ನಿಮ್ಮ ಗ್ರಹಬಲ: ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಇದೆ.
Team Udayavani, Mar 15, 2021, 7:46 AM IST
15-03-2021
ಮೇಷ:ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವ ಶುಭ ಸೂಚನೆ ಸಿಗಲಿದೆ. ದೊರಕಿದ ಉದ್ಯೋಗಕ್ಕೆ ಒಗ್ಗಿ ಕೊಳ್ಳಿರಿ . ಅವಿವಾಹಿತರ ವಿವಾಹ ಪ್ರಸ್ತಾಪಗಳು ಮುಂದುವರಿಯಲಿದೆ. ಹೊಂದಿಕೊಂಡು ಹೋದರೆ ಉತ್ತಮ
ವೃಷಭ: ಉದ್ಯೋಗರಂಗದಲ್ಲಿ ನಿಮ್ಮ ದುಡಿಮೆ ಸಲಹೆ ಸೂಚನೆಗಳಿಗೆ ಭಂಗ ಬಂದೀತು. ವೈವಾಹಿಕ ಭಾಗ್ಯ ಯೋಗ್ಯ ವಯಸ್ಕರಿಗೆ ಮಾತ್ರ ಕೂಡಿ ಬಂದೀತು. ದಾಂಪತ್ಯದಲ್ಲಿ ಕೆಲವೊಂದು ಬದಲಾವಣೆಗೆ ಸಿದ್ಧರಾಗಬೇಕಾದೀತು.
ಮಿಥುನ: ಆರ್ಥಿಕವಾಗಿ ಹಣಕಾಸಿನ ಪರಿಸ್ಥಿತಿಯು ಏರುಪೇರಾಗುತ್ತಲೇ ಮುಂದುವರಿಯುವುದು. ಇಂತಹ ಪರಿಸ್ಥಿತಿಯಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸುವುದು ನಿಮಗೆ ಅಗತ್ಯವಿದೆ. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.
ಕರ್ಕ: ದೈಹಿಕವಾಗಿ ಹಾಗೂ ಮಾನಸಿಕವಾಗಿ ಆಗಾಗ ವ್ಯಾಕುಲ ಹಾಗೂ ಉದ್ವೇಗದಿಂದ ಕ್ಷುಲ್ಲಕ ವಿಚಾರಗಳು ತೋರಿ ಬಂದು ಅಸಮಾಧಾನ ಹೊಂದುವಿರಿ. ನೂತನ ಕಾರ್ಯಾರಂಭ, ವ್ಯಾಪಾರವ್ಯವಹಾರಗಳ ಚಿಂತನೆ ಕಾರ್ಯಗತವಾಗಲಿದೆ.
ಸಿಂಹ: ಸಾಂಸಾರಿಕವಾಗಿ ಗೃಹಿಣಿಯ ಸಹಕಾರ ಸುಪ್ರಸನ್ನತೆ ಹಾಗೂ ಸುಖ- ಶಾಂತಿ ಅನುಭವಕ್ಕೆ ಬರಲಿದೆ. ವಿದ್ಯಾರ್ಥಿ ಗಳ ಮನೋಕಾಮನೆಗಳು ಪೂರ್ಣಗೊಳ್ಳುವುದು. ಆರ್ಥಿಕವಾಗಿ ಎಷ್ಟೇ ಖರ್ಚುವೆಚ್ಚಗಳಿದ್ದರೂ ಸಂಭಾಳಿಸಿಕೊಂಡು ಹೋಗಿರಿ.
ಕನ್ಯಾ: ಧನಾಗಮನಕ್ಕೆ ವಿಪುಲ ಅವಕಾಶಗಳಿದ್ದರೂ ನಿಮ್ಮ ಕಠಿಣ ಪ್ರಯತ್ನಬಲ ಆತ್ಮ ವಿಶ್ವಾಸ ಕೂಡ ಅಷ್ಟೇ ಅಗತ್ಯವಿರುತ್ತದೆ. ಗೃಹದಲ್ಲಿ ಮಂಗಲ ಕಾರ್ಯ ನಡೆದು ಸಂತಸವಾಗಲಿದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ.
