ಪೂರ್ಣ-ಅಪೂರ್ಣ ಪಠ್ಯದ ನಡುವೆ ವಿದ್ಯಾರ್ಥಿಗಳು
Team Udayavani, Sep 9, 2021, 6:50 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಕಳೆದ ವರ್ಷ ಪಠ್ಯ ಕಡಿತವಾಗಿತ್ತು, ಪರೀಕ್ಷೆಯೂ ನಡೆದಿರಲಿಲ್ಲ. ಈ ವರ್ಷ ಪಠ್ಯ ಕಡಿತವಿಲ್ಲ, ಜತೆಗೆ ಹಿಂದೆ ಕಡಿತವಾದ ಪಠ್ಯದ ಕಲಿಕೆಗೆ ಪ್ರತ್ಯೇಕ ವ್ಯವಸ್ಥೆಯೂ ಇಲ್ಲ. ಈಗ ಪೂರ್ಣ ಪಾಠದ ಹೊರೆಯ ಭಾರವನ್ನು ಸರಿದೂಗಿಸುವುದು ಹೇಗೆ ಎಂಬ ಪ್ರಶ್ನೆ ವಿದ್ಯಾರ್ಥಿಗಳದ್ದು.
ಕೊರೊನಾ ಕಾರಣದಿಂದ 2020-21ನೇ ಸಾಲಿನಲ್ಲಿ ಪ್ರಥಮ ಪಿಯುಸಿ ಪರೀಕ್ಷೆ ನಡೆಸಿಲ್ಲ. ನೇರವಾಗಿ ಎಲ್ಲರನ್ನೂ ದ್ವಿತೀಯ ಪಿಯುಸಿಗೆ ತೇರ್ಗಡೆ ಮಾಡಲಾಗಿತ್ತು. ಜತೆಗೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ಶೇ.30ರಷ್ಟು ಪಠ್ಯ ಕಡಿತ ಮಾಡಲಾಗಿತ್ತು. ಶೇ.70ರಷ್ಟು ಪಠ್ಯವನ್ನೂ ಪೂರ್ಣ ಪ್ರಮಾಣ ದಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಲು ಅಥವಾ ವಿದ್ಯಾರ್ಥಿಗಳು ಅದನ್ನು ಅಭ್ಯಾಸ ಮಾಡಲು ಸಾಧ್ಯವಾಗಿಲ್ಲ. ಈ ವರ್ಷ ಪಠ್ಯ ಕಡಿತದ ಚಿಂತನೆ ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಿಲ್ಲ. ಕಳೆದ ವರ್ಷದಲ್ಲಿ ಕಲಿಯಲು ಸಾಧ್ಯವಾಗದ ವಿಷಯಗಳಿಗೆ ಬ್ರಿಡ್ಜ್ ಕೋರ್ಸ್ ಕೂಡ ರೂಪಿಸಿಲ್ಲ. ಹೀಗಾಗಿ ಕಲಿಕೆಯ ನಿರಂತರತೆ ಕಷ್ಟವಾಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ಕಳೆದ ವರ್ಷ ಎಸೆಸೆಲ್ಸಿಯಲ್ಲೂ ಪಠ್ಯ ಕಡಿತ ಮಾಡಲಾಗಿದ್ದು, ವಾರ್ಷಿಕ ಪರೀಕ್ಷೆ ಸರಳವಾಗಿ ನಡೆದಿತ್ತು. ಆನ್ಲೈನ್, ದೂರದರ್ಶನ ಪಾಠ, ಪೂರ್ವ ಮುದ್ರಿತ ತರಗತಿಗಳು ಮೂಲಕವಷ್ಟೇ ಕಲಿತಿದ್ದು, ಈಗ ಪ್ರಥಮ ಪಿಯುಸಿಯಲ್ಲಿ ಸಮಸ್ಯೆ ಎದುರಾಗಲಿದೆ ಎಂಬ ಆತಂಕ ಮತ್ತೂಂದು ವರ್ಗದ ವಿದ್ಯಾರ್ಥಿಗಳದ್ದಾಗಿದೆ.
