![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
ರಸ್ತೆ ಅಪಘಾತ: ಖ್ಯಾತ ಈಜುಪಟು ಬಾಲಕೃಷ್ಣ ಸಾವು
Team Udayavani, May 17, 2019, 6:00 AM IST
![RoAD-a](https://www.udayavani.com/wp-content/uploads/2019/05/RoAD-a-620x408.jpg)
ಚೆನ್ನೈ: ಭಾರತದ ಖ್ಯಾತ ಈಜುಪಟು, ತಮಿಳುನಾಡಿನ ಎಂ.ಬಿ.ಬಾಲಕೃಷ್ಣ ಅವರು ರಸ್ತೆ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. 29 ವರ್ಷದ ನುರಿತ ಬ್ಯಾಕ್ಸ್ಟ್ರೋಕ್ ಈಜುಪಟುವಾಗಿದ್ದ ಬಾಲಕೃಷ್ಣ, ದ್ವಿಚಕ್ರ ವಾಹನದಲ್ಲಿ ತಮ್ಮ ನಿವಾಸಕ್ಕೆ ತೆರಳುವ ವೇಳೆ ನಿಯಂತ್ರಣ ತಪ್ಪಿ ನೇರವಾಗಿ ಲಾರಿ ಚಕ್ರಕ್ಕೆ ಸಿಲುಕಿ ಮೃತರಾದರೆಂದು ಪೊಲೀಸರು ತಿಳಿಸಿದ್ದಾರೆ.
ಢಾಕಾ ಏಷ್ಯಾ ಕ್ರೀಡಾಕೂಟದಲ್ಲಿ 100 ಮೀ. ಮತ್ತು 200 ಮೀ. ಸ್ಪರ್ಧೆಯಲ್ಲಿ ಬಂಗಾರ ಪದಕ ಗೆದ್ದ ಬಾಲಕೃಷ್ಣ, 50 ಮೀ.ನಲ್ಲಿ ರಾಷ್ಟ್ರೀಯ ದಾಖಲೆಯನ್ನೂ ಸ್ಥಾಪಿಸಿದ್ದರು. ಅಮೆರಿಕದಲ್ಲಿ ಎಂ.ಎಸ್. ಪೂರ್ಣಗೊಳಿಸಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಬಾಲಕೃಷ್ಣ, ರಜಾ ಸಮಯ ಕಳೆಯಲು ಚೆನ್ನೈಗೆ ಬಂದಿದ್ದರು. ಬಾಲಕೃಷ್ಣರ ದುರಂತ ಸಾವಿನ ಸುದ್ದಿ ತಿಳಿದು ಬಹಳ ಆಘಾತವಾಗಿದೆ ಎಂದು ಕೋಚ್ ಟಿ. ಚಂದ್ರಶೇಖರನ್ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.