ಮೂಲಸೌಕರ್ಯಗಳೇ ಇಲ್ಲದ ಏರೋಸ್ಪೇಸ್‌ ಪಾರ್ಕ್‌!


Team Udayavani, Feb 13, 2017, 3:45 AM IST

aerospace.jpg

ಬೆಂಗಳೂರು: ನೂರಾರು ಎಕರೆ ಭೂಮಿ ಇದೆ. ಆದರೆ, ಉದ್ಯಮಿಗಳಿಗೆ ಆಸಕ್ತಿ ಇಲ್ಲ. ಪ್ರತ್ಯೇಕ ನೀತಿ ರೂಪಿಸಲಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅದರ ಉಪಯೋಗ ಆಗುತ್ತಿಲ್ಲ. ವೈಮಾನಿಕ ಕ್ಷೇತ್ರಕ್ಕಾಗಿಯೇ ಪ್ರತ್ಯೇಕ ಪಾರ್ಕ್‌ ಇದೆಯಾದರೂ ಅಲ್ಲಿ ಮೂಲಸೌಲಭ್ಯಗಳಿಲ್ಲ! – ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳನ್ನು ಹೊಂದಿರುವ ಬೆಂಗಳೂರಿನ ಸ್ಥಿತಿ ಇದು.

ಸರ್ಕಾರ ವೈಮಾನಿಕ ಕ್ಷೇತ್ರವನ್ನು ಉತ್ತೇಜಿಸಲು ಏರೋಸ್ಪೇಸ್‌ ಪಾರ್ಕ್‌, ಏರೋಸ್ಪೇಸ್‌ ನೀತಿ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿದೆ. ಆದರೆ, ಅವುಗಳು ಕಾರ್ಯರೂಪದಲ್ಲಿ ಬರುತ್ತಿರುವುದು ವಿಳಂಬವಾಗುತ್ತಿರುವುದರಿಂದ
ಪರೋಕ್ಷವಾಗಿ ರಾಜ್ಯದ ವೈಮಾನಿಕ ಕ್ಷೇತ್ರದ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿದೆ. ಸರ್ಕಾರ ಸುಮಾರು ಏಳು ವರ್ಷಗಳ ಹಿಂದೆಯೇ ಏರೋಸ್ಪೇಸ್‌ ಪಾರ್ಕ್‌ ಘೋಷಿಸಿದೆ. 732 ಎಕರೆಯಲ್ಲಿ ವಿಮಾನ ತಯಾರಿಕೆ ಕಂಪನಿಗಳಿಗೆ ಹಾಗೂ 252 ಎಕರೆಯಲ್ಲಿ ವಿಶೇಷ ಆರ್ಥಿಕ ವಲಯ ಸೇರಿದಂತೆ 988 ಎಕರೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ
ವಿಮಾನ ನಿಲ್ದಾಣ (ಕೆಐಎಎಲ್‌) ಬಳಿ ಏರೋಸ್ಪೇಸ್‌ ಪಾರ್ಕ್‌ ಕೂಡ ತಲೆಯೆತ್ತಿದೆ. ಆದರೆ, ಇದುವರೆಗೆ ಅಲ್ಲಿ ಏಳು ಕಂಪನಿಗಳು ಕೂಡ ಬಂದಿಲ್ಲ.

ಸೌಲಭ್ಯಗಳ ಕೊರತೆ; ಅಭಿವೃದ್ಧಿಗೆ ಪೆಟ್ಟು:
ಏರೋಸ್ಪೇಸ್‌ ಪಾರ್ಕ್‌ನಲ್ಲಿ ಇನ್ನೂ ಸಮರ್ಪಕ ನೀರಿನ ಸೌಲಭ್ಯವಿಲ್ಲ. ವಿದ್ಯುತ್‌ ಸಂಪರ್ಕ ಇದ್ದರೂ, ಶಾಶ್ವತ ವಿದ್ಯುತ್‌ ಪೂರೈಕೆಗೆ ಅಲ್ಲೊಂದು ಗ್ರಿಡ್‌ ಸ್ಥಾಪಿಸಿಲ್ಲ. ಸೂಕ್ತ ಸಾರಿಗೆ ಸಂಪರ್ಕವೂ ಇಲ್ಲ. ಅಂದಾಜು ಮೂರು ಸಾವಿರ ಕೈಗಾರಿಕೆಗಳು ಬರುವ ಈ ಜಾಗದಲ್ಲಿ 30ರಿಂದ 40 ಉದ್ಯಮಗಳು ಬರುತ್ತಿವೆ. ಅದರಲ್ಲೂ ಏರೋಸ್ಪೇಸ್‌ಗೆ ಮೀಸಲಿಟ್ಟ
988 ಎಕರೆಯಲ್ಲಿ ಬೆರಳೆಣಿಕೆಯಷ್ಟು ಕೈಗಾರಿಕೆಗಳು ಮಾತ್ರ ಬಂದಿವೆ. 

