![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಕ್ರೈಸ್ತರಾಗಿದ್ದ ಯೂಸುಫ್ ಮತಾಂತರಗೊಂಡಿದ್ದೇಕೆ?: ಸಾಮಾಜಿಕ ತಾಣದಲ್ಲಿ ವ್ಯಂಗ್ಯ
Team Udayavani, Dec 29, 2019, 4:18 PM IST
![kane](https://www.udayavani.com/wp-content/uploads/2019/12/kane-620x315.jpg)
ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ತಾನು ಹಿಂದೂವೆಂಬ ಕಾರಣಕ್ಕೆ ತಾರತಮ್ಯ ಮಾಡಲಾಗಿತ್ತು ಎಂಬ ದಾನಿಶ್ ಕನೇರಿಯ ಹೇಳಿಕೆ ವಿವಾದ ಮುಂದುವರಿದಿದೆ.
ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್ ಪ್ರತಿಕ್ರಿಯಿಸಿ, ತಾನು ಯಾವತ್ತೂ ಪಾಕ್ ತಂಡದಲ್ಲಿ ಅಂತಹ ಘಟನೆ ನಡೆದಿದ್ದನ್ನು ನೋಡಲಿಲ್ಲ. ಇದು ಸುಳ್ಳು ಎಂದು ಹೇಳಿದ್ದಾರೆ. ಇದರ ವಿರುದ್ಧ ಸಾಮಾಜಿಕ ಜಾಲತಾಣಿಗರು ಹರಿಹಾಯ್ದಿದ್ದಾರೆ. ಹಾಗಿದ್ದರೆ ಕ್ರೈಸ್ತರಾಗಿದ್ದ ಮೊಹಮ್ಮದ್ ಯೂಸುಫ್, ಮುಸ್ಲಿಮನಾಗಿ ಮತಾಂತರ ಗೊಂಡಿದ್ದೇಕೆ ಎಂದು ವ್ಯಂಗ್ಯವಾಡಿದ್ದಾರೆ.
ವಾಸ್ತವವಾಗಿ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆದಿದ್ದ, ಕೆಲವೇ ಕೆಲವು ಕ್ರೈಸ್ತರಲ್ಲಿ ಯೂಸುಫ್ ಕೂಡ ಒಬ್ಬರಾಗಿದ್ದರು. ಆಗ ಅವರ ಹೆಸರು ಯೂಸುಫ್ ಯೊಹಾನ ಎಂದಾಗಿತ್ತು. ಕಾಲಕ್ರಮೇಣ ಅವರು ಇಸ್ಲಾಂಗೆ ಮತಾಂತರಗೊಂಡು, ಮೊಹ ಮ್ಮದ್ ಯೂಸುಫ್ ಎಂದು ಹೆಸರು ಬದಲಾಯಿಸಿ ಕೊಂಡಿದ್ದರು. ಇನ್ನು ಟ್ವೀಟಿಗರು ಬಗೆಬಗೆಯಾಗಿ ಅಣಕಿಸಿದ್ದಾರೆ.
ಅವು ಹೀಗಿವೆ…
-ಹೌದು ಮೊಹಮ್ಮದ್ ಯೂಸುಫ್ಗೆ ಯಾವತ್ತೂ ಪಾಕ್ ತಂಡದಲ್ಲಿ ತಾರತಮ್ಯ ಮಾಡಲಿಲ್ಲ. ಅದೆಲ್ಲ ಆಗಿದ್ದು ಯೂಸುಫ್ಯೊ ಹಾನಗೆ.
-ಮುಸ್ಲಿಂ ಕ್ರಿಕೆಟಿಗರಿಂದ ವಿಪರೀತ ಕಿರುಕುಳಕ್ಕೊಳಗಾದ ಕಾರಣಕ್ಕೇ ಪಾಕಿಸ್ತಾನದ ಆ ಕ್ರೈಸ್ತ ವ್ಯಕ್ತಿ ಮತಾಂತರ ಗೊಂಡರು. ಈಗವರು ಪಾಕಿಸ್ತಾನವನ್ನು ಬೆಂಬಲಿಸುತ್ತಾರೆ, ಕಾರಣ ಈಗವರು ಕ್ರೈಸ್ತರಲ್ಲ. ಗೊತ್ತಾಯ್ತ?
ಹಣಕ್ಕಾಗಿ ಕನೇರಿಯ ಏನು ಬೇಕಾದರೂ ಮಾತಾಡುತ್ತಾರೆ ಹಣಕ್ಕಾಗಿ ಕನೇರಿಯ ಏನು ಬೇಕಾದರೂ ಮಾತನಾಡುತ್ತಾರೆ ಎಂದು ಪಾಕಿಸ್ತಾನದ ಮಾಜಿ ನಾಯಕ ಜಾವೆದ್ ಮಿಯಾಂದಾದ್ ಕಿಡಿಕಾರಿದ್ದಾರೆ. ಕನೇರಿಯರಲ್ಲಿ ಕ್ರಿಕೆಟ್ ಆಡುವ ಯಾವುದೇ ಶಕ್ತಿಯೂ ಉಳಿದಿಲ್ಲ. ಮ್ಯಾಚ್ ಫಿಕ್ಸಿಂಗ್ ಮಾಡಿ ದೇಶದ ಮಾನಹ ರಾಜು ಹಾಕಿದ್ದಾರೆ. ಪಾಕಿಸ್ತಾನ ಅವರಿಗೆ ಎಲ್ಲವನ್ನೂ ನೀಡಿದೆ. ಪಾಕ್ ಪರ ಅವರು 10 ವರ್ಷ ಕ್ರಿಕೆಟ್ ಆಡಿದ್ದಾರೆ. ಧಾರ್ಮಿಕ ತಾರತಮ್ಯ ಇದ್ದಿದ್ದರೆ ಇದು ಸಾಧ್ಯವಿತ್ತೇ? ಎಂದು ಮಿಯಾಂದಾದ್ ಪ್ರಶ್ನಿಸಿದ್ದಾರೆ
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.