ತುಲಾ: ಮಾತಿಗಿಂತ ಕಾರ್ಯವು ಲೇಸೆನಿಸಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಯೋಗದಿಂದ ಮುಂದುವರಿಯಿರಿ. ಹಿತಶತ್ರುಗಳ ಸಮಯ ಸಾಧಕತನ ಆಗಾಗ ಘಾಸಿಗೊಳಿಸೀತು. ತಾಳ್ಮೆ, ಸಹನೆಯಿಂದ ಕಾರ್ಯಸಾಧನೆ.
ವೃಶ್ಚಿಕ: ಆಗಾಗ ಆರ್ಥಿಕವಾಗಿ ಹಿನ್ನಡೆಯನ್ನು ಅನುಭವಿಸುವಂತಾಗುತ್ತದೆ. ಋಣಬಾಧೆ ಕಾಡಲಿದೆ. ಕೆಲವೊಂದು ಸಮಸ್ಯೆಗಳು ಬಹಿರಂಗಗೊಂಡು ರಾದ್ದಾಂತವಾದೀತು. ಪಿತ್ತ, ವಾಯು ಪ್ರಕೋಪದಿಂದ ಅನಾರೋಗ್ಯವು ತೋರಿಬರಲಿದೆ.
ಧನು: ರಾಜಕೀಯ ವರ್ಗದವರಿಗೆ ಉನ್ನತ ಸ್ಥಾನ ಗಿಟ್ಟಿತು. ಶತ್ರುಗಳು ಇದ್ದಕ್ಕಿದ್ದಂತೆ ನಿಮ್ಮ ಹೆಚ್ಚುತ್ತಿರುವ ಪ್ರಭಾವದಿಂದಾಗಿ ತಣ್ಣಗಾಗುವರು. ವ್ಯಾಪಾರಿ ವರ್ಗದವರಿಗೆ ಚೇತರಿಕೆಯ ದಿನಗಳು. ಸ್ವಂತ ದುಡಿಮೆಯವರಿಗೆ ಎಚ್ಚರ ಅಗತ್ಯ.
ಮಕರ: ಅನಿರೀಕ್ಷಿತ ಕಾರ್ಯಸಾಧನೆ ನಿಮಗೇ ಅಚ್ಚರಿ ತಂದೀತು. ಅವಿವಾಹಿತರ ವೈವಾಹಿಕ ಸಂಘಟನೆಗೆ ಪೂರಕವಾದ ಪ್ರಚೋದನೆ ಲಭಿಸೀತು. ಆಕಸ್ಮಿಕ ಧನಾನುಕೂಲವಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಇದೆ. ಚಿಂತೆ ಅನಾವಶ್ಯಕ
ಕುಂಭ: ಎಲ್ಲಾ ಕಾರ್ಯಗಳಲ್ಲೂ ಅಡೆತಡೆಗಳು ಕಂಡು ಬಂದಾವು. ಪ್ರಯತ್ನಪಟ್ಟ ಕೆಲಸ ಕಾರ್ಯದಲ್ಲಿ ಜಯವಿದೆ. ಕೊಟ್ಟ ಸಾಲ ಮರಳುವಿಕೆ ಇತ್ಯಾದಿಗಳು ವೃತ್ತಿರಂಗದ ಮಜಲನ್ನು ಬದಲಿಸಲಿದೆ. ನಿರುದ್ಯೋಗಿಗಳಿಗೆ ಪ್ರಯತ್ನ ಬೇಕು.
ಮೀನ: ನಿಮ್ಮ ಎಲ್ಲಾ ಕಾರ್ಯದಲ್ಲಿ ಅಡೆತಡೆಗಳು ಕಂಡು ಬಂದರೂ ಬೇಸರಪಡದಿರಿ. ಕಾರ್ಯಜಯವಿದೆ. ಸದಾಕಾಲ ಕಾರ್ಯ ಪ್ರವೃತ್ತರಾಗಿ ದುಡಿಯುತ್ತಿರುವ ನಿಮಗೆ ಉತ್ತಮ ಫಲಗಳು ಗೋಚರಕ್ಕೆ ಬರುತ್ತವೆ. ಆತ್ಮ ವಿಶ್ವಾಸ ಅಗತ್ಯ.
ಎನ್.ಎಸ್,ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ
Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ
Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ
MUST WATCH
ಹೊಸ ಸೇರ್ಪಡೆ
Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್ ಬೇಲಿ!
Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ
8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್ಐಟಿ? ಇನ್ನಷ್ಟು ಎಫ್ಐಆರ್ ಸಾಧ್ಯತೆ