![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
Kenya: ವಿಶ್ವದಾಖಲೆಯ ಮ್ಯಾರಥಾನ್ ಓಟಗಾರ ಕೆಲ್ವಿನ್ ಕಿಪ್ಟಮ್ ಅಪಘಾತದಲ್ಲಿ ಸಾವು
24ರ ಹರೆಯದಲ್ಲಿ ಇಹದ ಓಟ ಮುಗಿಸಿದ ಕಿಪ್ಟಮ್
Team Udayavani, Feb 12, 2024, 2:48 PM IST
![Marathon world record holder Kelvin Kiptum passed away](https://www.udayavani.com/wp-content/uploads/2024/02/unnamed-file-620x342.jpg)
ನೈರೋಬಿ: ಭಾನುವಾರ ನೈರೋಬಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೀನ್ಯಾದ ವಿಶ್ವ ದಾಖಲೆಯ ಮ್ಯಾರಥಾನ್ ರನ್ನರ್ ಕೆಲ್ವಿನ್ ಕಿಪ್ಟಮ್ ಮತ್ತು ಅವರ ಕೋಚ್ ಸಾವನ್ನಪ್ಪಿದ್ದಾರೆ. ವಿಶ್ವದಾಖಲೆ ಮುರಿದು ಐದು ತಿಂಗಳು ಕಳೆಯುವಷ್ಟರಲ್ಲಿ ಕೆಲ್ವಿನ್ ಕಿಪ್ಟಮ್ ಇಹಲೋಕ ತ್ಯಜಿಸಿದ್ದಾರೆ.
ಕೇವಲ 24 ವರ್ಷ ವಯಸ್ಸಿನಲ್ಲಿ, ಕೆಲ್ವಿನ್ ಕಿಪ್ಟಮ್ ಅವರು ಈಗಾಗಲೇ ಕ್ರೀಡೆಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದರು. ಅಕ್ಟೋಬರ್ 8, 2023 ರಂದು ಚಿಕಾಗೊ ಮ್ಯಾರಥಾನ್ ನಲ್ಲಿ 2:00:35 ರ ಸಮಯದೊಂದಿಗೆ ಮ್ಯಾರಥಾನ್ ವಿಶ್ವ ದಾಖಲೆಯನ್ನು ಛಿದ್ರಗೊಳಿಸಿ ಹೊಸ ದಾಖಲೆ ಬರೆದಿದ್ದರು. ಅವರ ಅಕಾಲಿಕ ಮರಣದ ಒಂದು ವಾರದ ಮೊದಲು ಈ ಅದ್ಭುತ ಸಾಧನೆಯನ್ನು ವಿಶ್ವ ಅಥ್ಲೆಟಿಕ್ಸ್ ಅನುಮೋದಿಸಿತ್ತು.
ಕೆಲ್ವಿನ್ ಕಿಪ್ಟಮ್ ಅವರ ರಸ್ತೆ ಅಪಘಾತವು ಎಲ್ಡೋರೆಟ್ ನ ರಿಫ್ಟ್ ವ್ಯಾಲಿ ಪಟ್ಟಣದ ಬಳಿ ತಡರಾತ್ರಿ ಸಂಭವಿಸಿದೆ. ಈ ಪ್ರದೇಶವು ವಿಶ್ವದ ಕೆಲವು ಅತ್ಯುತ್ತಮ ದೂರದ ಓಟಗಾರರನ್ನು ಪರಿಚಯಿಸಿದ ಕಾರಣದಿಂದ ಹೆಸರುವಾಸಿಯಾಗಿದೆ.
ಅವರು ಟೊಯೊಟಾ ಪ್ರೀಮಿಯೊವನ್ನು ಚಲಾಯಿಸುತ್ತಿದ್ದಾಗ ವಾಹನದ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯಿಂದ ಆಚೆಗೆ ತಿರುಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಿಪ್ಟಮ್ ಜತೆಗೆ ಅವರ ರುವಾಂಡನ್ ತರಬೇತುದಾರ ಗೆರ್ವೈಸ್ ಹಕಿಝಿಮಾನ ಕೂಡಾ ಮೃತಪಟ್ಟಿದ್ದಾರೆ. ಶರೋನ್ ಕೊಸ್ಗೆ ಎಂಬ ಮಹಿಳಾ ಪ್ರಯಾಣಿಕರು ಅಪಘಾತದಲ್ಲಿ ಬದುಕುಳಿದರು ಆದರೆ ಗಂಭೀರವಾದ ಗಾಯಗಳಿಗೆ ಒಳಗಾಗಿದ್ದಾರೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.