Pro Kabaddi ಸೀಸನ್‌ ನಂ.10: ಕಾಲೆಳೆಯುವ ಆಟಕ್ಕೆ ‘ಕ್ಯಾರವಾನ್‌’ ಲುಕ್‌


Team Udayavani, Dec 2, 2023, 6:20 AM IST

1-dasddsa

ಅಹ್ಮದಾಬಾದ್‌: ಮತ್ತೆ ದೇಶದಲ್ಲಿ ಕಬಡ್ಡಿ ಹವಾ ಬೀಸಲಾರಂಭಿಸಿದೆ. ಡಿ. 2ರ ಶನಿವಾರದಿಂದ ಮೊದಲ್ಗೊಂಡು ಫೆಬ್ರವರಿ ಕೊನೆಯ ತನಕ ಬರೋಬ್ಬರಿ 3 ತಿಂಗಳ ಕಾಲ 10ನೇ ಪ್ರೊ ಕಬಡ್ಡಿ ಸೀಸನ್‌ ಸಾಗಲಿದೆ. ವಿಶ್ವಕಪ್‌ ಕೈತಪ್ಪಿದ ಹತಾಶೆಯಲ್ಲಿರುವವರಿಗೆ ಈ ಕಾಲೆಳೆಯುವ ಆಟ ಭಾರೀ ಮೋಜು ನೀಡುವುದರಲ್ಲಿ ಅನುಮಾನವಿಲ್ಲ.
ಈ ಬಾರಿಯಿಂದ ಮತ್ತೆ “ಕ್ಯಾರವಾನ್‌’ ಮಾದರಿಗೆ ಮರಳಿದ್ದು ಪ್ರೊ ಕಬಡ್ಡಿಯ ಆಕರ್ಷಣೆ ಹಾಗೂ ಹೆಚ್ಚುಗಾರಿಕೆ. ಕೋವಿಡ್‌ ಮುಗಿದ ಬಳಿಕ ಕೆಲವೇ ಕೇಂದ್ರಗಳಿಗೆ ಸೀಮಿತಗೊಂಡಿದ್ದ ಕಬಡ್ಡಿ ಪಂದ್ಯಗಳು ಈ ಸಲದಿಂದ ಎಲ್ಲ 12 ಫ್ರಾಂಚೈಸಿಗಳ ಕೇಂದ್ರದಲ್ಲೂ ನಡೆಯಲಿವೆ. ಹೀಗಾಗಿ ಕಬಡ್ಡಿ ಪ್ರಿಯರ ಸಂಭ್ರಮ ದೇಶವ್ಯಾಪಿಯಾಗಲಿದೆ.

ಈ 12 ಕೇಂದ್ರಗಳೆಂದರೆ ಅಹ್ಮದಾಬಾದ್‌, ಬೆಂಗಳೂರು, ಚೆನ್ನೈ, ಹೈದರಾಬಾದ್‌, ಹೊಸದಿಲ್ಲಿ, ಜೈಪುರ, ಕೋಲ್ಕತಾ, ಮುಂಬಯಿ, ನೋಯ್ಡಾ, ಪಾಟ್ನಾ, ಪಂಚಕುಲ ಮತ್ತು ಪುಣೆ.

ದಿನಂಪ್ರತಿ 2 ಪಂದ್ಯಗಳು ಪ್ರೇಕ್ಷಕರನ್ನು ರಂಜಿಸಲಿವೆ. ಮೊದಲ ಪಂದ್ಯ ರಾತ್ರಿ 8 ಗಂಟೆಗೆ, ದ್ವಿತೀಯ ಪಂದ್ಯ ರಾತ್ರಿ 9 ಗಂಟೆಗೆ ಆರಂಭವಾಗಲಿದೆ. ಸ್ಟಾರ್‌ ನ್ಪೋರ್ಟ್ಸ್ನಲ್ಲಿ ಪಂದ್ಯಗಳು ನೇರ ಪ್ರಸಾರ ಕಾಣಲಿವೆ.

ಉದ್ಘಾಟನ ಪಂದ್ಯ
ಈವರೆಗೆ ಪ್ರಶಸ್ತಿ ಎತ್ತಲು ವಿಫ‌ಲವಾದ ಗುಜರಾತ್‌ ಜೈಂಟ್ಸ್‌ ಮತ್ತು ತೆಲುಗು ಟೈಟಾನ್ಸ್‌ ತಂಡಗಳು ಶನಿವಾರದ ಉದ್ಘಾಟನ ಪಂದ್ಯದಲ್ಲಿ ಪರಸ್ಪರ ಎದುರಾಗಲಿವೆ. ಅಂತಾರಾಷ್ಟ್ರೀಯ ಮಟ್ಟದ ಸ್ಟಾರ್‌ ಆಟಗಾರರಾದ ಫ‌ಜಲ್‌ ಅಟ್ರಾಚಲಿ ಮತ್ತು ಪವನ್‌ ಸೆಹ್ರಾವತ್‌ ಈ ತಂಡಗಳನ್ನು ಮುನ್ನಡೆಸಲಿದ್ದಾರೆ. ಹೀಗಾಗಿ 10ನೇ ಸೀಸನ್‌ನ ಆರಂಭಿಕ ಪಂದ್ಯವೇ ಹೆಚ್ಚು ರೋಚಕವಾಗಿ ಸಾಗುವ ಸಾಧ್ಯತೆ ಇದೆ.

