ತಮಿಳುನಾಡು ತಂಡದಲ್ಲಿ ಅಶ್ವಿನ್, ಮುರಳಿ ವಿಜಯ್
Team Udayavani, Feb 2, 2018, 6:15 AM IST
ಚೆನ್ನೈ: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗಾಗಿ ಪ್ರಕಟಿಸಲಾದ ತಮಿಳುನಾಡು ತಂಡದಲ್ಲಿ ಸ್ಪಿನ್ನರ್ ಆರ್. ಅಶ್ವಿನ್ ಮತ್ತು ಆರಂಭಕಾರ ಮುರಳಿನ ವಿಜಯ್ ಸ್ಥಾನ ಪಡೆದಿದ್ದಾರೆ. ಇವರಿಬ್ಬರೂ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಾದ ಭಾರತದ ಟೆಸ್ಟ್ ತಂಡದಲ್ಲಿದ್ದರು.
ತಮಿಳುನಾಡು ತಂಡವನ್ನು ಆಲ್ರೌಂಡರ್ ವಿಜಯ್ ಶಂಕರ್ ಮುನ್ನಡೆಸಲಿದ್ದಾರೆ. ರಣಜಿ ಪಂದ್ಯಾವಳಿಯಲ್ಲಿ ತಂಡದ ನಾಯಕನಾಗಿದ್ದ ಅಭಿನವ್ ಮುಕುಂದ್ ಗಾಯಾಳಾಗಿದ್ದು, ವಿಶ್ರಾಂತಿಯಲ್ಲಿದ್ದಾರೆ. ಹಾಗೆಯೇ ಭಾರತ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಅನುಭವಿ ಕೀಪರ್ ದಿನೇಶ್ ಕಾರ್ತಿಕ್ ತಮಿಳುನಾಡು ಸೇವೆಗೆ ಲಭಿಸುತ್ತಿಲ್ಲ.”ಸಿ’ ವಿಭಾಗದಲ್ಲಿರುವ ತಮಿಳುನಾಡು ತಂಡ ತನ್ನ ಮೊದಲ ಪಂದ್ಯವನ್ನು ಫೆ. 5ರಂದು ಗುಜರಾತ್ ವಿರುದ್ಧ ಆಡಲಿದೆ.
ತಮಿಳುನಾಡು ತಂಡ: ವಿಜಯ್ ಶಂಕರ್ (ನಾಯಕ), ಬಾಬಾ ಅಪರಾಜಿತ್, ಆರ್. ಅಶ್ವಿನ್, ಮುರಳಿ ವಿಜಯ್, ಎಂ. ಕೌಶಿಕ್ ಗಾಂಧಿ, ವಾಷಿಂಗ್ಟನ್ ಸುಂದರ್, ಜಿ. ಶ್ರೀಧರ್ ರಾಜು, ಬಿ. ಅನಿರುದ್ಧ ಸೀತಾರಾಮ್, ಎನ್. ಜಗದೀಶನ್, ಕೆ. ವಿಘ್ನೇಶ್, ವಿ. ಯೋಮಹೇಶ್, ಅಶ್ವಿನ್ ಕ್ರಿಸ್ಟ್, ಜೆ. ಕೌಶಿಕ್, ಆರ್. ಸಾಯಿ ಕಿಶೋರ್, ರಾಹಿಲ್ ಶಾ, ಎಂ. ಅಭಿನವ್.