ಸಮರ್ಥ್, ಕೆ. ಗೌತಮ್‌ ಶತಕ: ಅಸ್ಸಾಂ ಮೇಲೆ ಕರ್ನಾಟಕ ಸವಾರಿ


Team Udayavani, Oct 16, 2017, 1:01 PM IST

16-16.jpg

ಮೈಸೂರು: ನಿರೀಕ್ಷೆಯಂತೆ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಅಸ್ಸಾಂ ಮೇಲೆ ಸವಾರಿ ಮಾಡಿದ್ದಾರೆ. ರಣಜಿ ಪಂದ್ಯದ ದ್ವಿತೀಯ ದಿನ ದಾಟದ ಅಂತ್ಯಕ್ಕೆ 6 ವಿಕೆಟಿಗೆ 427 ರನ್‌ ಪೇರಿಸಿ ಗೆಲುವಿನ ಸ್ಪಷ್ಟ ಸೂಚನೆ ನೀಡಿದ್ದಾರೆ. ಆರಂಭಕಾರ ರವಿಕುಮಾರ್‌ ಸಮರ್ಥ್ ಮತ್ತು ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಕೃಷ್ಣಪ್ಪ ಗೌತಮ್‌ ಅಮೋಘ ಶತಕ ದೊಂದಿಗೆ ರವಿವಾರದ ಖುಷಿಯನ್ನು ಹೆಚ್ಚಿಸಿದರು. ಇವರ ರಂಜನೀಯ ಆಟವನ್ನು ಮೈಸೂರಿನ ಕ್ರಿಕೆಟ್‌ ಅಭಿ ಮಾನಿಗಳು ಕಣ್ತುಂಬಿ ಕೊಂಡರು.

ಅಸ್ಸಾಂನ 145 ರನ್ನಿಗೆ ಜವಾಬಾಗಿ ಮೊದಲ ದಿನ ವಿಕೆಟ್‌ ನಷ್ಟವಿಲ್ಲದೆ 77 ರನ್‌ ಗಳಿಸಿದ್ದ ಕರ್ನಾಟಕ, ದ್ವಿತೀಯ ದಿನ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಸಮರ್ಥ್ 123 ರನ್‌ ಬಾರಿಸಿದರೆ, ಕೆ. ಗೌತಮ್‌ 147 ರನ್‌ ಹೊಡೆದು ಬ್ಯಾಟಿಂಗ್‌ ಕಾಯ್ದು ಕೊಂಡಿದ್ದಾರೆ. ಈಗಾಗಲೇ 282 ರನ್‌ ಮುನ್ನಡೆಯಲ್ಲಿರುವ ಕರ್ನಾ ಟಕ, ಸೋಮವಾರವೇ ಇನ್ನಿಂಗ್ಸ್‌ ಜಯ ಭೇರಿ ಬಾರಿಸಿದರೆ ಅಚ್ಚರಿ ಇಲ್ಲ.

ಅಸ್ಸಾಂ ಮೊತ್ತ ಮೀರಿಸಿದ ಗೌತಮ್‌
ಆರ್‌. ಸಮರ್ಥ್ ಒಟ್ಟು  234 ಎಸೆತ ನಿಭಾಯಿಸಿ 10 ಬೌಂಡರಿ ಗಳೊಂದಿಗೆ ತಮ್ಮ 6ನೇ ಶತಕ ಸಂಭ್ರಮವನ್ನು ಆಚರಿಸಿದರು. ಇದರಲ್ಲಿ 10 ಬೌಂಡರಿಗಳಿದ್ದವು. ಮೊದಲ ದಿನ 4 ವಿಕೆಟ್‌ ಹಾರಿಸಿದ್ದ ಕೆ. ಗೌತಮ್‌ ದ್ವಿತೀಯ ದಿನ ತಮ್ಮ ಬ್ಯಾಟಿಂಗ್‌ ತಾಕತ್ತನ್ನೂ ಅನಾವರಣ ಗೊಳಿಸಿ ರಣಜಿಯಲ್ಲಿ ಶತಕದ ಖಾತೆ ತೆರೆದರು. ಅತ್ಯಂತ ಆಕ್ರಮಣಕಾರಿ ಆಟವಾಡಿದ ಗೌತಮ್‌ ಅಸ್ಸಾಂ ಬೌಲರ್‌ಗಳನ್ನು ಕಾಡುತ್ತ ಹೋಗಿ 158 ಎಸೆತಗಳಿಂದ 147 ರನ್‌ ಬಾರಿಸಿ ದರು. ಇದು ಅಸ್ಸಾಂನ ಮೊದಲ ಇನ್ನಿಂಗ್ಸ್‌ ಮೊತ್ತವನ್ನು ಮೀರಿಸಿದ ಸಾಧನೆಯಾಗಿದೆ. 6 ಸಿಕ್ಸರ್‌ ಹಾಗೂ 10 ಬೌಂಡರಿ ಹೊಡೆದದ್ದು ಗೌತಮ್‌ ಅವರ ಬ್ಯಾಟಿಂಗ್‌ ರಭಸಕ್ಕೆ ಸಾಕ್ಷಿ. 3ನೇ ದಿನ ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸುವ ಸೂಚನೆಯೊಂದನ್ನು ಗೌತಮ್‌ ರವಾನಿಸಿದ್ದಾರೆ.