ಇದರಿಂದ ವೈಮಾನಿಕ ಕ್ಷೇತ್ರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎಂದು ಸ್ವತಃ ಏರೋಸ್ಪೇಸ್‌ ಪಾರ್ಕ್‌ನಲ್ಲಿ
ಕೈಗಾರಿಕೆಯನ್ನು ಸ್ಥಾಪಿಸುತ್ತಿರುವ ಕರ್ನಾಟಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಘ (ಕಾಸಿಯಾ) ಮಾಜಿ ಅಧ್ಯಕ್ಷ ವಿ.ಕೆ.ದೀಕ್ಷಿತ್‌ ಹೇಳುತ್ತಾರೆ.

ಸರ್ಕಾರ ನಿರೀಕ್ಷಿಸಿದ್ದ ಸುಮಾರು 70 ಯೋಜನೆಗಳಿಂದ 4,572 ಕೋಟಿ ರೂ. ಹೂಡಿಕೆಗೆ ಮಂಜೂರಾತಿ ದೊರೆತಿದ್ದರೂ ಐದು ಯೋಜನೆಗಳು ಮಾತ್ರ ಸಾಕಾರಗೊಂಡಿವೆ. ನೀರೂ ಇಲ್ಲ, ವಿದ್ಯುತ್ತೂ ಇಲ್ಲ. ಕಾರ್ಖಾನೆಗಳಿಗೆ ಬೇಕಾದ ಸಂಸ್ಕರಿಸಿದ ನೀರು, ಶಾಶ್ವತ ವಿದ್ಯುತ್‌ ಸಂಪರ್ಕವನ್ನು ನೀಡಲು ಇದುವರೆಗೆ ಸಾಧ್ಯವಾಗಿಲ್ಲ. ಹಾಗಾಗಿ, ವಿವಿಧ ಕಂಪನಿಗಳು ವರ್ಷಗಳಿಂದ ತಮಗೆ ಮಂಜೂರಾದ ಜಾಗದಲ್ಲಿ ನಾಮಫ‌ಲಕಗಳನ್ನು ಹಾಕಿ, ಮೂಲಸೌಕರ್ಯಗಳಿಗಾಗಿ ಕಾಯುತ್ತಿವೆ ಎಂದು ಉದ್ಯಮಿಗಳು ಆರೋಪಿಸುತ್ತಾರೆ.

ಹಂತ-ಹಂತವಾಗಿ ಬರಲಿವೆ; ಆಯುಕ್ತರು: ಆದರೆ, ಈಗಾಗಲೇ 20ರಿಂದ 23 ಕಂಪೆನಿಗಳು ಏರೋಸ್ಪೇಸ್‌ ಪಾರ್ಕ್‌ನಲ್ಲಿ ಬಂದಿವೆ. ಈ ಪೈಕಿ ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಂಪೆನಿಗಳು ಇದೇ ಫೆ. 15ರಂದು ಉದ್ಘಾಟನೆಗೊಳ್ಳಲಿವೆ. ಮಾರ್ಚ್‌ನಲ್ಲಿ ಇನ್ನೂ ನಾಲ್ಕೈದು ಕಂಪೆನಿಗಳು ಕಾರ್ಯಾರಂಭ ಮಾಡಲಿವೆ. ಹೀಗೆ ಹಂತ-ಹಂತವಾಗಿ ಈ ಕೆಲಸ ಆಗುತ್ತಿದೆ. ಪ್ರಮುಖ ಮೂಲಸೌಕರ್ಯಗಳ ಕೊರತೆ ಯಾವುದೂ ಇಲ್ಲ ಎಂದು ಕೈಗಾರಿಕೆ
ಇಲಾಖೆ ಆಯುಕ್ತ ಗೌರವ್‌ ಗುಪ್ತ ಸ್ಪಷ್ಟಪಡಿಸುತ್ತಾರೆ.

