ಅಫ್ಗಾನಿಸ್ತಾನದಲ್ಲಿ ರಚನೆಯಾಯ್ತು ಹಂಗಾಮಿ ಸರ್ಕಾರ : ಮೊಹಮ್ಮದ್‌ ಯಾಕೂಬ್‌ ರಕ್ಷಣಾ ಸಚಿವ


Team Udayavani, Sep 8, 2021, 9:45 AM IST

ಅಫ್ಘಾನ್‌ಗೆ ಹಂಗಾಮಿ ಸರಕಾರ

ಕಾಬೂಲ್‌: ಅಫ್ಘಾನಿಸ್ಥಾನದಲ್ಲಿ ಕೊನೆಗೂ ಉಗ್ರರ ನೇತೃತ್ವದ ಮಧ್ಯಾಂತರ ಸರಕಾರ ಘೋಷಣೆಯಾಗಿದೆ. ವಿಶ್ವಸಂಸ್ಥೆಯ ಉಗ್ರರ ಪಟ್ಟಿಯಲ್ಲಿರುವ ತಾಲಿಬಾನ್‌ ನಾಯಕ ಮೊಹಮ್ಮದ್‌ ಹಸನ್‌ ಅಖುಂದ್‌ ಹೊಸ ಪ್ರಧಾನಿಯಾಗಿದ್ದಾನೆ. ಅಬ್ದುಲ್‌ ಘನಿ ಬರಾದರ್‌, ಅಬ್ದುಲ್‌ ಸಲೇಂ ಹನಫಿ ಎಂಬಿಬ್ಬರನ್ನು ಉಪಪ್ರಧಾನಿ ಹುದ್ದೆಗೆ ನೇಮಕ ಮಾಡಲಾಗಿದೆ. ಜಾಗತಿಕ ಉಗ್ರ ಸಿರಾಜುದ್ದೀನ್‌ ಹಕ್ಕಾನಿಯನ್ನು ಗೃಹ ಸಚಿವ ಎಂದು ಘೋಷಿಸಲಾಗಿದೆ.

ದೋಹಾ ಟೀಂ ಮತ್ತು ಹಕ್ಕಾನಿ ತಂಡದ ಸಮ್ಮಿಶ್ರಣವಾಗಿ ಹೊಸ ಸರಕಾರ ರಚನೆಯಾಗಿದೆ. ಇದು ಮಧ್ಯಾಂತರ ಸರಕಾರವೆಂದು ತಾಲಿಬಾನ್‌ ಹೇಳಿದೆ. ಮುಲ್ಲಾ ಒಮರ್‌ನ ಪುತ್ರ ಮುಲ್ಲಾ ಮೊಹಮ್ಮದ್‌ ಯಾಕೂಬ್‌ ರಕ್ಷಣ ಸಚಿವ, ಹಿದಾಯಿತುಲ್ಲಾ ಬದ್ರಿ ಹಣಕಾಸು ಸಚಿವನಾಗಿದ್ದಾನೆ. ಆಮೀರ್‌ ಖಾನ್‌ ಮುತ್ತಾಖೀ ವಿದೇಶಾಂಗ ಸಚಿವ, ಶೇರ್‌ ಅಬ್ಟಾಸ್‌ ಸ್ಟಾನಿಕ್‌ಝೈ ಉಪ ವಿದೇಶಾಂಗ ಸಚಿವ, ಅಬ್ದುಲ್‌ ಹಕೀಮ್‌ ಕಾನೂನು ಸಚಿವ, ಕೈರುಲ್ಲಾಹ್‌ ಖೈರುಕ್ವಾ ಮಾಹಿತಿ ಸಚಿವನಾಗಿ ನೇಮಕಗೊಂಡಿದ್ದಾನೆ.

ಸದ್ಯ ಇಷ್ಟು ಹೆಸರುಗಳನ್ನು ಪ್ರಕಟಿಸಲಾಗಿದ್ದು, ಉಳಿದ ಸಚಿವರ ಹೆಸರುಗಳನ್ನು ಮುಂದೆ ತಿಳಿಸಲಾಗುವುದು ಎಂದು ತಾಲಿಬಾನ್‌ ವಕ್ತಾರ ಜಬೀವುಲ್ಲಾಹ್‌ ಮುಜಾಹೀದ್‌ ಹೇಳಿದ್ದಾನೆ.

