ಕಾಂಗ್ರೆಸ್ನ ಮಾತು ಕೇಳಿ ನಖರಾ ಮಾಡಿದ್ರೆ ಜೋಕೆ
Team Udayavani, Jan 4, 2020, 3:05 AM IST
ಬಳ್ಳಾರಿ: “ಇದು ನಮ್ಮ ದೇಶ..ಇಲ್ಲಿ ಶೇ.80ರಷ್ಟು ನಾವಿದ್ದೇವೆ. ಕಾಂಗ್ರೆಸ್ನ ಬೇಕೂಫ್ಗಳು ಹೇಳುವುದನ್ನು ಕೇಳಿ ನೀವು ಬೀದಿಗೆ ಬಂದರೆ ಎಚ್ಚರ..ಶೇ.80ರಷ್ಟು ಇರುವ ನಾವು ತಿರುಗಿ ಬಿದ್ದರೆ ನಿಮ್ಮ ಪರಿಸ್ಥಿತಿ ಏನು..?’ – ಇದು ಎನ್ಆರ್ಸಿ, ಸಿಎಎ ಕಾಯ್ದೆ ವಿರೋಧಿಗಳಿಗೆ ಶಾಸಕ ಸೋಮಶೇಖರ ರೆಡ್ಡಿ ನೀಡಿದ ಎಚ್ಚರಿಕೆ. ನಗರದಲ್ಲಿ ಶುಕ್ರವಾರ ದೇಶಭಕ್ತ ನಾಗರಿಕ ವೇದಿಕೆ ಎನ್ಆರ್ಸಿ, ಸಿಎಎ ಕಾಯ್ದೆ ಬೆಂಬಲಿಸಿ ಆಯೋಜಿಸಿದ್ದ ಬೃಹತ್ ಮೆರವಣಿಗೆ ಹಾಗೂ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು.
ಹಿಂದೂಗಳು ಎಂದರೆ ಬಂಧುಗಳು ಎನ್ನುತ್ತಲೇ ಮಾತು ಆರಂಭಿಸಿದ ಅವರು, ಸಿಎಎ ವಿರೋಧಿಸುತ್ತಿರುವವರಿಗೆ ಇದು ಎಚ್ಚರಿಕೆ. ಇಲ್ಲಿ ಕೇವಲ ಶೇ.5ರಷ್ಟು ಜನರು ಮಾತ್ರ ಬಂದಿದ್ದಾರೆ. ಇನ್ನು ಶೇ.100ರಷ್ಟು ಜನರು ಬಂದರೆ ಹೇಗಿರುತ್ತದೆ. ಅದಕ್ಕೆ ಜಾಸ್ತಿ ನಖರಾ ಮಾಡಿದರೆ ನಿಮ್ಮ ಪರಿಸ್ಥಿತಿ ಏನಾಗಲಿದೆ ಎಂದು ಯೋಚಿಸಿ ಎಂದು ಕಾಯ್ದೆ ವಿರೋಧಿಸುತ್ತಿರುವವರಿಗೆ ಎಚ್ಚರಿಕೆ ನೀಡಿದರು.
ಪೌರತ್ವ ಕಾಯ್ದೆ ತಿದ್ದುಪಡಿ ಹಾಗೂ ಎನ್ಆರ್ಸಿಯಿಂದ ಯಾರಿಗೂ ಸಮಸ್ಯೆಯಾಗಲ್ಲ. ಒಂದು ವೇಳೆ ನಿಮಗೆ ಹೋಗಬೇಕೆಂದು ಅನಿಸಿದರೆ ನೀವೆಲ್ಲ ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ಹೋಗಬಹುದು. ಇಲ್ಲಿ ನಾವು-ನೀವೆಲ್ಲರೂ ಅಣ್ಣ-ತಮ್ಮಂದಿರ ಥರ ಇದ್ದೇವೆ. ಅದು ಹಾಗೆ ಇರಬೇಕು. ಅದನ್ನು ಬಿಟ್ಟು ಕಾಯ್ದೆಯನ್ನು ವಿರೋ ಧಿಸಿದರೆ ಒಬ್ಬೊಬ್ಬರು ಒಬ್ಬೊಬ್ಬ ಶಿವಾಜಿಯಾಗಿ ಕನಕದುರ್ಗಮ್ಮನ ದರ್ಶನ ಪಡೆದು ಖಡ್ಗ ಹಿಡಿದು ನಿಂತರೆ ಹೇಗೆ? ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್