“ನೀತಿ ಸಮರ್ಪಕ ಅನುಷ್ಠಾನ ಆಗ್ತಿಲ್ಲ’: ರಾಜ್ಯದಲ್ಲಿ ಏರೋಸ್ಪೇಸ್‌ ಪಾರ್ಕ್‌, ಏರೋಸ್ಪೇಸ್‌ ನೀತಿ ಇದೆ. ಆದರೆ, ಅದು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಮೂಲಸೌಕರ್ಯಗಳ ಕೊರತೆ ಒಂದೆಡೆಯಾದರೆ, ನೀತಿಯ ಸಮರ್ಪಕ ಅನುಷ್ಠಾನದ ಕೊರತೆ ಮತ್ತೂಂದೆಡೆ ಇದೆ. ಏರೋಸ್ಪೇಸ್‌ ನೀತಿ-2014-19ರಲ್ಲಿ ಐದು ವರ್ಷಗಳಲ್ಲಿ ಎಲ್ಲ ಮೂಲಸೌಕರ್ಯ ಕಲ್ಪಿಸಲಾಗುವುದು. ಏಕಗವಾಕ್ಷಿ ಪದ್ಧತಿ ಅಡಿ ಕೈಗಾರಿಕೆಗಳಿಗೆ ಸಂಬಂಧಿಸಿದ ಮಂಜೂರಾತಿ ದೊರೆಯಲಿದೆ ಎಂದು ಹೇಳಲಾಗಿದೆ. ಆದರೆ, ವಾಸ್ತವವಾಗಿ ಮಂಜೂರಾತಿಗೆ ತಿಂಗಳುಗಟ್ಟಲೆ ಅಲೆಯಬೇಕಿದೆ
ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)ದ ಅಧ್ಯಕ್ಷ ಎ. ಪದ್ಮನಾಭ ಬೇಸರ ವ್ಯಕ್ತಪಡಿಸುತ್ತಾರೆ. 

*ವಿಜಯಕುಮಾರ್ ಚಂದರಗಿ

ಟಾಪ್ ನ್ಯೂಸ್

Mulki ಬಪ್ಪನಾಡು: ಹೆದ್ದಾರಿ ಬದಿ ನಿಲ್ಲಿಸಿದ್ದ ಬೈಕ್‌ ಕಳವು

Mulki ಬಪ್ಪನಾಡು: ಹೆದ್ದಾರಿ ಬದಿ ನಿಲ್ಲಿಸಿದ್ದ ಬೈಕ್‌ ಕಳವು

Road mishap ಕಾರುಗಳ ಢಿಕ್ಕಿ; ಹನ್ನೆರಡು ಮಂದಿಗೆ ಗಾಯ

Road mishap ಕಾರುಗಳ ಢಿಕ್ಕಿ; ಹನ್ನೆರಡು ಮಂದಿಗೆ ಗಾಯ

Kadaba ಜಾಗಕ್ಕೆ ಅಕ್ರಮ ಪ್ರವೇಶ, ಜೀವ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು

Kadaba ಜಾಗಕ್ಕೆ ಅಕ್ರಮ ಪ್ರವೇಶ, ಜೀವ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು

Kinnigoli ಹಲಸಿನ ಮರದಿಂದ ಬಿದ್ದು ವ್ಯಕ್ತಿ ಸಾವು

Kinnigoli ಹಲಸಿನ ಮರದಿಂದ ಬಿದ್ದು ವ್ಯಕ್ತಿ ಸಾವು

Thekkatte ಖಾಸಗಿ ಬಸ್‌ ಢಿಕ್ಕಿ; ವ್ಯಕ್ತಿ ಸ್ಥಳದಲ್ಲೇ ಸಾವು

Thekkatte ಖಾಸಗಿ ಬಸ್‌ ಢಿಕ್ಕಿ; ವ್ಯಕ್ತಿ ಸ್ಥಳದಲ್ಲೇ ಸಾವು

dhಕಲ್ಮಂಜ ಅಡಿಕೆ ವ್ಯಾಪಾರಿ ಮನೆ ದರೋಡೆ ಪ್ರಕರಣ; ಆರೋಪಿಗಳ ಸಹಿತ 8.42 ಲಕ್ಷ ರೂ. ಸೊತ್ತು ವಶ

ಕಲ್ಮಂಜ ಅಡಿಕೆ ವ್ಯಾಪಾರಿ ಮನೆ ದರೋಡೆ ಪ್ರಕರಣ; ಆರೋಪಿಗಳ ಸಹಿತ 8.42 ಲಕ್ಷ ರೂ. ಸೊತ್ತು ವಶ

Rave Party: ನಟಿ ಹೇಮಾ ಸಹಿತ 8 ಮಂದಿ ವಿಚಾರಣೆಗೆ ಗೈರು

Rave Party: ನಟಿ ಹೇಮಾ ಸಹಿತ 8 ಮಂದಿ ವಿಚಾರಣೆಗೆ ಗೈರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