ಬ್ರಿಡ್ಜ್ಕೋರ್ಸ್ ಬೇಕಿತ್ತು :
ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡಲು ಕನಿಷ್ಠ ಒಂದೂವರೆ ತಿಂಗಳ ಬ್ರಿಡ್ಜ್ ಕೋರ್ಸನ್ನಾದರೂ ಇಲಾಖೆ ರೂಪಿಸಬೇಕು ಎಂಬುದು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಆಗ್ರಹವಾಗಿದೆ.
ಯಾವುದೇ ಸೂಚನೆ ಬಂದಿಲ್ಲ :
ಈ ವರ್ಷ ಪಠ್ಯ ಕಡಿತ ಸಂಬಂಧಿಸಿ ಯಾವುದೇ ಸೂಚನೆ ಬಂದಿಲ್ಲ. ಬದಲಾಗಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಠ್ಯಕ್ರಮಗಳನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಯಾವ ತಿಂಗಳಲ್ಲಿ ಯಾವ ಪಾಠ ಮಾಡಬೇಕು ಎಂಬುದನ್ನು ಸೂಚಿಸಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ಕಲಿಕೆಗೆ ಬೇಕಾದ ಪೂರ್ಣ ಅಂಶಗಳ ಬೋಧನೆ ಸಾಧ್ಯವಿಲ್ಲ. ಕೇವಲ ಪರೀಕ್ಷೆಗೆ ಬೇಕಾದಷ್ಟು ಅಂಶಗಳನ್ನು ಬೋಧಿಸಲು ಮಾತ್ರ ಸಾಧ್ಯವಿದೆ. ಬ್ರಿಡ್ಜ್ ಕೋರ್ಸ್ ಬಗ್ಗೆಯೂ ಯಾವುದೇ ಸೂಚನೆ ಬಂದಿಲ್ಲ. ಈ ವರ್ಷ ಸಿಗಬಹುದಾದ ಅವಧಿಗೆ ಅನು ಗುಣವಾಗಿ ಪಾಠ ಮಾಡುವ ಬಗ್ಗೆ ಸೂಚನೆ ಬಂದಿದೆ ಎಂದು ಸರಕಾರಿ ಪಿಯು ಕಾಲೇಜಿನ ಉಪನ್ಯಾಸಕರೊಬ್ಬರು ತಿಳಿಸಿದ್ದಾರೆ.
ಪಠ್ಯ ಸಿದ್ಧವಿದೆ :
ಈ ವರ್ಷ ಪಠ್ಯ ಕಡಿತದ ಚಿಂತನೆ ಇಲ್ಲ. 2021-22ನೇ ಸಾಲಿನ ಪಠ್ಯದ ಸಂಪೂರ್ಣ ಮಾಹಿತಿಯನ್ನು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದೇವೆ. ವಿದ್ಯಾರ್ಥಿಗಳು ಹಾಗೂ ಬೋಧಕರು ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಬ್ರಿಡ್ಜ್ ಕೋರ್ಸ್ ಅಧಿಕೃತವಾಗಿ ರೂಪಿಸಿಲ್ಲ. ಬದಲಾಗಿ ಉಪನ್ಯಾಸಕರು ತಮ್ಮ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲಿಕೆಯ ಮಟ್ಟಕ್ಕೆ ಅನುಗುಣವಾಗಿ ಹಿಂದಿನ ತರಗತಿಗಳ ಕೆಲವು ವಿಷಯಗಳ ಬಗ್ಗೆ ಮಾಹಿತಿ ನೀಡಿ, ಈ ವರ್ಷದ ಕಲಿಕೆಗೆ ಅನುಕೂಲವಾಗುವಂತೆ ಸಜ್ಜುಗೊಳಿಸಲು ಅವಕಾಶವಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Speed Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!
BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್ ಜಾಮ್
Retail Market; ತಾಪಮಾನ ಏರಿಕೆ: ಮೊಟ್ಟೆ ದರ ಇಳಿಕೆ
Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್ ಮಾಡಿಸಲು ಕ್ರಮ: ಪರಂ
Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫಲ್ಯ ಕಾರಣ: ಅಶೋಕ್