಂತರಾಳ


Team Udayavani, Mar 30, 2017, 3:00 PM IST

27-Mum01a.jpg

ಧಾರ್ಮಿಕ ಮಹಾ ಕಾವ್ಯಗಳಾದ ರಾಮಾಯಣ  ಹಾಗೂ ಮಹಾಭಾರತ ಇವುಗಳನ್ನು ಮನನ ಮಾಡಿದಷ್ಟೂ  ಅಡಕವಾಗಿರುವ ಗಹನ ವಿಚಾರಗಳನ್ನು ಅರ್ಥೈಸುವಲ್ಲಿ ಸಾಧ್ಯವಾಗುತ್ತದೆ. ಆದರೆ ಇವುಗಳಲ್ಲಿ ಬರುವ ವಿಭಿನ್ನ ಪಾತ್ರಗಳ ಬಗ್ಗೆ ವೈಚಾರಿಕ ವಿಶ್ಲೇಷಣೆಗಳನ್ನು ನಡೆಸುತ್ತಾ ಹೋದಂತೆ ಪ್ರತಿಯೊಬ್ಬರೂ ಅವರವರಿಗೆ ಕಂಡಂತೆ ವಿಭಿನ್ನ ದೃಷ್ಟಿಕೋನದೊಂದಿಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ರುವುದನ್ನು  ಕಾಣಬಹುದಾಗಿದೆ. ಇದೇ ರೀತಿ ಕನ್ನಡ ಸಂಘ ಪುಣೆಯ ಕೇತ್ಕರ್‌ ರಸ್ತೆಯಲ್ಲಿರುವ ಕನ್ನಡ ಮಾಧ್ಯಮ ಹೈಸ್ಕೂಲ್‌  ಸಭಾಗೃಹದಲ್ಲಿ ಮಾ. 15 ರಂದು ಪ್ರಸ್ತುತಗೊಂಡ ಜಾಗತಿಕ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾದ  ಕರ್ನಾಟಕದ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದ ಕಲಾವಿದೆ ಮಂಜುಳಾ ಬಾದಾಮಿಯವರಿಂದ ಪ್ರದರ್ಶನಗೊಂಡ ಏಕಪಾತ್ರಿ ನಾಟಕ ಸೀತಾಂತರಾಳ  ವಿಭಿನ್ನ ವಿಶ್ಲೇಷಣೆಯನ್ನು ಪ್ರಸ್ತುತಪಡಿಸಿದ್ದು ಪ್ರೇಕ್ಷಕರನ್ನು ಹೊಸತೊಂದು ಚಿಂತನೆಗೆ ಹಚ್ಚಿದೆ.

ರಾಮಾಯಣದಲ್ಲಿ ತುಂಬು ಬಸುರಿ ಸೀತೆಯನ್ನು ರಾಮ ವನವಾಸಕ್ಕೆ ಕಳುಹಿಸುವ ಮತ್ತು ಆಕೆ  ಕಾನನದಲ್ಲಿ ಅನುಭವಿಸುವ ಯಾತನೆಯನ್ನು ಧೈರ್ಯದಿಂದ  ಮನಮುಟ್ಟುವಂತೆ ಪ್ರತಿಬಿಂಬಿಸುವ ಈ ನಾಟಕ ಅಂದಿನ ಕಾಲದಲ್ಲೂ ಮಹಿಳಾ ಸಬಲೀಕರಣಕ್ಕಾಗಿ ಸೀತೆಯ ಆದರ್ಶವನ್ನು ಸಾರುವ ಮಾರ್ಮಿಕ ನಾಟಕವೆಂಬುದು ಲೇಖಕರ ಅಭಿಪ್ರಾಯವಾದರೂ ರಾಮನನ್ನು ಅತಿಯಾಗಿ ವೈಭವೀಕರಿಸುವ ಜನರಿಗೆ ಅಥವಾ ಶ್ರೀ ರಾಮಚಂದ್ರನನ್ನು  ಸರ್ವೋತ್ತಮ ದಾರ್ಶನಿಕ ವ್ಯಕ್ತಿತ್ವವೆಂದು ನಂಬಿರುವ ಜನರಿಗೆ ಇದು ಮನಸ್ಸಿಗೆ ಹಿತ ನೀಡಿಲ್ಲ ಎಂಬುದನ್ನು ನಾಟಕದ ನಂತರ ಕೆಲವೊಂದು ಪ್ರೇಕ್ಷಕರ ಮಾತಿನಿಂದ ಕೇಳಿಬಂತು.

