377 ಶಾಸಕರು, ಮಾಜಿ ಶಾಸಕರಿಗೆ ಜಿ ಕೆಟಗರಿ ನಿವೇಶನ
Team Udayavani, Mar 11, 2020, 3:03 AM IST
ವಿಧಾನಸಭೆ: ರಾಜ್ಯದ 377 ಶಾಸಕರು, ಮಾಜಿ ಶಾಸಕರು “ಜಿ’ ಕೆಟಗರಿ ನಿವೇಶನ ಪಡೆದಿದ್ದು, 90 ಅರ್ಜಿಗಳು ಮಂಜೂರಾತಿಗಾಗಿ ಬಾಕಿ ಇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಕಾಂಗ್ರೆಸ್ನ ಎಸ್.ಎನ್.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಲಿಖೀತ ಉತ್ತರ ನೀಡಿದ ಅವರು, 1997ರಿಂದ, ಅಂದರೆ, “ಜಿ’ ಕೆಟಗರಿ ಪ್ರಾರಂಭದಿಂದ 2019-20ನೇ ಸಾಲಿನವರೆಗೆ 377 ಮಂದಿಗೆ ನಿವೇಶನ ನೀಡಲಾಗಿದೆ. ಇನ್ನೂ 90 ಅರ್ಜಿ ವಿಲೇವಾರಿಗೆ ಬಾಕಿಯಿದೆ. ಬಿಡಿಎ ವತಿಯಿಂದ ಶಾಸಕರು ಒಂದಕ್ಕಿಂತ ಹೆಚ್ಚು ನಿವೇಶನ ಪಡೆದಿರುವ ಪ್ರಕರಣ ಇಲ್ಲ ಎಂದು ಮಾಹಿತಿ ನೀಡಿದರು.
“ಜಿ’ ಕೆಟಗರಿ ನಿವೇಶನಕ್ಕಾಗಿ ಅರ್ಜಿ ಹಾಕಿ ಇನ್ನೂ ಮಂಜೂರಾಗದವರಲ್ಲಿ ಕಾಂಗ್ರೆಸ್ನ ಎಂ.ಬಿ.ಪಾಟೀಲ್, ಡಾ.ಜಿ.ಪರಮೇಶ್ವರ್, ವಿನಯ ಕುಲಕರ್ಣಿ, ಜಮೀರ್ ಅಹಮದ್, ಯು.ಟಿ.ಖಾದರ್, ಆರ್.ಬಿ.ತಿಮ್ಮಾಪುರ, ಬಿಜೆಪಿಯ ಬಸವರಾಜ ಬೊಮ್ಮಾಯಿ, ಕೃಷ್ಣಯ್ಯ ಶೆಟ್ಟಿ, ಆನಂದ್ಸಿಂಗ್, ಅಪ್ಪಚ್ಚು ರಂಜನ್, ಜೆಡಿಎಸ್ನ ಕಲ್ಪನಾ ಸಿದ್ದರಾಜು, ಎನ್.ಎಂ.ನಬಿ ಅವರ ಹೆಸರು ಇದೆ.