ಕೆ. ಗೌತಮ್‌ ಜತೆ 38 ರನ್‌ ಮಾಡಿರುವ ಶ್ರೇಯಸ್‌ ಗೋಪಾಲ್‌ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇವರಿಬ್ಬರ 7ನೇ ವಿಕೆಟ್‌ ಜತೆಯಾಟ ದಲ್ಲಿ 109 ರನ್‌ ಹರಿದು ಬಂದಿದೆ. ಕರ್ನಾಟಕ ಸರದಿಯ ಇತರ ಪ್ರಮುಖ ಸ್ಕೋರರ್‌ಗಳೆಂದರೆ ಸ್ಟುವರ್ಟ್‌ ಬಿನ್ನಿ (41), ಮಾಯಾಂಕ್‌ ಅಗರ್ವಾಲ್‌ (31) ಮತ್ತು ಕೌನೈನ್‌ ಅಬ್ಟಾಸ್‌ (30). ಕೀಪರ್‌ ಸಿ.ಎಂ. ಗೌತಮ್‌ ಗಳಿಕೆ ಕೇವಲ 3 ರನ್‌. 

ವನ್‌ಡೌನ್‌ ಬ್ಯಾಟ್ಸ್‌ಮನ್‌ ಅಭಿಷೇಕ್‌ ರೆಡ್ಡಿ ಖಾತೆ ತೆರೆಯದೆ ನಿರ್ಗಮಿಸಿದರು. ಅಗರ್ವಾಲ್‌ ಮತ್ತು ರೆಡ್ಡಿ ಅವರನ್ನು ಅರೂಪ್‌ ದಾಸ್‌ ಒಂದೇ ಓವರಿನಲ್ಲಿ ಔಟ್‌ ಮಾಡಿದರು. ಕರ್ನಾಟಕ 92 ರನ್ನಿಗೆ 2 ವಿಕೆಟ್‌ ಕಳೆದುಕೊಂಡಿತು. ಅನಂತರ ಜತೆಗೂಡಿದ ಸಮರ್ಥ್-ಅಬ್ಟಾಸ್‌ 3ನೇ ವಿಕೆಟಿಗೆ 98 ರನ್‌ ಪೇರಿಸಿ ಮುನ್ನಡೆ ಒದಗಿಸಿದರು. 

ಅಸ್ಸಾಂ ಪರ ಅರೂಪ್‌ ದಾಸ್‌ ಮತ್ತು ಸ್ವರೂಪಂ ಪುರ್ಕಾಯಸ್ಥ ತಲಾ 3 ವಿಕೆಟ್‌ ಹಾರಿಸಿದರು.

ಸಂಕ್ಷಿಪ್ತ ಸ್ಕೋರ್‌: 
ಅಸ್ಸಾಂ-145. ಕರ್ನಾಟಕ-6 ವಿಕೆಟಿಗೆ 427 (ಕೆ. ಗೌತಮ್‌ ಬ್ಯಾಟಿಂಗ್‌ 147, ಆರ್‌. ಸಮರ್ಥ್ 123, ಬಿನ್ನಿ 41, ಶ್ರೇಯಸ್‌ ಗೋಪಾಲ್‌ ಬ್ಯಾಟಿಂಗ್‌ 38, ಅಗರ್ವಾಲ್‌ 31, ಅಬ್ಟಾಸ್‌ 30, ಅರೂಪ್‌ ದಾಸ್‌ 101ಕ್ಕೆ 3, ಪುರ್ಕಾಯಸ್ಥ 80ಕ್ಕೆ 3).

ಟಾಪ್ ನ್ಯೂಸ್

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweqwe

IPL; ವಾಂಖೇಡೆಯಲ್ಲಿ ಬೌಲರ್‌ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

ICC Men’s Test Team Rankings; Team India slipped to second place

ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ

Thomas Cup: ಬ್ಯಾಡ್ಮಿಂಟನ್‌; ಭಾರತದ ಆಟಕ್ಕೆ ತೆರೆ

Thomas Cup: ಬ್ಯಾಡ್ಮಿಂಟನ್‌; ಭಾರತದ ಆಟಕ್ಕೆ ತೆರೆ

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.