ಐವರು ಪೊಲೀಸ್ ಅಧಿಕಾರಿಗಳ ವರ್ಗಾವಣೆ; ರಾಜ್ಯ ಸರ್ಕಾರ ಆದೇಶ
Team Udayavani, Aug 5, 2022, 10:09 PM IST
ಬೆಂಗಳೂರು: ನಗರದ ಐವರು ಪೊಲೀಸ್ ಅಧಿಕಾರಿಗಳನ್ನು ವಿವಿಧೆಡೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಮೈಕೋ ಲೇಔಟ್ ಉಪವಿಭಾಗದ ಎಸಿಪಿ ಕರಿಬಸವನಗೌಡ (ಲೋಕಾಯುಕ್ತ, ಎಸ್ಐಟಿ), ಮಡಿವಾಳ ಉಪ ವಿಭಾಗದ ಎಸಿಪಿ ಸುಧೀರ್.ಎಂ.ಹೆಗ್ಡೆ (ಕೆಎಸ್ಎಚ್ಆರ್ಸಿ, ಬೆಂಗಳೂರು), ಸಿಸಿಬಿ ವಿಭಾಗದ ಎಸಿಪಿ ಎಚ್.ಎನ್.ಧರ್ಮೇಂದ್ರ (ಸಿಐಡಿ), ಸಿಐಡಿಗೆ ವರ್ಗಾವಣೆ ಆದೇಶದಲ್ಲಿದ್ದ ಕೆ.ಸಿ.ಲಕ್ಷ್ಮೀನಾರಾಯಣ್ (ಮಡಿವಾಳ ಉಪ ವಿಭಾಗದ ಎಸಿಪಿ), ಡಿವೈಎಸ್ಪಿ ಎನ್.ಪ್ರತಾಪ್ ರೆಡ್ಡಿ (ಮೈಕೋಲೇಔಟ್ ಉಪ ವಿಭಾಗದ ಎಸಿಪಿ) ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.