![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ವಿಶ್ವ ಕುಸ್ತಿ: ಭಾರತಕ್ಕೆ ಎರಡೇ ಪದಕ
Team Udayavani, Oct 29, 2018, 10:52 AM IST
![ap10272018000002b.jpg](https://www.udayavani.com/wp-content/uploads/2018/10/29/ap10272018000002b-620x384.jpg)
ಬುಡಾಪೆಸ್ಟ್ (ಹಂಗೇರಿ): ವಿಶ್ವ ಕುಸ್ತಿ ಚಾಂಪಿಯನ್ ಶಿಪ್ನ ಅಂತಿಮ ದಿನ ಗ್ರೀಕೊ ರೋಮನ್ ಕುಸ್ತಿಪಟುಗಳ ನಿರಸ ಪ್ರದರ್ಶನ ದೊಂದಿಗೆ ಭಾರತದ ಹೋರಾಟ ಕೊನೆಗೊಂಡಿದೆ. ಹೀಗಾಗಿ ಭಾರತ ಈ ಕೂಟದಲ್ಲಿ ಕೇವಲ 2 ಪದಕಗಳಿಗೆ ತೃಪ್ತಿ ಪಟ್ಟಿದೆ.
ಗ್ರೀಕೊ ರೋಮನ್ ಸ್ಪರ್ಧೆಯ 97 ಕೆಜಿ ವಿಭಾಗದಲ್ಲಿ ಹರ್ದೀಪ್ ಮೊರಕ್ಕೋದ ಚೌಕ್ರಿ ಅತಫಿ ವಿರುದ್ಧ 8-4 ಅಂಕ ಗಳಿಂದ ಗೆದ್ದರೆ, ಎರಡನೇ ಪಂದ್ಯದಲ್ಲಿ ಗ್ರೀಸ್ನ ಲಾವೊ ಕ್ರಾಟಿಸ್ ಕೆಸಿಡಿಸ್ ವಿರುದ್ಧ ಸೋತರು. 77 ಕೆಜಿ ವಿಭಾಗದ ಅರ್ಹತಾ ಸುತ್ತಿನಲ್ಲಿ ಗುರ್ಪ್ರೀತ್ ತಂತ್ರಗಾರಿಕೆಯ ಹೆಚ್ಚುವರಿ ಅಂಕಗಳಿಂದ (0-9) ಕೈರಟಾಬೆಕ್ ತುಗೊಲಾವೊ ವಿರುದ್ಧ ಸೋಲನುಭವಿಸಿದರೆ, ಮತ್ತೂಬ್ಬ ಭಾರತೀಯ ಕುಸ್ತಿಪಟು ನವೀನ್ ಅರ್ಹತಾ ಸುತ್ತಿನಲ್ಲಿ ನಾರ್ವೆಯ ಆಸ್ಕರ್ ವಿರುದ್ಧ 1-4 ಅಂಕಗಳಿಂದ ಮುಗ್ಗರಿಸಿ ನಿರಾಸೆ ಮೂಡಿಸಿದರು.
ಈ ಮೂಲಕ ಈ ಕೂಟದಲ್ಲಿ ಭಾರತೀಯ ಆಟ ಅಂತ್ಯಗೊಂಡಿದ್ದು, ಭಾರತ ಕೇವಲ 2 ಪದಕಗಳನ್ನಷ್ಟೇ ಸಂಪಾದಿಸಿದೆ. ಪುರುಷರ ವಿಭಾಗದಲ್ಲಿ ಭಜರಂಗ್ ಪೂನಿಯ ಬೆಳ್ಳಿ ಪದಕ ಹಾಗೂ ವನಿತಾ ವಿಭಾಗದಲ್ಲಿ ಪೂಜಾ ದಂಡಾ ಕಂಚಿನ ಪದಕ ಗೆದ್ದು ಸಂಭ್ರಮಿಸಿದ್ದರು.
2013ರಲ್ಲಿ ಉತ್ತಮ ಸಾಧನೆ
ಭಾರತದ ಈ ವರೆಗಿನ ಅತ್ಯುತ್ತಮ ಸಾಧನೆ 2013ರ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ನಲ್ಲಿ ದಾಖಲಾಗಿತ್ತು. ಅಲ್ಲಿ 3 ಪದಕಗಳು ಒಲಿದಿದ್ದವು. ಅಮಿತ್ ಬೆಳ್ಳಿ (55 ಕೆಜಿ), ಭಜರಂಗ್ ಕಂಚು (60 ಕೆಜಿ) ಹಾಗೂ ಗ್ರೀಕೊ ರೋಮನ್ ವಿಭಾಗದಲ್ಲಿ ಸಂದೀಪ್ ತುಳಸಿ ಯಾದವ್ ಐತಿಹಾಸಿಕ ಕಂಚಿನ ಪದಕ ಜಯಿಸಿದ್ದರು.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.