ಸಿಎಂ ಎಚ್‌ಡಿಕೆ ಸಮ್ಮಿಶ್ರ ಬಜೆಟ್‌;ರೈತ ಸಾಲ ಮನ್ನಾ:ಇಲ್ಲಿದೆ ಹೈಲೆಟ್ಸ್


Team Udayavani, Jul 5, 2018, 12:05 PM IST

hd-kumarswamy.jpg

ಬೆಂಗಳೂರು: ಮುಖ್ಯಮಂತ್ರಿ,ಹಣಕಾಸು ಖಾತೆ ಹೊಂದಿರುವ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ ಮಂಡಿಸಿದರು. ಪ್ರಮುಖವಾಗಿ ಷರತ್ತುಗಳೊಂದಿಗೆ  ರೈತ ಸಾಲ ಮನ್ನಾ  ಮಾಡಿದ್ದಾರೆ. ಬಜೆಟ್‌ನಲ್ಲಿ ಪ್ರಮುಖವಾಗಿ ಜೆಡಿಎಸ್‌ ಪ್ರಾಬಲ್ಯದ ಹಾಸನ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಭರಪೂರ ಯೋಜನೆಗಳನ್ನು , ಅನುದಾನವನ್ನು ಘೋಷಿಸಿದ್ದಾರೆ. 

ಹೈಲೆಟ್ಸ್‌ 

2 ಲಕ್ಷದ 18 ಸಾವಿರದ 448 ಕೋಟಿ ರೂಪಾಯಿ ಬಜೆಟ್‌ ಗಾತ್ರ 

31.12.2017 ರ ವರೆಗಿನ ಎಲ್ಲಾ ಸುಸ್ತಿ ಸಾಲ ಮನ್ನಾ 

ಹಿಂದಿನ ಸರ್ಕಾರದ ಸಾಲಮನ್ನಾ ಬಾಕಿ ಪೂರ್ಣ ಪಾವತಿ 

ಕಳೆದ 3 ವರ್ಷಗಳಲ್ಲಿ  ಆದಾಯ ತೆರಿಗೆ ಕಟ್ಟಿರುವ ರೈತರಿಗೆ,ಸರ್ಕಾರಿ ಅಧಿಕಾರಿಗಳು, ಸಹಕಾರಿ ಕ್ಷೇತ್ರದ  ಅಧಿಕಾರಿಗಳು ದೊಡ್ಡ ಭೂ ಹಿಡುವಳಿಯಿರುವರಿಗೆ ಸಾಲ ಮನ್ನಾ ಅನ್ವಯವಾಗುವುದಿಲ್ಲ. 

ಸಾಲ ಮರು ಪಾವತಿಸಿದ ರೈತರಿಗೂ ಪ್ರಯೋಜನ. ಅವರ ಖಾತೆಗೆ 25,000 ರೂಪಾಯಿ ಹಾಕಲಿರುವ ಸರ್ಕಾರ. 

ರೈತರ ಪ್ರತೀ ಕುಟುಂಬಕ್ಕೆ 2 ಲಕ್ಷ ರೂಪಾಯಿ ಸಾಲ ಮನ್ನಾ.

ಒಟ್ಟು  34,000 ಕೋಟಿ ರೂಪಾಯಿ ಸಾಲ ಮನ್ನಾ 

ಹಳೆ ಸರ್ಕಾರ 4,165 ಕೋಟಿ ರೂ ಹಳೆ ಸಾಲ ಮನ್ನಾ ಪಾವತಿ ಬಾಕಿ ಉಳಿಸಿಕೊಂಡಿತ್ತು. ಅದನ್ನೂ ಪಾವತಿ ಮಾಡಲು ತೀರ್ಮಾನ 

ವಿಕಲಚೇತನರು ಪಡೆದಿರುವ 4 ಕೋಟಿ ರೂಪಾಯಿ ಸಾಲ ಮನ್ನಾ 

ಕೃಷಿ ವಲಯದಲ್ಲಿ  4.9 ರಷ್ಟು  ಬೆಳವಣಿಗೆ ನಿರೀಕ್ಷೆ 

ಆಂಧ್ರದ ಮಾದರಿಯಲ್ಲಿ  ಶೂನ್ಯ ಬಂಡವಾಳ ಕೃಷಿ ಪದ್ಧತಿ – ರೈತರು ಮಾರುಕಟ್ಟೆಯಿಂದ ಪರಿಕರ ಬಳಸುವುದಿಲ್ಲ. 50 ಕೋಟಿ ರೂ 

ಸಂಧ್ಯಾ ಸುರಕ್ಷಾ ಯೋಜನೆ ಮಾಸಿಕ ಮೊತ್ತ 600 ರಿಂದ 1000ಕ್ಕೆ ಏರಿಕೆ (65 ಮೀರಿದ ವೃದ್ಧರಿಗೆ ಅನ್ವಯ)

ಕೃಷಿಕರಿಗಾಗಿ ಉನ್ನತ ಸಮಿತಿ 

 ಇಸ್ರೆಲ್‌ ಮಾದರಿ ಕೃಷಿಗೆ 150 ಕೋಟಿ ರೂ ಮೀಸಲು . 

