ಸ್ಯಾಮ್ಸನ್‌ ಸೆಂಚುರಿ; ಡೆಲ್ಲಿ ಜಯಭೇರಿ


Team Udayavani, Apr 12, 2017, 3:47 PM IST

delhi.jpg

ಪುಣೆ: ಸಂಜು ಸ್ಯಾಮ್ಸನ್‌ ಅವರ ಪ್ರಚಂಡ ಶತಕ ಸಾಹಸದಿಂದ ಪುಣೆ ವಿರುದ್ಧ ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ 97 ರನ್ನುಗಳ ಜಯಭೇರಿ ಮೊಳಗಿಸಿದೆ. ಪುಣೆ ತವರಿನಂಗಳದಲ್ಲಿ ಮೊದಲ ಸೋಲನುಭವಿಸಿದೆ.

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಡೆಲ್ಲಿ 4 ವಿಕೆಟಿಗೆ 205 ರನ್‌ ಪೇರಿಸಿ ಸವಾಲೊಡ್ಡಿದರೆ, ಪುಣೆ ತೀವ್ರ ಕುಸಿತ ಅನುಭವಿಸಿ 16.1 ಓವರ್‌ಗಳಲ್ಲಿ 108 ರನ್ನಿಗೆ ಆಲೌಟ್‌ ಆಯಿತು. ಸ್ಟೀವನ್‌ ಸ್ಮಿತ್‌ ಗೈರಲ್ಲಿ ಅಜಿಂಕ್ಯ ರಹಾನೆ ಪುಣೆ ನಾಯಕತ್ವ ವಹಿಸಿದ್ದರು.
ಆರಂಭಕಾರ ಆದಿತ್ಯ ತಾರೆ ಖಾತೆ ತೆರೆಯದೆ ದ್ವಿತೀಯ ಓವರಿನಲ್ಲಿ ಪೆವಿಲಿಯನ್‌ ಸೇರಿದ ಬಳಿಕ ಕ್ರೀಸಿಗೆ ಇಳಿದ ಸ್ಯಾಮ್ಸನ್‌ ಪುಣೆ ಬೌಲರ್‌ಗಳ ಮೇಲೆ ಘಾತಕವಾಗಿ ಎರಗಿದರು. 63 ಎಸೆತಗಳಿಂದ 102 ರನ್‌ ಬಾರಿಸಿ ವಿಜೃಂಭಿಸಿದರು. ಇದು ಐಪಿಎಲ್‌ನಲ್ಲಿ ಸ್ಯಾಮ್ಸನ್‌ ಬಾರಿಸಿದ ಮೊದಲ ಶತಕ. ಸಿಡಿಸಿದ್ದು 5 ಸಿಕ್ಸರ್‌ ಹಾಗೂ 8 ಬೌಂಡರಿ.ಇದು 10ನೇ ಐಪಿಎಲ್‌ನಲ್ಲಿ ದಾಖಲಾದ ಮೊದಲ ಸೆಂಚುರಿಯೂ ಆಗಿದೆ.

ಆರ್‌ಸಿಬಿ ವಿರುದ್ಧ ಮಿಂಚಿದ ರಿಷಬ್‌ ಪಂತ್‌ ತಮ್ಮ ಆಕರ್ಷಕ ಪ್ರದರ್ಶನವನ್ನು ಮುಂದುವರಿಸಿ 22 ಎಸೆತ ಗಳಿಂದ 31 ರನ್‌ ಹೊಡೆದರು (2 ಸಿಕ್ಸರ್‌, 1 ಬೌಂಡರಿ). ಸ್ಯಾಮ್‌ ಬಿಲ್ಲಿಂಗ್ಸ್‌ 24 ರನ್‌ ಗಳಿಸಿೆದರು. ಪಂತ್‌-ಬಿಲ್ಲಿಂಗ್ಸ್‌ ದ್ವಿತೀಯ ವಿಕೆಟಿಗೆ 69 ರನ್‌ ಒಟ್ಟುಗೂಡಿಸಿದರು.

ಕೊನೆಯ ಹಂತದಲ್ಲಿ ಸಿಡಿದು ನಿಂತ ಕ್ರಿಸ್‌ ಮಾರಿಸ್‌ ಕೇವಲ 9 ಎಸೆತಗಳಿಂದ 38 ರನ್‌ ಸೂರೆಗೈದು ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಮಾರಿಸ್‌ ಬ್ಯಾಟಿನಿಂದ 4 ಬೌಂಡರಿ, 3 ಸಿಕ್ಸರ್‌ ಸಿಡಿಯಿತು. 
ದೊಡ್ಡ ಮೊತ್ತವನ್ನು ಕಂಡೇ ಬೆದರಿದಂತೆ ಆಡಿದ ಪುಣೆ ಯಾವ ಹಂತದಲ್ಲೂ ಹೋರಾಟ ಪ್ರದರ್ಶಿಸಲಿಲ್ಲ. 20 ರನ್‌ ಮಾಡಿದ ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ಅವರದೇ ಹೆಚ್ಚಿನ ಗಳಿಕೆ.