ಇಲ್ಲಿ ಸೀತೆ ರಾಮನ ಬಗ್ಗೆ ಅತಿಯೆನಿಸುವ ಹಾಗೆ ದ್ವೇಷಿಸುವ ಹಂತಕ್ಕೆ ತನ್ನ ಮನೋವೇದನೆಯನ್ನು ಪರಿಪರಿಯಾಗಿ ತೆರೆದಿಟ್ಟಿರುವುದೇ  ಕಾರಣವೆನ್ನಬಹುದಾಗಿದೆ. ವಸ್ತುಸ್ಥಿತಿಯ ಅಭಿನಯಕ್ಕೆ ಬರುವುದಾದರೆ ಮಂಜುಳಾ ಬಾದಾಮಿಯವರ ಮನೋಜ್ಞ ಅಭಿನಯಕ್ಕೆ ಮಾರುಹೋಗಬೇಕಾಗಿದೆ.  ಅರ್ಥಗರ್ಭೀತವಾಗಿ ಪಾತ್ರವನ್ನು ನಿರೂಪಿಸಿದ ರೀತಿ, ಮಾತುಗಳ ಸ್ಪಷ್ಟತೆ  ಅದ್ಭುತವಾಗಿತ್ತು.

ಈ ನಾಟಕದ ಲೇಖಕ ಪ್ರಸಿದ್ಧ ಪತ್ರಕರ್ತ, ಲೇಖಕ  ಶಶಿಕಾಂತ ಯಡಹಳ್ಳಿಯವರು ಕನ್ನಡ ರಂಗಭೂಮಿಯ ಒಬ್ಬ ಕ್ರಿಯಾಶೀಲ ನಿರ್ದೇಶಕ  ವೈ. ಡಿ. ಬಾದಾಮಿಯವರ ನಿರ್ದೇಶನ ಹಾಗೂ ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾರ್ಗದರ್ಶನದಲ್ಲಿ ಪ್ರದರ್ಶನಗೊಂಡಿತು. ನಾಟಕದ ಕೊನೆಗೆ ಕನ್ನಡ ಸಂಘದ ಉಪಾಧ್ಯಕ್ಷೆ  ಇಂದಿರಾ ಸಾಲ್ಯಾನ್‌ ಸಂಘದ ವತಿಯಿಂದ ಮಂಜುಳಾ ಬಾದಾಮಿಯವರನ್ನು ಗೌರವಿಸಿದರು.

ಈ ಸಂದರ್ಭ ಸಂಘದ ಕೋಶಾಧಿಕಾರಿ ಬಾಬು  ರಾವ್‌, ಜನಸಂಪರ್ಕಾಧಿಕಾರಿ ರಾಮದಾಸ ಆಚಾರ್ಯ, ಕನ್ನಡ ಮಾಧ್ಯಮ ಹೈಸ್ಕೂಲ್‌  ಪ್ರಾಚಾರ್ಯ ಚಂದ್ರಕಾಂತ ಹರ್ಕುಡೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು, ಶಿಕ್ಷಕ  ವೃಂದ ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಈ ವಿಶೇಷ ಪ್ರಯೋಗವು ಕಲಾಭಿಮಾನಿಗಳಿಗೆ ಹೊಸತೊಂದು ಅನುಭವವನ್ನು ನೀಡಿರುವುದಂತು ಅಕ್ಷರಶಃ ನಿಜ.

ಕಿರಣ್‌ ಬಿ. ರೈ ಕರ್ನೂರು

ಟಾಪ್ ನ್ಯೂಸ್

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

IMD

IMD; ರಾಜ್ಯದ 19 ಜಿಲ್ಲೆಗಳಿಗೆ ಬಿಸಿ ಗಾಳಿ ಮುನ್ಸೂಚನೆ : ಬೆಂಗಳೂರಿನಲ್ಲಿ ಮಳೆ

Bommai BJP

Haveri; ಕಮಲ-ಕೈ ನಡುವೆ ನೇರ ಸ್ಪರ್ಧೆ: ಯಾರ ಕೊರಳಿಗೆ ಏಲಕ್ಕಿ ಹಾರ?

bjp-congress

Bagalkote: ಒಬ್ಬರಿಗೆ ಮೊದಲನೆಯದು, ಇನ್ನೊಬ್ಬರಿಗೆ ‘ಕಡೇ’ ಚುನಾವಣೆ!

vidhana-soudha

ಜೂ.3: ಶಿಕ್ಷಕ, ಪದವೀಧರ ಕ್ಷೇತ್ರಗಳಿಗೆ ಚುನಾವಣೆ : ಯಾವ ಕ್ಷೇತ್ರದಲ್ಲಿ ಯಾರಿದ್ದರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

19

Fraud: ಬೆಳಪು; ಹಣ ಪಡೆದು ಕಾಯಿಲ್‌ ನೀಡದೆ ವಂಚನೆ; ದೂರು ದಾಖಲು

CBI ಏಜೆನ್ಸಿ ನಮ್ಮ ನಿಯಂತ್ರಣದಲ್ಲಿಲ್ಲ: ಸುಪ್ರೀಂಗೆ ಕೇಂದ್ರ ಮಾಹಿತಿ

CBI ಏಜೆನ್ಸಿ ನಮ್ಮ ನಿಯಂತ್ರಣದಲ್ಲಿಲ್ಲ: ಸುಪ್ರೀಂಗೆ ಕೇಂದ್ರ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.