4 ವರ್ಷದ ಬಳಿಕ ಕ್ರಿಕೆಟ್ ಆಡಿದ ಎಸ್. ಶ್ರೀಶಾಂತ್
Team Udayavani, Aug 16, 2017, 11:23 AM IST
ಕೊಚ್ಚಿ: ಎಸ್. ಶ್ರೀಶಾಂತ್ 4 ವರ್ಷಗಳ ಬಳಿಕ ಮೊದಲ ಬಾರಿಗೆ ಕ್ರಿಕೆಟ್ ಆಡಿದ್ದಾರೆ. ಸ್ವಾತಂತ್ರ್ಯ ದಿನದ ಸಂಭ್ರಮದ ವೇಳೆ ಮಂಗಳ ವಾರ ಕೊಚ್ಚಿಯಲ್ಲಿ ಸಿಂಗರ್ ಇಲೆವೆನ್ ತಂಡದ ಪರ ಆಡಿದರು. ಅಷ್ಟೇ ಅಲ್ಲ, ಪ್ರೊಡ್ಯುಸರ್ ಇಲೆವೆನ್ ತಂಡದ ವಿರುದ್ಧ ನಾಯಕರಾಗಿ ತಂಡವನ್ನು ಮುನ್ನಡೆಸಿದರು.
ಪಂದ್ಯದ ಬಳಿಕ ಶ್ರೀಶಾಂತ್ ಮಾತನಾಡಿದ ಶ್ರೀಶಾಂತ್, “ಮತ್ತೆ ಕ್ರಿಕೆಟ್ ಆಡಿರುವುದು ಸಂತಸದ ವಿಷಯ. ಮತ್ತೆ ಭಾರತ ತಂಡವನ್ನು ಪ್ರತಿನಿಧಿಸುವ ವಿಶ್ವಾಸವಿದೆ’ ಎಂದರು. 2013ರಲ್ಲಿ ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಮೊದಲು ಜೈಲು ಶಿಕ್ಷೆ ಅನುಭವಿಸಿದ್ದರು. ಅನಂತರ ಅವರನ್ನು ಬಿಸಿಸಿಐ ಆಜೀವ ನಿಷೇಧಗೊಳಿಸಿತ್ತು. ಕಳೆದ ವರ್ಷ ದಿಲ್ಲಿ ಅಧೀನ ನ್ಯಾಯಾಲಯ ಇವರನ್ನು ನಿರಪರಾಧಿ ಎಂದು ಘೋಷಿಸಿತ್ತು. ಆ ಬಳಿಕವೂ ಬಿಸಿಸಿಐ ಇವರನ್ನು ನಿರಪರಾಧಿ ಎಂದು ಪರಿಗಣಿಸಿರಲಿಲ್ಲ. ನಿಷೇಧವನ್ನು ಹಿಂದಕ್ಕೆ ತೆಗೆದುಕೊಂಡಿರಲಿಲ್ಲ.
ಇದನ್ನು ಕೇರಳ ಹೈಕೋರ್ಟ್ನಲ್ಲಿ ಶ್ರೀಶಾಂತ್ ಪ್ರಶ್ನಿಸಿದ್ದರು. ಈಗ ಕೇರಳ ಹೈಕೋರ್ಟ್ ಇವರನ್ನು ದೋಷಮುಕ್ತರನ್ನಾಗಿ ಮಾಡಿದ್ದರೂ ಬಿಸಿಸಿಐ ಮಾತ್ರ ಇವರ ಶಿಕ್ಷೆಯನ್ನು ಇನ್ನೂ ತೆರವುಗೊಳಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ
IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್ಗಳ ಜಯ
IPL: ಪ್ಲೇ ಆಫ್ ರೇಸ್ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್ ಬೌಲರ್
RCB ವೆಂಟಿಲೇಟರ್ ಆಫ್ ಮಾಡಲಾಗಿದೆ, ಆದರೂ ಐಸಿಯುನಲ್ಲಿದೆ: ಅಜಯ್ ಜಡೇಜಾ
ICC ಚಾಂಪಿಯನ್ಸ್ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್ನ ರಶೀದ್ ಲತೀಫ್