ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಿ: ಮುಖ್ಯಮಂತ್ರಿಗಳಿಗೆ ಎಚ್ ಕೆ ಪಾಟೀಲ್ ಮನವಿ
Team Udayavani, May 1, 2020, 11:09 AM IST
ಬೆಂಗಳೂರು: ಕೋವಿಡ್-19 ಲಾಕ್ ಡೌನ್ ಕಾರಣದಿಂದ ರಾಜ್ಯದಲ್ಲಿ ಸದ್ಯ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ಮದ್ಯ ಮಾರಾಟವಿಲ್ಲದ ಕಾರಣ ಹಲವಷ್ಟು ಕುಟುಂಬಗಳು ಸಂತೋಷದಿಂದಿದೆ. ಹಾಗಾಗಿ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಎಚ್ ಕೆ ಪಾಟೀಲ್ ಮನವಿ ಮಾಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸುದೀರ್ಘ ಪತ್ರ ಬರೆದಿರುವ ಎಚ್ ಕೆ ಪಾಟೀಲ್ ಅವರು, ಸದ್ಯ ಮದ್ಯ ನಿಷೇಧ ಆಗಿರುವ ಕಾರಣ ಕುಟುಂಬಗಳಲ್ಲಿ ಶಾಂತಿ ನೆಲೆಸಿದೆ. ಮಕ್ಕಳು ಒಳ್ಳೆಯ ಸಂಸ್ಕಾರ ಪಡೆಯಲು ಅನುಕೂಲವಾಗಿದೆ. ಮಹಿಳೆಯರ ಶೋಷಣೆ ತಪ್ಪಿದೆ. ನಿತ್ಯ ಕಣ್ಣೀರಿನಲ್ಲಿ ನರಕಯಾತನೆಯಲ್ಲು ಮಲಗುತ್ತಿದ್ದ ನಮ್ಮ ಸೋದರಿಯರು ಈಗ ನೆಮ್ಮದಿಯಲ್ಲಿ ರಾತ್ರಿ ಕಳೆಯತ್ತಿದ್ದಾರೆ ಜನತೆಯ ಶಾಂತಿ ನೆಮ್ಮದಿ ಹಣಕೊಟ್ಟರೆ ಬರುವುದಿಲ್ಲ ಎಂದಿದ್ದಾರೆ.
ರಾಜ್ಯದ ಬೊಕ್ಕಸಕ್ಕೆ ಆದಾಯ ತರುವ ಒಂದು ಮೂಲ ಇಲ್ಲದಂತೆ ಮಾಡುವುದು ತಪ್ಪು ಎನ್ನುವರು ಇದ್ದಾರೆ. ಆದರೆ ನಿಷೇಧ ಮಾಡಿದರೆ ಅದು ಶ್ರೇಷ್ಠ ಕೆಲಸ . ಮುಖ್ಯಮಂತ್ರಿಗಳು ಅಂತಹ ಹೆಜ್ಜೆ ಇಡಬೇಕೆಂದು ಆಶಿಸುತ್ತೇಬನೆ ಎಂದು ಎಚ್ ಕೆ ಪಾಟೀಲರು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು
ಡ್ರಗ್ಸ್ ಕೊಟ್ಟು, ಸಂಸದೆಗೇ ಲೈಂಗಿಕ ಕಿರುಕುಳ ಆರೋಪ; ಆಸ್ಟ್ರೇಲಿಯಾ ಎಂಪಿ
Paris Olympics: ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತದ ಮಹಿಳಾ, ಪುರುಷರ ರಿಲೇ ತಂಡ
Cipla and Glenmark; ಭಾರತದಲ್ಲಿ ತಯಾರಾದ ಅಸ್ತಮಾ ಔಷಧ ವಾಪಸ್
ಕ್ರಿಕೆಟ್ ಆಡುವಾಗ ಖಾಸಗಿ ಅಂಗಕ್ಕೆ ತಾಗಿದ ಚೆಂಡು: ಕುಸಿದು ಬಿದ್ದು 11 ವರ್ಷದ ಬಾಲಕ ಮೃತ್ಯು