![Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ](https://www.udayavani.com/wp-content/uploads/2024/07/shiruru-415x249.jpg)
18 ಸಾವಿರ ಕೋಟಿ ರೂ.ಗೆ ಏರಲಿದೆ ಐಪಿಎಲ್ ನೇರ ಪ್ರಸಾರ ಹಕ್ಕು?
Team Udayavani, Feb 13, 2017, 3:45 AM IST
![IPL.jpg](https://www.udayavani.com/wp-content/uploads/2017/02/12/IPL-620x349.jpg)
ಮುಂಬಯಿ: ಐಪಿಎಲ್ 10ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಈ ಬೆನ್ನಲ್ಲೇ ಮುಂಬರುವ ಆವೃತ್ತಿಗಳ ನೇರ ಪ್ರಸಾರ ಹಕ್ಕನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಪ್ರತಿಷ್ಠಿತ ಟಿವಿ ಸಂಸ್ಥೆಗಳಿಗೆ ಕಹಿ ಸುದ್ದಿಯೊಂದು ಪ್ರಕಟವಾಗಿದೆ.
2018ರಲ್ಲಿ ಮುಂದಿನ 10 ವರ್ಷದ ಐಪಿಎಲ್ ಟಿವಿ ನೇರ ಪ್ರಸಾರದ ಹಕ್ಕಿಗಾಗಿ ಪರಿಷ್ಕೃತ ಬಿಡ್ಡಿಂಗ್ ನಡೆಯಲಿದೆ. ಇದೇ ವೇಳೆ ಆನ್ಲೈನ್ ಪ್ರಸಾರದ ಹಕ್ಕುಗಳಿಗೂ ಬಿಡ್ಡಿಂಗ್ ನಡೆಯಲಿದೆ. ಆನ್ಲೈನ್ ಒಪ್ಪಂದ ಅವಧಿ 4 ವರ್ಷದ್ದು ಆಗಿರುತ್ತದೆ. ಇದೆಲ್ಲದರ ಒಟ್ಟು ಆದಾಯ ಸೇರಿ 18 ರಿಂದ 30 ಸಾವಿರ ಕೋಟಿ ರೂ. ಮೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ವತಃ ಬಿಸಿಸಿಐ ಮೂಲಗಳು ಈ ವಿಷಯವನ್ನು ಮಾಧ್ಯಮಗಳಿಗೆ ಖಚಿತಪಡಿಸಿವೆ.
ಹೆಚ್ಚಳಕ್ಕೆ ಕಾರಣವೇನು?: ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿಗಳು ಮಾಡಿಕೊಂಡಿದ್ದ ಬಿಗ್ ಥ್ರಿà ನೀತಿಗೆ ಇತ್ತೀಚೆಗೆ ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಕೊಕ್ ನೀಡಿತ್ತು. ಇದರಿಂದ ಬಿಸಿಸಿಐಗೆ ಸಾಕಷ್ಟು ಆರ್ಥಿಕ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಇದೆಲ್ಲದರ ಪರಿಣಾಮ ಮುಂದಿನ ಆವೃತ್ತಿ ಟಿವಿ ಪ್ರಸಾರದ ಹಕ್ಕುಗಳಲ್ಲಿ ಕೋಟ್ಯಂತರ ರೂ. ಏರಿಕೆ ಕಾಣಲು ಕಾರಣವಾಗಿದೆ. ನೇರ ಪ್ರಸಾರದ ಹಕ್ಕುಗಳಿಂದ ಬರುವ ಆದಾಯದಲ್ಲಿ ಬಿಸಿಸಿಐಗೆ ಸಾಕಷ್ಟು ಆರ್ಥಿಕ ಹರಿವು ಆಗಲಿದೆ ಎಂದು ಅಂದಾಜಿಸಲಾಗಿದೆ.
ಈ ಆವೃತ್ತಿಗೆ ಸೋನಿ ನೆಟ್ವರ್ಕ್ ಒಪ್ಪಂದ ಅಂತ್ಯ: ಕಳೆದ 10 ವರ್ಷಗಳಿಂದ ಐಪಿಎಲ್ ಪ್ರಸಾರದ ಹಕ್ಕನ್ನು ಸೋನಿ ಪಿಕ್ಚರ್ ನೆಟ್ವರ್ಕ್ ಇಂಡಿಯಾ (ಎಸ್ಪಿಎನ್ಐ) ಪಡೆದುಕೊಂಡಿತ್ತು. ಒಪ್ಪಂದ ಪ್ರಕಾರ 2017ಕ್ಕೆ ಅವಧಿ ಅಂತ್ಯಗೊಳ್ಳಲಿದೆ. ಹೊಸ ಬಿಡ್ಡಿಂಗ್ಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಅಕ್ಟೋಬರ್ 25ರೊಳಗೆ ಅರ್ಜಿ ಸಲ್ಲಿಸಲು ಆಸಕ್ತ ಟಿವಿ ಸಂಸ್ಥೆಗಳಿಗೆ ಕಾಲಾವಕಾಶವಿದೆ.
ಟಾಪ್ ನ್ಯೂಸ್
![Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ](https://www.udayavani.com/wp-content/uploads/2024/07/shiruru-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ](https://www.udayavani.com/wp-content/uploads/2024/07/shiruru-150x90.jpg)
Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.