ಕೊಡಗು :ಕೊಚ್ಚಿ ಹೋಗಿದ್ದ ತಾಯಿ-ಮಗನ ಶವಗಳು ಕೆಸರಿನಲ್ಲಿ ಪತ್ತೆ
Team Udayavani, Aug 22, 2018, 2:51 PM IST
ಮಡಿಕೇರಿ : ಹೆಮ್ಮೆತಾಳು ಗ್ರಾಮದಲ್ಲಿ ಭೀಕರ ಜಲಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ತಾಯಿ ಮಗನ ಶವಗಳನ್ನು ಕೊನೆಗೂ ಬುಧವಾರ ಸೇನಾ ಪಡೆಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿವೆ.
ಮೃತರು ಚಂದ್ರಾವತಿ (66)ಮತ್ತು ಉಮೇಶ್ (36) ಎನ್ನುವವರಾಗಿದ್ದಾರೆ. ಅಗಸ್ಟ್ 16 ರಂದು ಭೀಕರ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು. ಮನೆ ಕೊಚ್ಚಿ ಹೋಗಲು ಪ್ರಾರಂಭವಾದಾಗ ಜೀವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಬ್ಬರು ತೆರಳುತ್ತಿದ್ದ ವೇಳೆ ನೀರಿಗೆ ಸಿಲುಕಿ ನಾಪತ್ತೆಯಾಗಿದ್ದರು.
ಸಂಬಂಧಿಕರು ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತ ಪಡಿಸಿ ಶವಗಳನ್ನು ಪತ್ತೆ ಹಚ್ಚಿ ಕೊಡುವಂತೆ ಜಿಲ್ಲಾಡಳಿತದ ಬಳಿ ಮನವಿ ಮಾಡಿದ್ದರು.
ಮನವಿ ಹಿನ್ನಲೆಯಲ್ಲಿ ಬುಧವಾರ ಬೆಳೆಗ್ಗೆ 15 ಮಂದಿ ಯೋಧರು ಸ್ಥಳೀಯರೊಂದಿಗೆ ಹುಡುಕಾಟಕ್ಕಿಳಿದಿದ್ದರು.
ದುರಂತ ವೆಂದರೆ ಅಗಸ್ಟ್ 17 ರಂದು ಅಂದರೆ ಕೊಚ್ಚಿ ಹೋದ ಮರುದಿನ ಬೆಳಗ್ಗೆ ಪುತ್ತೂರಿಗೆ ತೆರಳಲು ಸಿದ್ಧತೆ ನಡೆಸಿದ್ದರು ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…