ಸರಕಾರದಲ್ಲಿ ತಾಲಿಬಾನ್‌ನ ಪ್ರಮುಖ ಧರ್ಮಗುರು ಹಿಬಾತುಲ್ಲಾ ಅಖುಂದ್‌ ಝಾದಾ ವಹಿಸಿರುವ ಪಾತ್ರದ ಬಗ್ಗೆ ತಿಳಿದುಬಂದಿಲ್ಲ. ಆದರೆ, ಈಗ ನೇಮಕವಾಗಿರುವ ಪ್ರಧಾನಿ ಮೊಹಮ್ಮದ್‌ ಹಸನ್‌ ಅಖುಂದ್‌, ಹಿಬಾತುಲ್ಲಾ ಅಖುಂದ್‌ ಝಾದಾನ ಪರಮಾಪ್ತನಾಗಿದ್ದಾನೆ.

 ಯಾರೀತ ಮುಲ್ಲಾ ಹಸನ್‌ ಅಖುಂದ್‌ :

ಕಂದಹಾರ್‌ ಮೂಲದ ಈತ, 1996ರಲ್ಲಿ ಸ್ಥಾಪನೆಯಾಗಿದ್ದ ತಾಲಿಬಾನ್‌ ಸರಕಾರದಲ್ಲಿ ಸಚಿವನಾಗಿ, ಉಪಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದ. ತಾಲಿಬಾನ್‌ನ ರೆಹ್ಬಾರಿ ಶೌರಾದ ಮುಖ್ಯಸ್ಥನಾಗಿ 20 ವರ್ಷ ಕಾರ್ಯನಿರ್ವಹಿಸಿದ್ದಾನೆ. 2001ರಲ್ಲಿ ಬಾಮಿಯಾನ್‌ ಬುದ್ಧ ಪ್ರತಿಮೆಗಳನ್ನು ನಾಶ ಮಾಡಲು ಆದೇಶ ಕೊಟ್ಟದ್ದು ಈತನೇ. ಇದನ್ನು ಧರ್ಮದ ಕೆಲಸವೆಂದು ಈತ ಬಣ್ಣಿಸಿದ್ದ.

ದಿಲ್ಲಿಗೆ ಬಂದ ರಷ್ಯಾ ನಿಯೋಗ :

ಅಫ್ಘಾನ್‌ ಬಿಕ್ಕಟ್ಟಿನ ಬಗ್ಗೆ ಚರ್ಚಿಸುವ ಸಲುವಾಗಿ ರಷ್ಯಾದ ಭದ್ರತ ಮಂಡಳಿಯ ಜ| ನಿಕೋಲೆ ಪಾರ್ತುಶೇವ್‌ ನೇತೃತ್ವದ ನಿಯೋಗ ಮಂಗಳವಾರ ಹೊಸದಿಲ್ಲಿಗೆ ಆಗಮಿಸಿದೆ. ನಿಯೋಗವು ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ರಾಷ್ಟ್ರೀಯ ಭದ್ರತ ಸಲಹೆಗಾರ ಅಜಿತ್‌ ದೋವಲ್‌ ಅವರನ್ನು ಭೇಟಿಯಾಗಲಿದೆ.

ಪಾಕ್‌ ವಿರುದ್ಧ ಸಿಡಿದೆದ್ದ ಮಹಿಳೆಯರು :

ಪಾಕಿಸ್ಥಾನದ ವಿರುದ್ಧ ಅಫ್ಘಾನ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಬೂಲ್‌ನಲ್ಲಿರುವ ಪಾಕ್‌ ರಾಯಭಾರ ಕಚೇರಿಯ ಮುಂದೆ ಮಹಿಳೆಯರ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಸಲಾಗಿದೆ. ಪಂಜ್‌ಶೀರ್‌ ಪ್ರಾಂತ್ಯ ಪಾಕ್‌ ನೆರವಿನಿಂದ ವಶವಾಗಿರುವುದು ಬಹಿರಂಗವಾಗುತ್ತಲೇ ಈ ಬೆಳವಣಿಗೆ ನಡೆದಿದೆ.

“ಪಾಕಿಸ್ಥಾನ ಸಾಯಲಿ’ ಎಂಬ ಉದ್ಘೋಷ ಮೊಳಗಿದೆ. ಪ್ರತಿಭಟನಕಾರರನ್ನು ಚದುರಿಸಲು ಉಗ್ರರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ವರದಿಗಾಗಿ ಬಂದಿದ್ದ ಪತ್ರಕರ್ತರನ್ನು ಬಂಧಿಸಲಾಗಿದೆ. “ಉಗ್ರರು ನಾವು ಕ್ಷಮೆ ಕೋರುವಂತೆ ಮಾಡಿದರು ಮತ್ತು ಮೂಗನ್ನು ನೆಲಕ್ಕೆ ಉಜ್ಜುವ ಶಿಕ್ಷೆ ವಿಧಿಸಿದರು’ ಎಂದು ಪತ್ರಕರ್ತರೊಬ್ಬರು ಹೇಳಿದ್ದಾರೆ.

Udayavani Tags

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.