![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ಸಿಎಸ್ಕೆ ಜೆರ್ಸಿ ತೊಟ್ಟು ಧೋನಿ ಪತ್ನಿಯಿಂದ ಪ್ರತೀಕಾರ!
Team Udayavani, Apr 12, 2017, 3:22 PM IST
![SAKSHI.jpg](https://www.udayavani.com/wp-content/uploads/2017/04/12/SAKSHI-620x413.jpg)
ರಾಂಚಿ: ಕೆಲ ದಿನಗಳ ಹಿಂದಷ್ಟೇ ಎಂ.ಎಸ್. ಧೋನಿ ಅವರನ್ನು ಪುಣೆ ಸೂಪರ್ಜೈಂಟ್ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಆಸೀಸ್ನ ಸ್ಟೀವನ್ ಸ್ಮಿತ್ಗೆ ನಾಯಕತ್ವ ಪಟ್ಟ ನೀಡಲಾಗಿತ್ತು.
ಇದಾದ ಬಳಿಕ ಧೋನಿಗೆ ಪುಣೆ ತಂಡದ ಮಾಲಕ ಸಂಜೀವ ಗೋಯೆಂಕಾ ಸಹೋದರ ಹರ್ಷ್ ಗೋಯೆಂಕಾ ಅವಮಾನವಾಗುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟನೆಗಳನ್ನು ಹಾಕಿದ್ದರು. ಇದು ಈಗ ಧೋನಿ ಪತ್ನಿ ಸಾಕ್ಷಿಯನ್ನು ಕೆರಳಿಸಿದೆ. ಇದಕ್ಕೆಲ್ಲ ಪ್ರತೀಕಾರ ಎನ್ನುವಂತೆ ಐಪಿಎಲ್ನಿಂದ ಅಮಾನತಿನಲ್ಲಿರುವ ಸಿಎಸ್ಕೆ ತಂಡದ ಜೆರ್ಸಿ, ಹೆಲ್ಮೆಟ್ ತೊಟ್ಟು ಫೋಟೋಗೆ ಸಾಕ್ಷಿ ಫೋಸ್ ಕೊಟ್ಟಿದ್ದಾರೆ.
ಪುಣೆ ತಂಡ ಮುಂಬೈ ವಿರುದ್ಧ ಗೆದ್ದೊಡನೆ ಹರ್ಷ್ ಗೋಯೆಂಕಾ ಧೋನಿಗೆ ಅವಮಾನವಾಗುವ ರೀತಿಯಲ್ಲಿ ಟ್ವೀಟ್ ಮಾಡಿದ್ದರು. “ಸ್ಮಿತ್ ನೀವು ಕಿಂಗ್ ಆಫ್ ಜಂಗಲ್ ಯಾರು ಎನ್ನುವುದನ್ನು ನಿರೂಪಿಸಿದ್ದೀರಿ. ನಾಯಕತ್ವದಲ್ಲಿ ಧೋನಿಯ ಸಾಧನೆಗಳನ್ನು ಮಬ್ಬುಗವಿಯುಂತೆ ಮಾಡಿದ್ದೀರಿ’ ಎಂದಿದ್ದರು. ಪಂಜಾಬ್ ವಿರುದ್ಧ 2ನೇ ಪಂದ್ಯದಲ್ಲಿ ಪುಣೆ 6 ವಿಕೆಟ್ ಸೋಲು ಕಂಡಿತ್ತು. ಈ ಬೆನ್ನಲ್ಲೇ ಮತ್ತೂಮ್ಮೆ ಧೋನಿ ವಿರುದ್ಧ ಟ್ವಿಟರ್ನಲ್ಲಿ ಹರ್ಷ್ ಅವಮಾನವಾಗುವ ರೀತಿಯಲ್ಲಿ ಪ್ರಕಟನೆ ಹಾಕಿದ್ದರು.
ಹರ್ಷ್ 2ನೇ ಪ್ರಕಟನೆ ಹೊರಬರುತ್ತಿದ್ದಂತೆ ಸಾಕ್ಷಿ ಕೆರಳಿದ್ದಾರೆ. ತತ್ಕ್ಷಣ ಅವರು ಸಿಎಸ್ಕೆ ತಂಡದ ಜೆರ್ಸಿ, ಹೆಲ್ಮೆಟ್ ತೊಟ್ಟು ತನ್ನ ಫೋಟೋವೊಂದನ್ನು ಕ್ಲಿಕ್ಕಿಸಿ ಇನ್ಸ್ಟಾಗ್ರಾಮ್ನಲ್ಲಿ ಪ್ರಕಟಿಸಿದ್ದಾರೆ.
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.