![Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?](https://www.udayavani.com/wp-content/uploads/2024/07/Peacok1-415x215.jpg)
INDvsENG; ಐದನೇ ಟೆಸ್ಟ್ ಆಡುತ್ತಾರಾ ವಿರಾಟ್ ಕೊಹ್ಲಿ? ಇಲ್ಲಿದೆ ಪೂರ್ಣ ಮಾಹಿತಿ
Team Udayavani, Feb 22, 2024, 11:16 AM IST
![virat](https://www.udayavani.com/wp-content/uploads/2024/02/virat-2-620x342.jpg)
ಮುಂಬೈ: ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ವಿರಾಮ ಕೇಳಿದ್ದರು. ಆರಂಭದಲ್ಲಿ ಮೊದಲೆರಡು ಪಂದ್ಯಗಳಿಂದ ವಿರಾಮ ಕೇಳಿದ್ದ ವಿರಾಟ್ ಬಳಿಕ ಉಳಿದ ಮೂರು ಪಂದ್ಯಗಳಿಗೂ ಲಭ್ಯರಾಗುವುದಿಲ್ಲ ಎಂದು ಹೇಳಿದ್ದರು.
ಇದೀಗ ವಿರಾಟ್ ಅವರ ವೈಯಕ್ತಿಕ ರಜೆಯ ಹಿಂದಿನ ಕಾರಣ ಬಯಲಾಗಿದೆ. ವಿರಾಟ್- ಅನುಷ್ಕಾ ದಂಪತಿ ಎರಡನೇ ಮಗುವನ್ನು ಪಡೆದಿದ್ದಾರೆ. ಫೆ.15ರಂದು ಅನುಷ್ಕಾ ಎರಡನೇ ಮಗುವಿಗೆ ಜನ್ಮ ನೀಡಿದ್ದು, ಫೆ.20ರಂದು ವಿರಾಟ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
“ನಮ್ಮ ಹೃದಯವು ಸಂತೋಷ ಮತ್ತು ಪ್ರೀತಿಯಿಂದ ತುಂಬಿದೆ. ಫೆಬ್ರವರಿ 15 ರಂದು ನಾವು ನಮ್ಮ ಗಂಡು ಮಗು ಮತ್ತು ವಾಮಿಕಾಳ ಚಿಕ್ಕ ಸಹೋದರ ಅಕಾಯ್ ನನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ಎಲ್ಲರಿಗೂ ತಿಳಿಸಲು ನಾವು ಸಂತೋಷಪಡುತ್ತೇವೆ. ನಾವು ನಿಮ್ಮ ಆಶೀರ್ವಾದವನ್ನು ಮತ್ತು ನಮ್ಮ ಜೀವನದ ಈ ಸುಂದರ ಸಮಯದಲ್ಲಿ ಶುಭ ಹಾರೈಕೆಗಳನ್ನು ಬಯಸುತ್ತೇವೆ. ಈ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸುವಂತೆ ನಾವು ವಿನಂತಿಸುತ್ತೇವೆ” ಎಂದು ವಿರಾಟ್ ಮತ್ತು ಅನುಷ್ಕಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
— Virat Kohli (@imVkohli) February 20, 2024
ಸುದ್ದಿ ಪ್ರಕಟವಾದ ತಕ್ಷಣ, ಕೊಹ್ಲಿ ನಾಲ್ಕನೇ ಟೆಸ್ಟ್ಗೆ ಭಾರತ ತಂಡವನ್ನು ಸೇರಿಕೊಳ್ಳುವುದಿಲ್ಲ ಆದರೆ ಅವರು ಐದನೇ ಮತ್ತು ಅಂತಿಮ ಪಂದ್ಯವನ್ನು ಆಡಲು ಧರ್ಮಶಾಲಾಗೆ ಹಾರಲಿದ್ದಾರೆ ಎಂಬ ವದಂತಿಗಳು ಹರಡಿತ್ತು.
ತನ್ನ ತಂಡದ ಪ್ರಕಟಣೆಯ ಪತ್ರಿಕಾ ಪ್ರಕಟಣೆಯಲ್ಲಿ, ಬಿಸಿಸಿಐ ವೈಯಕ್ತಿಕ ಕಾರಣಗಳಿಂದ ಕೊನೆಯ ಮೂರು ಟೆಸ್ಟ್ ಗಳಿಗೆ ಸಹ ವಿರಾಟ್ ಲಭ್ಯವಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಅಲ್ಲದೆ ಈ ಸಮಯದಲ್ಲಿ ಕುಟುಂಬದೊಂದಿಗೆ ಇರುವ ಅವರ ನಿರ್ಧಾರವನ್ನು ಬಿಸಿಸಿಐ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದೆ ಮತ್ತು ಬೆಂಬಲಿಸುತ್ತದೆ ಎಂದು ಹೇಳಿಕೊಂಡಿದೆ.
ವರದಿಯ ಪ್ರಕಾರ ವಿರಾಟ್ ಕೊಹ್ಲಿ ಅವರು ಸದ್ಯ ಲಂಡನ್ ನಲ್ಲಿದ್ದಾರೆ. ಪತ್ನಿ ಮತ್ತು ನವಜಾತ ಶಿಶುವಿನೊಂದಿಗೆ ಕಾಲ ಕಳೆಯುವ ಕಾರಣ ವಿರಾಟ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡುವುದಿಲ್ಲ.
ಟಾಪ್ ನ್ಯೂಸ್
![Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?](https://www.udayavani.com/wp-content/uploads/2024/07/Peacok1-415x215.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?](https://www.udayavani.com/wp-content/uploads/2024/07/Peacok1-150x78.jpg)
Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?
![Protest across the state if Ramanagara name is changed: pramod muthalik](https://www.udayavani.com/wp-content/uploads/2024/07/muthalik-150x83.jpg)
Bengaluru South; ರಾಮನಗರ ಹೆಸರು ಬದಲಾಯಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಮುತಾಲಿಕ್ ಕಿಡಿ
![Nature:ವಿಶ್ವ ಪ್ರಕೃತಿ ಸಂರಕ್ಷಣ ದಿನ: ಪ್ರಕೃತಿ ಹೇಳುತ್ತಿದೆ…”ನೀ ನನಗಿದ್ದರೆ ನಾ ನಿನಗೆ ‘](https://www.udayavani.com/wp-content/uploads/2024/07/Nature1-150x84.jpg)
Nature:ವಿಶ್ವ ಪ್ರಕೃತಿ ಸಂರಕ್ಷಣ ದಿನ: ಪ್ರಕೃತಿ ಹೇಳುತ್ತಿದೆ…”ನೀ ನನಗಿದ್ದರೆ ನಾ ನಿನಗೆ ‘
![karch](https://www.udayavani.com/wp-content/uploads/2024/07/karch-150x83.jpg)
Forbes Adviser list; ಪಾಕಿಸ್ತಾನದ ಈ ನಗರ ಪ್ರವಾಸಿಗರಿಗೆ ಅತ್ಯಂತ ಅಪಾಯಕಾರಿ
![“ನೀನಲ್ಲದೆ ನನ್ನನ್ನು ಈ ವಿಪತ್ತಿನಿಂದ ಪಾರು ಮಾಡುವವರು ಯಾರು?’](https://www.udayavani.com/wp-content/uploads/2024/07/Honnudi-pic-1-150x95.jpg)
Desi Swara: ಹೊನ್ನುಡಿ- ಕೊಟ್ಟಿದ್ದೇ ಸಿಗುವುದು !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.