ಜನಪ್ರತಿನಿಧಿಗಳು ,ಅಧಿಕಾರಿಗಳು ಆರ್ಥಿಕ ಶಿಸ್ತು, ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ 

ದುಬಾರಿ ;

ಮದ್ಯದ ಮೇಲಿನ ತೆರಿಗೆ 4 % ಏರಿಕೆ 

ಡಿಸೇಲ್‌ ಮೇಲಿನ ಸೆಸ್‌ ಹೆಚ್ಚಳ -19 % ಸೆಸ್‌ 21 % ಗೆ ಏರಿಕೆ 

ಪೆಟ್ರೋಲ್‌ ದುಬಾರಿ -ಸೆಸ್‌ 30% ರಿಂದ 32 % ಹೆಚ್ಚಳ 

ವಿದ್ಯುತ್‌ ಯೂನಿಟ್‌ಗೆ 20 ಪೈಸೆ ಹೆಚ್ಚಳ 

ಹಿಂದಿನ ಸರ್ಕಾರದ ಅನ್ನಾಭಾಗ್ಯ ಸೇರಿದಂತೆ ಎಲ್ಲಾ ಯೋಜನೆಗಳು ಮುಂದುವರಿಕೆ 

ತೆಂಗು ಬೆಳೆಗಾರರ ಹಿತರಕ್ಷಣೆಗೆ 190 ಕೋಟಿ ರೂಪಾಯಿ 

ರಾಮನಗರದಲ್ಲಿ ಚಲನಚಿತ್ರ ವಿವಿ -30 ಕೋಟಿ 

ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂ 

ಬೆಳ್ಳಂದೂರು ಕೆರೆ ಅಭಿವೃದ್ಧಿಗೆ 50 ಕೋಟಿ ರೂ 

ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು 

247 ಇಂದಿರಾ ಕ್ಯಾಂಟೀನ್‌ಗಳ ಸ್ಥಾಪನೆ

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ- ಪ್ರಾಥಮಿಕ ಹಂತದಲ್ಲಿ 1000 ಶಾಲೆಗಳಲ್ಲಿ ಯೋಜನೆ ಜಾರಿ. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ 

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಬಯೋ ಮೆಟ್ರಿಕ್ಸ್‌ 5 ಕೋಟಿ ರೂ.

ಸರ್ಕಾರಿ ಶಾಲೆಗಳ ವಿಲೀನ

ಬೆಂಗಳೂರಿನ 6 ಕಡೆ ಎಲಿವೇಟೆಡ್‌ ಕಾರಿಡಾರ್‌ 

ಧಾರ್ಮಿಕ 

ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 25 ಕೋಟಿ ರೂಪಾಯಿ ಅನುದಾನ 

ಭಗೀರಥ, ಮಾದಾರ , ಭೋವಿ ಪೀಠ , ಕಾಗಿನೆಲೆ, ವಾಲ್ಮೀಕಿ , ದೇವಾಂಗ, ಕಂಬಾರ , ಹಡಪದ ಅಪ್ಪಣ್ಣ  ಸೇರಿದಂತೆ ಹಲವು ಪೀಠಗಳಿಗೆ 25 ಕೋಟಿ ರೂ ಅನುದಾನ 

ಇಳಿಕೆ 

ಅನ್ನಭಾಗ್ಯ ಅಕ್ಕಿ  ಒಬ್ಬರಿಗೆ 7 ಕೆ.ಜಿ ಯಿಂದ 5 ಕೆ.ಜಿಗೆ ಇಳಿಕೆ 
ರಿಯಾರಿತಿ ದರದಲ್ಲಿ ಅರ್ಧ ಕೆ.ಜಿ ತೊಗರಿಬೇಳೆ,1 ಕೆ.ಜಿ ಅಯೋಡಿನ್‌ ಉಪ್ಪು,1 ಕೆ.ಜಿ ತಾಳೆ ಎಣ್ಣೆ , 1 ಕೆ.ಜಿ ಸಕ್ಕರೆ.

ಇಂಧನ ಇಲಾಖೆ -14, 123 ಕೋಟಿ ರೂ ಮೀಸಲು 

ಗ್ರಾಮೀಣಾಭಿವೃದ್ಧಿ -14,449 ಕೋಟಿ ರೂ ಮೀಸಲು 

ನಗರಾಭಿವೃದ್ಧಿ -17,727ಕೋಟಿ ರೂ ಮೀಸಲು 

ಆಹಾರ ಮತ್ತು ನಾಗರಿಕ ಸರಬರಾಜು -3,866 ಕೋಟಿ ರೂ ಮೀಸಲು 

ಶಿಕ್ಷಣ 26,581ಕೋಟಿ ರೂ ಮೀಸಲು 

ಜಲಸಂಪನ್ಮೂಲ -18,142 ಕೋಟಿ ರೂ ಮೀಸಲು 

ಸಮಾಜ ಕಲ್ಯಾಣ -11,788 ಕೋಟಿ ರೂ ಮೀಸಲು 

ಲೋಕೋಪಯೋಗಿ ಇಲಾಖೆ -10,200 ಕೋಟಿ ರೂ 

ಒಳನಾಡ ಸಾರಿಗೆ  7,993 ಕೋಟಿ ರೂ 

ಕೃಷಿಗೆ  7,642 ಕೋಟಿ ರೂ ಮೀಸಲು 

ಕಂದಾಯ ಇಲಾಖೆ –  7,180 ಕೋಟಿ ರೂ ಮೀಸಲು 

ಮಹಿಳಾ ಮತ್ತು ಮಕ್ಕಳ ಕಲ್ಯಾಣ – 5,725 ಕೋಟಿ ರೂ ಮೀಸಲು 

ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ  9,317 ಕೋಟಿ ರೂ ಮೀಸಲು 

ವಸತಿ -3,942 ಕೋಟಿ ರೂ ಮೀಸಲು 

ಇತರೆ  ಇಲಾಖೆಗಳಿಗೆ 82, 196 ಕೋಟಿ ಅನುದಾನ 
 

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.