ಡೆಲ್ಲಿ ಪರ ಅಮಿತ್‌ ಮಿಶ್ರಾ 11 ರನ್ನಿಗೆ 3 ಹಾಗೂ ನಾಯಕ ಜಹೀರ್‌ ಖಾನ್‌ 20 ರನ್ನಿಗೆ 3 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ನದೀಂ ಹಾಗೂ ಮಾರಿಸ್‌ ಒಂದೊಂದು ವಿಕೆಟ್‌ ಸಂಪಾದಿಸಿದರು. ಶತಕವೀರ ಸಂಜು ಸ್ಯಾಮ್ಸನ್‌ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

ಸ್ಕೋರ್‌ ಪಟ್ಟಿ
ಡೆಲ್ಲಿ ಡೇರ್‌ಡೆವಿಲ್ಸ್‌

ಆದಿತ್ಯ ತಾರೆ    ಸಿ ಧೋನಿ ಬಿ ಚಹರ್‌    0
ಸ್ಯಾಮ್‌ ಬಿಲ್ಲಿಂಗ್ಸ್‌    ಬಿ ತಾಹಿರ್‌    24
ಸಂಜು ಸ್ಯಾಮ್ಸನ್‌    ಬಿ ಝಂಪ    102
ರಿಷಬ್‌ ಪಂತ್‌    ರನೌಟ್‌    31
ಕೋರಿ ಆ್ಯಂಡರ್ಸನ್‌    ಔಟಾಗದೆ    2
ಕ್ರಿಸ್‌ ಮಾರಿಸ್‌    ಔಟಾಗದೆ    38
ಇತರ         8
ಒಟ್ಟು  (20 ಓವರ್‌ಗಳಲ್ಲಿ 4 ವಿಕೆಟಿಗೆ)    205
ವಿಕೆಟ್‌ ಪತನ:
1-2, 2-71, 3-124, 4-166.
ಬೌಲಿಂಗ್‌:

ಶೋಕ್‌ ದಿಂಡ    3-0-36-0
ದೀಪಕ್‌ ಚಹರ್‌        3-0-35-1
ಬೆನ್‌ ಸ್ಟೋಕ್ಸ್‌        4-0-41-0
ಇಮ್ರಾನ್‌ ತಾಹಿರ್‌        4-0-24-1
ಆ್ಯಡಂ ಝಂಪ        4-0-45-1
ರಜತ್‌ ಭಾಟಿಯ        2-0-21-0

ರೈಸಿಂಗ್‌ ಪುಣೆ ಸೂಪರ್‌ಜೈಂಟ್‌
ಆಜಿಂಕ್ಯ ರಹಾನೆ    ಸಿ ಸ್ಯಾಮ್ಸನ್‌ ಬಿ ಜಹೀರ್‌    10
ಎಂ. ಅಗರ್ವಾಲ್‌    ಸಿ ಮಾರಿಸ್‌ ಬಿ ಜಹೀರ್‌    20
ಫಾ ಡು ಪ್ಲೆಸಿಸ್‌    ಸಿ ಪಂತ್‌ ಬಿ ನದೀಂ    8
ರಾಹುಲ್‌ ತ್ರಿಪಾಠಿ    ಸಿ ನದೀಂ ಬಿ ಮಾರಿಸ್‌    10
ಬೆನ್‌ ಸ್ಟೋಕ್ಸ್‌    ಸಿ ಪಂತ್‌ ಬಿ ಕಮಿನ್ಸ್‌    2
ಎಂ.ಎಸ್‌. ಧೋನಿ    ಸಿ ನಾಯರ್‌ ಬಿ ಮಿಶ್ರಾ    11
ರಜತ್‌ ಭಾಟಿಯ    ಸಿ ಮಾರಿಸ್‌ ಬಿ ಮಿಶ್ರಾ    16
ದೀಪಕ್‌ ಚಹರ್‌    ಸಿ ಪಂತ್‌ ಬಿ ಜಹೀರ್‌    14
ಆ್ಯಡಂ ಝಂಪ    ಸಿ ಸ್ಯಾಮ್ಸನ್‌ ಬಿ ಮಿಶ್ರಾ    5
ಅಶೋಕ್‌ ದಿಂಡ    ಸಿ ಮಿಶ್ರಾ ಬಿ ಕಮಿನ್ಸ್‌    7
ಇಮ್ರಾನ್‌ ತಾಹಿರ್‌    ಔಟಾಗದೆ    0
ಇತರ         5
ಒಟ್ಟು  (16.1 ಓವರ್‌ಗಳಲ್ಲಿ ಆಲೌಟ್‌)    108
ವಿಕೆಟ್‌ ಪತನ:
1-24, 2-34, 3-49, 4-52, 5-54, 6-79, 7-94,  8-100, 9-107.
ಬೌಲಿಂಗ್‌:

ಶಾಬಾಜ್‌ ನದೀಂ    4-0-23-1
ಪ್ಯಾಟ್‌ ಕಮಿನ್ಸ್‌        3.1-0-24-2
ಜಹೀರ್‌ ಖಾನ್‌        3-0-20-3
ಕ್ರಿಸ್‌ ಮಾರಿಸ್‌        2-0-19-1
ಕೋರಿ ಆ್ಯಂಡರ್ಸನ್‌        1-0-10-0
ಅಮಿತ್‌ ಮಿಶ್ರಾ        3-0-11-3

ಪಂದ್ಯಶ್ರೇಷ್ಠ: ಸಂಜು ಸ್ಯಾಮ್ಸನ್‌

ಟಾಪ್ ನ್ಯೂಸ್

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.