![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ವಿಶ್ವ ಚೆಸ್ ಚಾಂಪಿಯನ್ಶಿಪ್ ಬ್ಲಿಟ್ಜ್: ಜಂಟಿ ದ್ವಿತೀಯ ಸ್ಥಾನದಲ್ಲಿ ಹಂಪಿ
Team Udayavani, Dec 31, 2019, 5:42 AM IST
![KONERU-HAMPI](https://www.udayavani.com/wp-content/uploads/2019/12/KONERU-HAMPI-620x400.jpg)
ಮಾಸ್ಕೊ: ವರ್ಷಾಂತ್ಯದಲ್ಲಿ ಭಾರತದ ವನಿತಾ ಚೆಸ್ ತಾರೆ ಕೊನೆರು ಹಂಪಿ ದ್ವಿತೀಯ ವಿಶ್ವ ಪ್ರಶಸ್ತಿಯ ಸಾಧ್ಯತೆಯೊಂದನ್ನು ತೆರೆದಿರಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್ಶಿಪ್ನಲ್ಲಿ ಈಗಾಗಲೇ ರ್ಯಾಪಿಡ್ ವಿಭಾಗದ ಕಿರೀಟವನ್ನು ಏರಿಸಿಕೊಂಡಿರುವ ಹಂಪಿ, ಈಗ ಬ್ಲಿಟ್ಜ್ ವಿಭಾಗದಲ್ಲೂ ಮೇಲುಗೈ ಸಾಧಿಸುವ ಹಾದಿಯಲ್ಲಿದ್ದಾರೆ.
ಮೊದಲ ದಿನದ ಬ್ಲಿಟ್ಜ್ ಸ್ಪರ್ಧೆಯ ಬಳಿಕ ಕೊನೆರು ಹಂಪಿ ಇತರ 3 ಸ್ಪರ್ಧಿಗಳೊಂದಿಗೆ ಜಂಟಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನೊಂದು ದಿನದ ಸ್ಪರ್ಧೆ ಬಾಕಿ ಇದ್ದು, ಇಲ್ಲಿ 9 ಸುತ್ತುಗಳ ಸ್ಪರ್ಧೆ ಏರ್ಪಡಲಿದೆ.
ಒಂದು ಹಂತದಲ್ಲಿ ಅಗ್ರಸ್ಥಾನ
5 ಸುತ್ತುಗಳ ಬ್ಲಿಟ್ಜ್ ಸ್ಪರ್ಧೆ ಮುಗಿದಾಗ ಕೊನೆರು ಹಂಪಿ ಅಗ್ರಸ್ಥಾನ ಅಲಂಕರಿಸಿದ್ದರು. ಆದರೆ ಮುಂದಿನೆರಡು ಸುತ್ತುಗಳಲ್ಲಿ ಡ್ರಾ ಕಾಣಬೇಕಾಯಿತು. 8ನೇ ಸುತ್ತಿನಲ್ಲಿ ಮೋನಿಕಾ ಸ್ಯಾಕೊ ಅವರನ್ನು ಮಣಿಸಿದರು. ಆದರೆ 9ನೇ ಹಾಗೂ ಅಂತಿಮ ಸುತ್ತಿನಲ್ಲಿ ಆತಿಥೇಯ ನಾಡಿನ ಕ್ಯಾಥರಿನಾ ಲಾಗ್ನೊ ವಿರುದ್ಧದ ನಾಟಕೀಯ ಸೋಲು ಕಾಣಬೇಕಾಯಿತು. ಹೀಗಾಗಿ ಹಂಪಿ ಎರಡನೇ ಸ್ಥಾನಕ್ಕೆ ಕುಸಿದರು.
ಮೊದಲ ದಿನದಾಟದ ಅಂತ್ಯಕ್ಕೆ ಕ್ಯಾಥರಿನಾ ಲಾಗ್ನೊ ಅಗ್ರಸ್ಥಾನ ಅಲಂಕರಿಸಿದ್ದಾರೆ. ಅವರು 9 ಪಂದ್ಯಗಳಿಂದ 8 ಅಂಕಗಳನ್ನು ಸಂಪಾದಿಸಿದ್ದಾರೆ. 2018ರ ಚಾಂಪಿಯನ್ ಆಗಿರುವ ಲಾಗ್ನೊ ಈ ಪ್ರಶಸ್ತಿ ಉಳಿಸಿಕೊಳ್ಳಲು ಭಾರೀ ಹೋರಾಟ ನಡೆಸುತ್ತಿರುವುದು ಕಂಡುಬಂದಿದೆ.
ಕೊನೆರು ಹಂಪಿ ಜತೆ ದ್ವಿತೀಯ ಸ್ಥಾನದಲ್ಲಿರುವ ಉಳಿದ ಮೂವರೆಂದರೆ ಅಲೆಕ್ಸಾಂಡ್ರಾ ಕೋಸ್ಟೆನ್ಯುಕ್, ದರಿಯಾ ಕರೋಶ್ಕಿನಾ ಮತ್ತು ಅಲಿನಾ ಕಶ್ಲಿನ್ಸ್ಕಾಯಾ. ಇವರೆಲ್ಲರೂ 7 ಅಂಕ ಹೊಂದಿದ್ದಾರೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.