ಇನ್ಲ್ಯಾಂಡ್ ಪ್ರಾಪರ್ಟಿ ಮೇಳಕ್ಕೆ ಅಪೂರ್ವ ಸ್ಪಂದನೆ
Team Udayavani, Aug 19, 2018, 11:24 AM IST
ಮಂಗಳೂರು: ಕರಾವಳಿ ಪ್ರಾಂತ್ಯದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಇನ್ಲ್ಯಾಂಡ್ ಬಿಲ್ಡರ್ ಸಂಸ್ಥೆಯು ನಡೆಸುತ್ತಿರುವ ಇನ್ಲ್ಯಾಂಡ್ ಪ್ರಾಪರ್ಟಿ ಮೇಳಕ್ಕೆ ಅದ್ಭುತ ಸ್ಪಂದನೆ ವ್ಯಕ್ತವಾಗಿದೆ.
ಕೊಡಿಯಾಲಬೈಲಿನ ಇನ್ಲ್ಯಾಂಡ್ ಆರ್ನೇಟ್ ಮೂರನೇ ಅಂತಸ್ತಿನಲ್ಲಿ ಈ ಮೇಳವು ಆ.8ರಂದು ಆರಂಭವಾಗಿದ್ದು, ಆ.26ರವರೆಗೆ ನಡೆಯಲಿದೆ. ಇನ್ಲ್ಯಾಂಡ್ ಗ್ರೂಪ್ನ ಚೇರ್ಮನ್ ಸಿರಾಜ್ ಅಹಮದ್, ನಿರ್ದೇಶಕ ಮೆರಾಜ್ ಯೂಸುಫ್ ಅವರ ಉಪಸ್ಥಿತಿಯಲ್ಲಿ ವಾಲ್ಟರ್ ನಂದಳಿಕೆ ಉದ್ಘಾಟಿಸಿದರು. ವೈ.ಅಬ್ದುಲ್ಲ ಕುಞಿ, ಎಂ.ಪಿ.ಶೆಣೈ, ಎ.ಕೆ.ವಿನೋದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
“ಇನ್ಲ್ಯಾಂಡ್ನ ನಿರ್ಮಾಣದ ಗುಣಮಟ್ಟ, ವಿಶ್ವಾಸಾರ್ಹತೆಯ ಹಿನ್ನೆಲೆಯಲ್ಲಿ ಗ್ರಾಹಕರು ಇನ್ಲ್ಯಾಂಡ್ ಹೋಂಗಳ ಖರೀದಿಗೆ ಸದಾ ಉತ್ಸುಕರಾಗಿದ್ದಾರೆ. ಈ ಖರೀದಿಯ ಜತೆ ಅನೇಕ ರಿಯಾಯಿತಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಆಶಯದ ಅಪಾರ್ಟ್ಮೆಂಟ್ಗಳ ಖರೀದಿಗೆ ಗ್ರಾಹಕರಿಗೆ ಇದು ಸುವರ್ಣಾವಕಾಶವಾಗಿದೆ’ ಎಂದು ಸಂಸ್ಥೆಯ ಸೀನಿಯರ್ ಮಾರ್ಕೆಟಿಂಗ್ ಮೆನೇಜರ್ ಉಲ್ಲಾಸ್ ಕದ್ರಿ ಅವರು ಹೇಳಿದ್ದಾರೆ.
ಸಂಸ್ಥೆಯು 5ರಿಂದ 17 ಲಕ್ಷ ರೂ. ರಿಯಾಯಿತಿ ನೀಡುತ್ತಿದೆ. 43 ಲಕ್ಷ ರೂ.ನ 2 ಬಿಎಚ್ಕೆಯು 37 ಲಕ್ಷ ರೂ.ಗೆ ದೊರೆಯುತ್ತಿದೆ. ರೆರಾ ಪ್ರಮಾಣಪತ್ರ ಹೊಂದಿರುವ ಇನ್ಲ್ಯಾಂಡ್ ಮಂಗಳೂರು, ಬೆಂಗಳೂರು, ಉಳ್ಳಾಲ, ಪುತ್ತೂರುಗಳಲ್ಲಿ ಯೋಜನೆಗಳನ್ನು ನಿರ್ವಹಿಸುತ್ತಿದೆ. ರಾಷ್ಟ್ರೀಯ, ರಾಜ್ಯ ಪ್ರಶಸ್ತಿಗಳನ್ನು ಪಡೆಯುತ್ತಿದೆ.
ನೂತನ ಗ್ರಾಹಕರು ಅಪಾರ್ಟ್ಮೆಂಟ್ಗಳನ್ನು ಖರೀದಿಸುತ್ತಿದ್ದಾರೆ. ಹಾಲಿ ಗ್ರಾಹಕರು ಹೆಚ್ಚುವರಿ ಅಪಾರ್ಟ್ಮೆಂಟ್ ಖರೀದಿಗೆ ಹೂಡಿಕೆ ಮಾಡುತ್ತಿದ್ದಾರೆ. ಗಲ್ಫ್ ಸಹಿತ ಅನಿವಾಸಿ ಭಾರತೀಯರು ಖರೀದಿಸುತ್ತಿದ್ದಾರೆ ಎಂದವರು ವಿವರಿಸಿದರು. ಪೂರಕ ಮಾಹಿತಿಗೆ ಭೇಟಿ ನೀಡಿ: www.inlandbuilders.net
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ
D. K. Shivakumar ಪೆನ್ಡ್ರೈವ್ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ
Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲು
Hassan Pen Drive Case; ಕಾರ್ತಿಕ್ ಪೆನ್ಡ್ರೈವ್ ಕೊಟ್ಟಿದ್ದು ನಿಜ: ದೇವರಾಜೇಗೌಡ