ಹೈಕೋರ್ಟ್ನಲ್ಲಿ ಥರ್ಮಲ್ ಸ್ಕ್ರೀನಿಂಗ್
Team Udayavani, Mar 18, 2020, 3:07 AM IST
ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿರುವ ಹೈಕೋರ್ಟ್, ಮಂಗಳವಾರದಿಂದ ನ್ಯಾಯಾಲಯಕ್ಕೆ ಭೇಟಿ ನೀಡಿದ ಕಕ್ಷಿದಾರರರು, ಸಿಬ್ಬಂದಿ, ನ್ಯಾಯಾಂಗ ಹಾಗೂ ಸರ್ಕಾರಿ ಅಧಿಕಾರಿಗಳು, ಸಂದರ್ಶಕರನ್ನು “ಥರ್ಮಲ್ ಸ್ಕ್ರೀನಿಂಗ್’ಗೆ ಒಳಪಡಿಸಲಾಯಿತು.
ಹೈಕೋರ್ಟ್ನ ಎಲ್ಲ ಪ್ರವೇಶ ದ್ವಾರಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ನಡೆಸಿದರು. ಆ ಕಾರ್ಯವನ್ನು ಸ್ವತಃ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಅವರೇ ಬೆಳಗ್ಗೆ ಕಲಾಪ ಆರಂಭವಾಗುವ ಮುನ್ನ ಹಾಗೂ ಮಧ್ಯಾಹ್ನ ಭೋಜನ ವಿರಾಮದ ವೇಳೆ ಪರಿಶೀಲಿಸಿದರು.
ಅಧಿಕಾರಿಗೆ ತರಾಟೆ: ಮಾಸ್ಕ್ ಧರಿಸಿ ಕೋರ್ಟ್ ಹಾಲ್ನಲ್ಲಿ ಕೂತಿದ್ದ ಸರ್ಕಾರಿ ಅಧಿಕಾರಿಗೆ ಮುಖ್ಯ ನ್ಯಾಯಮೂರ್ತಿಗಳು ತರಾಟೆಗೆ ತೆಗೆದು ಕೊಂಡರು. ಮಾಸ್ಕ್ ಧರಿಸಿ ಕೂತಿದ್ದ ವ್ಯಕ್ತಿಯನ್ನು ಗಮ ನಿಸಿದ ಸಿಜೆ, ಆತ ಯಾರೆಂದು ವಿಚಾರಿಸುವಂತೆ ಕೋರ್ಟ್ ಆಫೀಸರ್ಗೆ ಸೂಚಿಸಿದರು. ವಕೀಲರೊಂದಿಗೆ ಬಂದಿರುವುದಾಗಿ ಆ ಅಧಿಕಾರಿ ತಿಳಿಸಿದರು.
“ಮಾಸ್ಕ್ ಹಾಕಿಕೊಂಡಿರುವುದೇಕೆ?’ ಎಂದು ಸಿಜೆ ಮರು ಪ್ರಶ್ನೆ ಮಾಡಿದಾಗ, “ಕೊರೊನಾ ವೈರಸ್ ಭೀತಿಯಿಂದ ಮಾಸ್ಕ್ ಹಾಕಿಕೊಂಡಿದ್ದಾರೆ’ ಎಂದು ವಕೀಲರು ಉತ್ತರಿಸಿದರು. ಅದಕ್ಕೆ, “ಕೊರೊನಾ ವೈರಸ್ ಸೋಂಕಿತರಷ್ಟೇ ಮಾಸ್ಕ್ ಧರಿಸಬೇಕು’ ಎಂದರಲ್ಲದೆ, “ಸೋಂಕು ಇದ್ದರೆ, ಆತನನ್ನು ಕೋರ್ಟ್ನಿಂದ ಹೊರ ಹಾಕಿ’ ಎಂದು ಸಿಜೆ ಹೇಳಿದರು. ತಮಗೆ “ಕೊರೊನಾ ಸೋಂಕು ಇಲ್ಲ’ ಎಂದು ತಿಳಿಸಿದ ಆ ಅಧಿಕಾರಿ, ಮಾಸ್ಕ್ ತೆಗೆದು ಕಲಾಪ ವೀಕ್ಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