![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-415x229.jpg)
India ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್; ಘೋಷಣೆಯಷ್ಟೇ ಬಾಕಿ
ಐಪಿಎಲ್ ಫ್ರಾಂಚೈಸಿಯೊಂದರ ಪ್ರಭಾವಿ ಮಾಲಕರಿಂದ ಮಾಹಿತಿ...
Team Udayavani, May 29, 2024, 6:58 AM IST
![1-w-eewqe](https://www.udayavani.com/wp-content/uploads/2024/05/1-w-eewqe-620x413.jpg)
ಮುಂಬಯಿ: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿ ದ್ದಾರೆ, ಅಧಿಕೃತ ಘೋಷಣೆಯಷ್ಟೇ ಬಾಕಿ ಎಂದು ಮೂಲಗಳು ಹೇಳಿವೆ. ಐಪಿಎಲ್ ಫ್ರಾಂಚೈಸಿಯೊಂದರ ಅತಿ ಪ್ರಭಾವಿ ಮಾಲಕರೊಬ್ಬರು ಈ ಮಾಹಿತಿ ನೀಡಿದ್ದಾರೆಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಫ್ರಾಂಚೈಸಿಯ ಪ್ರಭಾವಿ ಮಾಲಕ, “ಗೌತಮ್ ಗಂಭೀರ್ ಕೋಚ್ ಆಗುವ ಒಪ್ಪಂದ ನಡೆದಾಗಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ’ ಎಂದಿದ್ದಾರಂತೆ. ಹಾಗೆಯೇ ಪ್ರಭಾವಿ ವೀಕ್ಷಕ ವಿವರಣೆಕಾರರೊಬ್ಬರು ಕೋಲ್ಕತಾ ಮೆಂಟರ್ ಅನ್ನು ಒಳಕ್ಕೆ ತರಲು ಗಂಭೀರ ಯತ್ನ ಸಾಗಿದೆ ಎಂದಿದ್ದಾರೆ.
ಈಗಲೂ ವಿಷಯಕ್ಕೆ ಸಂಬಂಧಿಸಿ ದಂತೆ ಗಂಭೀರ ಮಾತುಕತೆಗಳು ನಡೆ ಯುತ್ತಿವೆ. ಹಲವಾರು ಆಯಾ ಮಗ ಳಲ್ಲಿ ಚರ್ಚೆ ನಡೆಯುತ್ತಿವೆ, ಆದ್ದ ರಿಂದಲೇ ಘೋಷಣೆ ತಡ ಆಗಿದೆ. ಬಿಸಿಸಿಐ- ಗಂಭೀರ್ ಮಾತ್ರವಲ್ಲ, ಇನ್ನೊ ಬ್ಬರೊಂದಿಗೂ ಮಾತುಕತೆ ನಡೆ ಸುತ್ತಿದೆ ಎನ್ನಲಾಗಿದೆ.
ಈ ಬಾರಿ ವೆಸ್ಟ್ ಇಂಡೀಸ್-ಟಿ20 ವಿಶ್ವಕಪ್ ಅಂತ್ಯಕ್ಕೆ ರಾಹುಲ್ ದ್ರಾವಿಡ್ ಅವರ ಅವಧಿ ಮುಗಿಯಲಿದೆ. ಮುಂದಿನ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಸೋಮವಾರವೇ ಗಡುವು ಮುಗಿದಿದೆ. ಈ ಹಿನ್ನೆಲೆಯಲ್ಲಿ ಹಲವಾರು ಹೆಸರು ಕೇಳಿ ಬರುತ್ತಿವೆ. ಈ ಪೈಕಿ ಗಂಭೀರ್ ಹೆಸರು ಮಾತ್ರ ಜೋರಾಗಿ ಕೇಳಿ ಬರುತ್ತಿದೆ. ಕೋಲ್ಕತಾ ಮೆಂಟರ್ ಆಗಿ ಅವರು ಈ ಬಾರಿ ಕಪ್ ಗೆಲ್ಲಿಸಿರುವುದು ಗಂಭೀರ್ ಬೆನ್ನಿಗೆ ನಿಂತಿದೆ.
ಟಾಪ್ ನ್ಯೂಸ್
![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-415x229.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.