![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-415x218.jpg)
ದಲಿತ ಸಿಎಂ ಪಟ್ಟ ತಪ್ಪಿದ್ದು ಹೇಗೆ ಮುಂದೆ ಹೇಳುವೆ
Team Udayavani, May 17, 2019, 6:05 AM IST
![Untitled-1](https://www.udayavani.com/wp-content/uploads/2019/05/Untitled-1-17-620x451.jpg)
ಹುಬ್ಬಳ್ಳಿ: ‘ದಲಿತರು ಮುಖ್ಯಮಂತ್ರಿಯಾಗುವು ದನ್ನು ಯಾರು ತಪ್ಪಿಸಿದರು ಎಂಬುದನ್ನು ಕುಂದ ಗೋಳ ಉಪ ಚುನಾವಣೆ ಬಳಿಕ ಬಹಿರಂಗ ಪಡಿಸುವೆ’ ಎಂದು ಸಂಸದ ಕೆ.ಎಚ್. ಮುನಿಯಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಲಿತ ಮುಖ್ಯಮಂತ್ರಿಯಾಗಬೇಕು ಎಂಬುದರ ಬಗ್ಗೆ ಕೆಲ ಮುಖಂಡರು ಮಾತನಾಡುತ್ತಿದ್ದಾರೆ. ದಲಿತರೂ ಮುಖ್ಯಮಂತ್ರಿ ಆಗಬಹುದು. ಆದರೆ, ಅದಕ್ಕೆ ಕಾಲ ಕೂಡಿ ಬರಬೇಕು.
ಕಾಂಗ್ರೆಸ್ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವ ಅವಕಾಶವಿತ್ತು. ಆದರೂ, ಸಿಎಂ ಹುದ್ದೆಯಿಂದ ವಂಚಿತರಾಗಿದ್ದಾರೆ. ಕಾರಣ ಕೆಲವರು ಅವರನ್ನು ಮುಖ್ಯಮಂತ್ರಿಯಾಗದಂತೆ ತಡೆದರು. ಬಾಬು ಜಗಜೀವನರಾಮ್ ನಂತರ ಯಾವುದೇ ದಲಿತರು ಉನ್ನತ ಹುದ್ದೆ ಪಡೆದಿಲ್ಲ. ದಲಿತರು ಮುಖ್ಯಮಂತ್ರಿ ಆಗುವುದನ್ನು ಯಾರು ತಪ್ಪಿಸಿದರು ಎಂಬುದನ್ನು ಮುಂದೆ ಬಹಿರಂಗ ಪಡಿಸುತ್ತೇನೆ’ ಎಂದರು.
ಟಾಪ್ ನ್ಯೂಸ್
![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-415x218.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.