ಕುರಿ ಅಡ್ಡ ಬಂದದ್ದಕ್ಕೆ ಮಹಿಳೆಯ ಬಟ್ಟೆ ಎಳೆದ
Team Udayavani, Dec 29, 2019, 3:00 AM IST
ನಾಗಮಂಗಲ (ಮಂಡ್ಯ): ಕುರಿಗಳನ್ನು ಕಾರಿಗೆ ಅಡ್ಡ ಬಿಟ್ಟಳೆಂಬ ಕಾರಣಕ್ಕೆ ಮಹಿಳೆಯ ಬಟ್ಟೆ ಹಿಡಿದು ಎಳೆದಾಡಿದ ನಿವೃತ್ತ ಅರಣ್ಯಾಧಿಕಾರಿಯ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಬಂಕಾಪುರದ ತೋಟದ ಮನೆಯ ಬಳಿ ಗ್ರಾಮದ ಜಯರತ್ನ ಎಂಬುವರು ಕುರಿ ಮೇಯಿಸುತ್ತಿದ್ದರು.
ಈ ವೇಳೆ, ಅದೇ ಊರಿನಲ್ಲಿ ಜಲ್ಲಿ ಕ್ರಷರ್ ನಡೆಸುತ್ತಿರುವ ಉಮಾದೇವಿ ಎಂಬುವರ ಪತಿ, ನಿವೃತ್ತ ಅರಣ್ಯಾಧಿಕಾರಿ ರಾಮಲಿಂಗೇಗೌಡ ಕಾರಿನಲ್ಲಿ ಬರುತ್ತಿದ್ದ. ಕುರಿಗಳು ಕಾರಿಗೆ ಅಡ್ಡ ಬಂದಿದ್ದಕ್ಕೆ ಕೋಪಗೊಂಡ ರಾಮಲಿಂಗೇಗೌಡ, ಜಯರತ್ನರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ.
ಮಾತಿಗೆ, ಮಾತು ಬೆಳೆದಾಗ ರಾಮಲಿಂಗೇಗೌಡ, ಮಹಿಳೆಯ ಬಟ್ಟೆ ಎಳೆಯತೊಡಗಿದ. ಜಯರತ್ನರ ಕಿರುಚಾಟ ಕೇಳಿ ಮನೆಯಲ್ಲಿದ್ದ ಗಂಡ ರಾಮಚಂದ್ರ ಹಾಗೂ ಇತರರು ಓಡಿ ಬಂದರು. ಅರೆಬಟ್ಟೆಯಲ್ಲಿ ನೆಲದ ಮೇಲೆ ಬಿದ್ದಿದ್ದ ಪತ್ನಿಯನ್ನು ಮೇಲಕ್ಕೆತ್ತಿದ ರಾಮಚಂದ್ರ, ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