![Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ](https://www.udayavani.com/wp-content/uploads/2024/07/shiruru-415x249.jpg)
Badminton: ಕಜಾಕ್ಸ್ಥಾನ ಚಾಲೆಂಜ್ ಬ್ಯಾಡ್ಮಿಂಟನ್
Team Udayavani, Apr 4, 2024, 11:12 PM IST
![Badminton: ಕಜಾಕ್ಸ್ಥಾನ ಚಾಲೆಂಜ್ ಬ್ಯಾಡ್ಮಿಂಟನ್](https://www.udayavani.com/wp-content/uploads/2024/04/36-620x372.jpg)
ಅಸ್ತಾನಾ: ಯುವ ಶಟ್ಲರ್ ಅನ್ಮೋಲ್ ಖಾರ್ಬ್ ಸಹಿತ ಭಾರತದ ಐವರು ಕಜಾಕ್ಸ್ಥಾನ ಇಂಟರ್ನ್ಯಾಶನಲ್ ಚಾಲೆಂಜ್ ಬ್ಯಾಡ್ಮಿಂಟನ್ ಕೂಟದ ವನಿತೆಯರ ವಿಭಾಗದಲ್ಲಿ ಕ್ವಾರ್ಟರ್ಫೈನಲ್ ಹಂತಕ್ಕೇರಿದ್ದಾರೆ.
ಅನ್ಮೋಲ್ ಅವರಲ್ಲದೇ ಉತ್ತಮ ಫಾರ್ಮ್ನಲ್ಲಿರುವ ದೇವಿಕಾ ಸಿಹಾಗ್, ಮಾಜಿ ರಾಷ್ಟ್ರೀಯ ಚಾಂಪಿಯನ್ ಅನುಪಮಾ ಉಪಧ್ಯಾಯ, ಏಳನೇ ಶ್ರೇಯಾಂಕದ ತನ್ಯಾ ಹೇಮಂತ್ ಮತ್ತು ಇಶಾರಾಣಿ ಬರೂಹ ಅವರು ಅಂತಿಮ ಎಂಟರ ಸುತ್ತಿಗೇರಿದ್ದಾರೆ.
ಹಾಲಿ ಸೀನಿಯರ್ ರಾಷ್ಟ್ರೀಯ ಚಾಂಪಿಯನ್ ಅನ್ಮೋಲ್ ಯುಎಇಯ ನುರಾನಿ ರತು ಅಝಾಹ್ರಾ ಅವರನ್ನು 21-11, 21-7 ಗೇಮ್ಗಳಿಂದ ಉರುಳಿಸಿ ಮುನ್ನಡೆದರು. 17ರ ಹರೆಯದ ಅನ್ಮೋಲ್ ಮುಂದಿನ ಸುತ್ತಿನಲ್ಲಿ ಜಪಾನಿನ ಸೋರಾನೊ ಯೋಶಿಕಾವಾ ಅವರನ್ನು ಎದುರಿಸಲಿದ್ದಾರೆ. ಅನ್ಮೋಲ್ ಅವರು ಕಳೆದ ಫೆಬ್ರವರಿಯಲ್ಲಿ ಭರಾತ ಬ್ಯಾಡ್ಮಿಂಟನ್ ಏಷ್ಯಾ ತಂಡ ಚಾಂಪಿಯ್ಶಿಪ್ನಲ್ಲಿ ಚಿನ್ನ ಗೆಲ್ಲಲು ದೊಡ್ಡ ಕೊಡುಗೆ ಸಲ್ಲಿಸಿದ್ದರು.
ಇಶಾರಾಣಿ ಎದುರಾಳಿ:
ಏಳನೇ ಶ್ರೇಯಾಂಕದ ತನ್ಯಾ ಇಸ್ರೇಲಿನ ಕ್ಸೆನಿಯಾ ಪೊಲಿಕರ್ಪೋವಾ ಅವರನ್ನು 21-11, 21-18 ಗೇಮ್ಗಳಿಂದ ಉರುಳಿ ಸಿದರು. ಅವರು ಮುಂದಿನ ಸುತ್ತಿನಲ್ಲಿ ಭಾರತದವರೇ ಆದ ಇಶಾರಾಣಿ ಬರೂಹ ಅವರನ್ನು ಎದುರಿಸಲಿದ್ದಾರೆ. ಇಶಾರಾಣಿ ಇನ್ನೊಂದು ಪಂದ್ಯದಲ್ಲಿ ನ್ಯೂಜಿಲ್ಯಾಂಡಿನ ಟಿಫಾನಿ ಹೊ ಅವರನ್ನು 21-10, 21-14 ಗೇಮ್ಗಳಿಂದ ಸೋಲಿಸಿದ್ದರು.
ಪುರುಷರ ವಿಭಾಗದಲ್ಲಿ ಭಾರತದ ರವಿ, ಭಾರತ್ ರಾಘವ್ ಮತ್ತು ತರುಣ್ ಮನ್ನೆಪಲ್ಲಿ ಅವರು ಕ್ವಾರ್ಟರ್ಫೈನಲಿಗೇರಿದರೆ ಡಬಲ್ಸ್ನಲ್ಲಿ ಮೋಹಿತ್ ಸಿಂಗ್ ಮತ್ತು ಕೆವಿನ್ ಚಾಂಗ್ ಹಾಗೂ ವನಿತೆಯರಲ್ಲಿ ಹರ್ಷಿತಾ ರಾವುತ್ ಮತ್ತು ಶ್ರುತಿ ಸ್ವಾಯಿನ್ ಅವರು ಕ್ವಾರ್ಟರ್ಫೈನಲ್ ಹಂತಕ್ಕೇರಿದ್ದಾರೆ.
ಟಾಪ್ ನ್ಯೂಸ್
![Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ](https://www.udayavani.com/wp-content/uploads/2024/07/shiruru-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ](https://www.udayavani.com/wp-content/uploads/2024/07/shiruru-150x90.jpg)
Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.