Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ
Team Udayavani, Apr 19, 2024, 1:00 AM IST
ಬೇಲೂರು: ಮಲೆನಾಡು ಭಾಗದ ಜನರಲ್ಲಿ ಭೀತಿ ಸೃಷ್ಟಿಸಿದ್ದ ದೈತ್ಯ ಕರಡಿ ಆನೆಯನ್ನು ಅರಣ್ಯ ಇಲಾಖೆ ಸಿಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಭಿಮನ್ಯು ನೇತೃತ್ವದಲ್ಲಿ ಭೀಮ, ಹರ್ಷ, ಪ್ರಶಾಂತ, ಸುಗ್ರೀವ, ಧನಂಜಯ ಅಶ್ವತ್ಥಾಮ ಮತ್ತು ಮಹೀಂದ್ರ ಆನೆಗಳು ಸೇರಿ ಕಾರ್ಯಾಚರಣೆ ನಡೆಸಿದ್ದು, ತಾಲೂಕಿನ ವಾಟೇಹಳ್ಳಿಯ ಐ.ಬಿ.ಸಿ ಕಾಫಿ ತೋಟದಲ್ಲಿ ಕರಡಿ ಆನೆಯನ್ನು ಸೆರೆ ಹಿಡಿಯಲಾಗಿದೆ.
ಈ ಹಿಂದೆ ತಾಲೂಕಿನ ಮತ್ತಾವರ ಬಳಿ ಕೂಲಿ ಕಾರ್ಮಿಕ ವಸಂತ್ ಎಂಬವರನ್ನು ಕರಡಿ ಆನೆ ಕೊಂದಿತ್ತು.