doctor 2

Vijayapura;ಭ್ರೂಣಲಿಂಗ ಪತ್ತೆ: ವೈದ್ಯರು ಸೇರಿ ನಾಲ್ವರ ವಿರುದ್ಧ ಕ್ರಿಮಿನಲ್ ಕೇಸ್

Rave Party: ನಟಿ ಹೇಮಾ ಸಹಿತ 8 ಮಂದಿ ವಿಚಾರಣೆಗೆ ಗೈರು

Rave Party: ನಟಿ ಹೇಮಾ ಸಹಿತ 8 ಮಂದಿ ವಿಚಾರಣೆಗೆ ಗೈರು

ಅಪಘಾತದಲ್ಲಿ ಒಂದೇ ದಿನ 51 ಸಾವು; ರಸ್ತೆ ನಿಯಮ ಪಾಲನೆಗೆ ಎಚ್‌ಡಿಕೆ ಮನವಿ

ಅಪಘಾತದಲ್ಲಿ ಒಂದೇ ದಿನ 51 ಸಾವು; ರಸ್ತೆ ನಿಯಮ ಪಾಲನೆಗೆ ಎಚ್‌ಡಿಕೆ ಮನವಿ

ಚುನಾವಣ ಆಯೋಗದ ಛಾಯಾಚಿತ್ರ ಸ್ಪರ್ಧೆ: ಅಸ್ಟ್ರೋ ಮೋಹನ್‌ಗೆ ಬಹುಮಾನ

ಚುನಾವಣ ಆಯೋಗದ ಛಾಯಾಚಿತ್ರ ಸ್ಪರ್ಧೆ: ಅಸ್ಟ್ರೋ ಮೋಹನ್‌ಗೆ ಬಹುಮಾನ

CM  Siddaramaiah ಸೋಲು ಖಚಿತವಾಗುತ್ತಿದ್ದಂತೆ ಮೋದಿ ವಿಚಿತ್ರ ಮಾತು

CM Siddaramaiah ಸೋಲು ಖಚಿತವಾಗುತ್ತಿದ್ದಂತೆ ಮೋದಿ ವಿಚಿತ್ರ ಮಾತು

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Mulki ಬಪ್ಪನಾಡು: ಹೆದ್ದಾರಿ ಬದಿ ನಿಲ್ಲಿಸಿದ್ದ ಬೈಕ್‌ ಕಳವು

Mulki ಬಪ್ಪನಾಡು: ಹೆದ್ದಾರಿ ಬದಿ ನಿಲ್ಲಿಸಿದ್ದ ಬೈಕ್‌ ಕಳವು

Road mishap ಕಾರುಗಳ ಢಿಕ್ಕಿ; ಹನ್ನೆರಡು ಮಂದಿಗೆ ಗಾಯ

Road mishap ಕಾರುಗಳ ಢಿಕ್ಕಿ; ಹನ್ನೆರಡು ಮಂದಿಗೆ ಗಾಯ

Kadaba ಜಾಗಕ್ಕೆ ಅಕ್ರಮ ಪ್ರವೇಶ, ಜೀವ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು

Kadaba ಜಾಗಕ್ಕೆ ಅಕ್ರಮ ಪ್ರವೇಶ, ಜೀವ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು

doctor 2

Vijayapura;ಭ್ರೂಣಲಿಂಗ ಪತ್ತೆ: ವೈದ್ಯರು ಸೇರಿ ನಾಲ್ವರ ವಿರುದ್ಧ ಕ್ರಿಮಿನಲ್ ಕೇಸ್

Kinnigoli ಹಲಸಿನ ಮರದಿಂದ ಬಿದ್ದು ವ್ಯಕ್ತಿ ಸಾವು

Kinnigoli ಹಲಸಿನ ಮರದಿಂದ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.