ಚಾಂಪಿಯನ್‌ ತಂಡಗಳು
ಸೀಸನ್‌-1 ಜೈಪುರ್‌ ಪಿಂಕ್‌ ಪ್ಯಾಂಥರ್
ಸೀಸನ್‌-2 ಯು ಮುಂಬಾ
ಸೀಸನ್‌-3 ಪಾಟ್ನಾ ಪೈರೇಟ್ಸ್‌
ಸೀಸನ್‌-4 ಪಾಟ್ನಾ ಪೈರೇಟ್ಸ್‌
ಸೀಸನ್‌-5 ಪಾಟ್ನಾ ಪೈರೇಟ್ಸ್‌
ಸೀಸನ್‌-6 ಬೆಂಗಳೂರು ಬುಲ್ಸ್‌
ಸೀಸನ್‌-7 ಬೆಂಗಾಲ್‌ ವಾರಿಯರ್
ಸೀಸನ್‌-8 ದಬಾಂಗ್‌ ಡೆಲ್ಲಿ
ಸೀಸನ್‌-9 ಜೈಪುರ್‌ ಪಿಂಕ್‌ ಪ್ಯಾಂಥರ್

ಪ್ರೊ ಕಬಡ್ಡಿ: 10 ತಾಣಗಳು
1 ಅಹ್ಮದಾಬಾದ್‌: ಡಿ. 2-7
2 ಬೆಂಗಳೂರು: ಡಿ. 8-13
3 ಪುಣೆ: ಡಿ. 15-20
4 ಚೆನ್ನೈ: ಡಿ. 22-27
5 ನೋಯ್ಡಾ: ಡಿ. 29-ಜ. 3
6 ಮುಂಬಯಿ: ಜ. 5-10
7 ಜೈಪುರ: ಜ. 12-17
8 ಹೈದರಾಬಾದ್‌: ಜ. 19-24
9 ಪಾಟ್ನಾ: ಜ. 26-31
10 ಹೊಸದಿಲ್ಲಿ: ಫೆ. 2-7
11 ಕೋಲ್ಕತಾ: ಫೆ. 9-14
12 ಪಂಚಕುಲ: ಫೆ. 16-21

ಅಹ್ಮದಾಬಾದ್‌ ಪಂದ್ಯಗಳ ವೇಳಾಪಟ್ಟಿ
ದಿನಾಂಕ ಪಂದ್ಯ ಆರಂಭ
ಡಿ. 2 ಗುಜರಾತ್‌-ಟೈಟಾನ್ಸ್‌ ರಾ. 8.00
ಡಿ. 2 ಮುಂಬಾ-ಯೋಧಾಸ್‌ ರಾ. 9.00
ಡಿ. 3 ತಮಿಳ್‌-ಡೆಲ್ಲಿ ರಾ. 8.00
ಡಿ. 3 ಗುಜರಾತ್‌-ಬೆಂಗಳೂರು ರಾ. 9.00
ಡಿ. 4 ಪುನೇರಿ-ಜೈಪುರ್‌ ರಾ. 8.00
ಡಿ. 4 ಬೆಂಗಳೂರು-ಬೆಂಗಾಲ್‌ ರಾ. 9.00
ಡಿ. 5 ಗುಜರಾತ್‌-ಮುಂಬಾ ರಾ. 8.00
ಡಿ. 6 ಟೈಟಾನ್ಸ್‌-ಪಾಟ್ನಾ ರಾ. 8.00
ಡಿ. 6 ಯೋಧಾಸ್‌-ಹರ್ಯಾಣ ರಾ. 9.00
ಡಿ. 7 ಬೆಂಗಾಲ್‌-ಜೈಪುರ್‌ ರಾ. 8.00
ಡಿ. 7 ಗುಜರಾತ್‌-ಪಾಟ್ನಾ ರಾ. 9.00

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

IPL ಮುಂಬೈ ಇಂಡಿಯನ್ಸ್‌ ತಂಡಕ್ಕೆ ದಂಡ: ಹಾರ್ದಿಕ್‌ಗೆ ನಿಷೇಧ ಭೀತಿ

IPL ಮುಂಬೈ ಇಂಡಿಯನ್ಸ್‌ ತಂಡಕ್ಕೆ ದಂಡ: ಹಾರ್ದಿಕ್‌ಗೆ ನಿಷೇಧ ಭೀತಿ

IPL ಮಾಯಾಂಕ್‌ಗೆ ಮತ್ತೆ ಗಾಯ: ಮುಂದಿನ ಪಂದ್ಯಗಳಿಗೆ ಅಲಭ್ಯ?

IPL ಮಾಯಾಂಕ್‌ಗೆ ಮತ್ತೆ ಗಾಯ: ಮುಂದಿನ ಪಂದ್ಯಗಳಿಗೆ ಅಲಭ್ಯ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.