![court](https://www.udayavani.com/wp-content/uploads/2024/07/court-7-415x231.jpg)
ಪ್ರಜ್ವಲ್ ಎಲ್ಲಿದ್ದಾನೆ ಎಂದು ಗೊತ್ತಿದ್ದರೆ ಹೇಳಿ: ಡಾ| ಜಿ. ಪರಮೇಶ್ವರ್
ಮುಖ್ಯಮಂತ್ರಿ ನನಗೆ ಕೆಲವು ಸೂಚನೆ ನೀಡಿದ್ದಾರೆ, ಬಹಿರಂಗಪಡಿಸಲ್ಲ
Team Udayavani, May 15, 2024, 10:54 PM IST
![ಪ್ರಜ್ವಲ್ ಎಲ್ಲಿದ್ದಾನೆ ಎಂದು ಗೊತ್ತಿದ್ದರೆ ಹೇಳಿ: ಪರಂ](https://www.udayavani.com/wp-content/uploads/2024/05/G.-Parameshwar-620x450.jpg)
ಬೆಂಗಳೂರು: ಪ್ರಜ್ವಲ್ ಎಲ್ಲಿದ್ದಾನೆ ಅಂತ ನಮಗೆ ಗೊತ್ತಿಲ್ಲ. ನಿಮಗೇನಾದರೂ ಮಾಹಿತಿ ಇದೆಯೇ? ಗೊತ್ತಿದ್ದರೆ ಹೇಳಿ, ನಮಗೂ ಸಹಾಯ ಆಗುತ್ತದೆ.ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆ ಬಗ್ಗೆ ಸ್ವತಃ ಗೃಹ ಸಚಿವ ಡಾ| ಜಿ. ಪರಮೇಶ್ವರ್ ಅವರು ಅಲವತ್ತುಕೊಂಡ ರೀತಿ ಇದು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜ್ವಲ್ ಎಲ್ಲಿದ್ದಾನೆ ಎಂಬುದು ಎಸ್ಐಟಿಗೆ ಗೊತ್ತಿದೆ. ನಮಗೆ ಗೊತ್ತಿಲ್ಲ. ನಿಮಗೇನಾದರೂ ಮಾಹಿತಿ ಇದೆಯಾ? ಪ್ರಜ್ವಲ್ ಎಲ್ಲಿದ್ದಾನೆಂದು ನಿಮಗೇನಾದ್ರೂ ಗೊತ್ತಾ? ಗೊತ್ತಿದ್ದರೆ ನೀವೇ ಹೇಳಿ, ನಮಗೂ ಸಹಾಯ ಆಗುತ್ತದೆ ಎಂದರು. ಬುಧವಾರ ನಡೆದ ಸಭೆಯಲ್ಲಿ ಸಿಎಂ ನನಗೆ ಕೆಲವು ಸೂಚನೆ ನೀಡಿದ್ದಾರೆ. ಅವುಗಳನ್ನು ಬಹಿರಂಗಪಡಿಸುವಂತಿಲ್ಲ ಎಂದರು.
ಸತೀಶ್ ಜಾರಕಿಹೊಳಿ ಅವರ ಮನೆಗೆ ಹೋಗಿದ್ದೆ . ಅವರ ಮಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಅದರ ಬಗ್ಗೆ ಚರ್ಚೆ ಮಾಡಿ ಬಂದಿದ್ದೆ . ಸಮುದಾಯವಾರು ಡಿಸಿಎಂ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ತಿಮಿಂಗಿಲ ಯಾರು ಅಂತ ಕುಮಾರಸ್ವಾಮಿಗೆ ಗೊತ್ತಿದೆ. ಹೀಗೆ ಗೊತ್ತಿದ್ದು ಹೇಳದೆ ಇರುವುದು ತಪ್ಪು ಅಲ್ಲವೇ? ತಿಮಿಂಗಿಲ ಯಾರು ಅಂತ ಹೇಳಿಬಿಡಲಿ, ಅಲ್ಲಿಗೆ ಎಲ್ಲವೂ ಮುಗಿದು ಹೋಗುತ್ತದೆ ಎಂದಷ್ಟೇ ಹೇಳಿದರು.
ಟಾಪ್ ನ್ಯೂಸ್
![court](https://www.udayavani.com/wp-content/uploads/2024/07/court-7-415x231.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
![robbers](https://www.udayavani.com/wp-content/uploads/2024/07/robbers-1-150x89.jpg)
Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
![Kohli IPL 2024](https://www.udayavani.com/wp-content/uploads/2024/07/Kohli-IPL-2024-150x103.jpg)
Champions Trophy; ಕೊಹ್ಲಿ ಪಾಕ್ನಲ್ಲಿ ಆಡಲಿ: ಯೂನಿಸ್ ಖಾನ್
![1-tatoo](https://www.udayavani.com/wp-content/uploads/2024/07/1-tatoo-150x84.jpg)
Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!
![1-wewqewq](https://www.udayavani.com/wp-content/uploads/2024/07/1-wewqewq-2-150x98.jpg)
Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.