ಅಧಿಕ ಹೃದಯ ಬಡಿತದ ಸೂಚನೆ ನೀಡಿದ ಆಪಲ್ ವಾಚ್: ಅಪಾಯದಿಂದ ಪಾರಾದ ಬೆಂಗಳೂರಿನ ಟೆಕಿ


Team Udayavani, Feb 27, 2024, 6:23 PM IST

18

ಬೆಂಗಳೂರು: ಸ್ಮಾರ್ಟ್ ವಾಚ್ ಗಳು ಅನಾರೋಗ್ಯದ ಸೂಚನೆ ನೀಡುವ ಮೂಲಕ ಬಳಕೆದಾರರನ್ನು ಎಚ್ಚರಿಸುವ ಕೆಲಸ ಮಾಡಿ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿದ ಪ್ರಸಂಗಗಳನ್ನು ಆಗಾಗ ಕೇಳುತ್ತಿರುತ್ತೇವೆ. ಅಂಥದೇ ಪ್ರಕರಣ ಬೆಂಗಳೂರಿನಲ್ಲಿ ನಡೆದಿದ್ದು, ಆಪಲ್ ವಾಚ್ ಮೂಲಕ ಸಹಜಕ್ಕಿಂತ ಹೆಚ್ಚಿನ ಹೃದಯ ಬಡಿತದ ಸೂಚನೆ ಅರಿತ ಬೆಂಗಳೂರಿನ ಟೆಕಿಯೊಬ್ಬರು ಹೃದ್ರೋಗ ತಜ್ಞರಲ್ಲಿ ಪರೀಕ್ಷಿಸಿಕೊಂಡು ಮುಂದಾಗಬಹುದಾಗಿದ್ದ ಅಪಾಯದಿಂದ ಪಾರಾದ ಘಟನೆ ನಡೆದಿದೆ.

ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಆಪಲ್ ವಾಚ್ ಸಹಾಯ ಮಾಡಿದ್ದಕ್ಕಾಗಿ ಆ ಟೆಕಿ, ಆಪಲ್ ಸಿಇಒ ಟಿಮ್ ಕುಕ್ ಅವರಿಗೆ ಇಮೇಲ್ ಮೂಲಕ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ.

ಬೆಂಗಳೂರಿನ ಸಾಫ್ಟ್ ವೇರ್ ಡೆವಲಪರ್ 25 ವರ್ಷದ ಶರತ್ ಶ್ರೀರಾಮ್ ಅವರು ಕಳೆದ ವರ್ಷದ ಏಪ್ರಿಲ್ ನಲ್ಲಿ ಟೆಕ್ ಕಂಪೆನಿಯೊಂದಕ್ಕೆ ಸೇರಿಕೊಂಡರು. ತಮ್ಮ ಕೋಡಿಂಗ್ ಕೆಲಸ ಕಾರ್ಯಗಳಲ್ಲಿ ಸದಾ ಬ್ಯುಸಿಯಾಗಿದ್ದರು. ಅಲ್ಲಿನ ಕೆಲಸ ಹೆಚ್ಚು ಒತ್ತಡದಿಂದ ಕೂಡಿತ್ತು. ಅಲ್ಲಿನ ಕೆಲಸದ ವಾತಾವರಣವೂ ಸ್ನೇಹಮಯಿಯಾಗಿರಲಿಲ್ಲ. ಅಕ್ಟೋಬರ್-ನವೆಂಬರ್ನಲ್ಲಿ ನಾವು ಹೊಸ ಪ್ರಾಜೆಕ್ಟ್ ಇದ್ದು, ರಾತ್ರಿ ಮತ್ತು ವಾರಾಂತ್ಯದಲ್ಲೂ ಕೆಲಸ ನಿರ್ವಹಿಸಬೇಕಿತ್ತು. ನವೆಂಬರ್ ತಿಂಗಳಲ್ಲಿ ಅಲ್ಲಿನ ಕೆಲಸ ತುಂಬಾ ಒತ್ತಡ ಮತ್ತು ಅಸಹನೀಯವಾಗಿತ್ತು. ಶರತ್ ಆಪಲ್ ವಾಚ್ 8 ಸರಣಿ ಬಳಸುತ್ತಿದ್ದರು.

ದೀಪಾವಳಿಯ ನಂತರ, ಅವರು ತಮ್ಮ ಆಪಲ್ ವಾಚ್ ನಲ್ಲಿ ಹೆಚ್ಚಿನ ಹೃದಯ ಬಡಿತದ ಸೂಚನೆಗಳನ್ನು ಪಡೆಯಲು ಪ್ರಾರಂಭಿಸಿದರು. ಪ್ರತಿ ಬಾರಿ ಅವರು ಮೀಟಿಂಗ್ ಗಳಿಗೆ ಹೋದಾಗ, ಹೃದಯದ ಬಡಿತ 130 ರಿಂದ 135 ತೋರಿಸುತ್ತಿತ್ತು. ಈ ಸಂದರ್ಭದಲ್ಲಿ ನಾಲ್ಕೈದು ನೋಟಿಫಿಕೇಷನ್ ಬರುತ್ತಿತ್ತು.

ಹೆಚ್ಚಿನ ಹೃದಯ ಬಡಿತದ ಸೂಚನೆಗಳನ್ನು ನೋಡಿ ಹೃದ್ರೋಗ ತಜ್ಞರನ್ನು ಭೇಟಿಯಾದ ಶರತ್ ಅವರಿಗೆ ವೈದ್ಯರು ಪರೀಕ್ಷೆ ಮಾಡಿದರು. ವಿಶ್ರಾಂತಿ ಸಂದರ್ಭದಲ್ಲೂ ಅವರ ಹೃದಯ ಬಡಿತ ಹೆಚ್ಚಿತ್ತು. ಸೂಕ್ತ ಸಮಯಕ್ಕೆ ಬಂದು ಪರೀಕ್ಷೆ ಮಾಡಿಸಿದ್ದೀರಿ. ಈಗಲೇ ನೀವು ಎಚ್ಚೆತ್ತುಕೊಂಡು ಜೀವನ ಶೈಲಿಯಲ್ಲಿ ಬದಲಾವಣೆ, ಒತ್ತಡ ಮುಕ್ತ ಜೀವನ ಶೈಲಿ ರೂಢಿಸಿಕೊಳ್ಳಬೇಕು ಇಲ್ಲವಾದರೆ ದೀರ್ಘಾವಧಿಯಲ್ಲಿ ಕಾಯಿಲೆ ಉಂಟಾಗಬಹುದೆಂದು ಸಲಹೆ ನೀಡಿದರು.

ಆಪಲ್ ವಾಚ್ನಲ್ಲಿರುವ ಆಪ್ಟಿಕಲ್ ಹಾರ್ಟ್ ಸೆನ್ಸರ್ ಫೋಟೊಪ್ಲೆಥಿಸ್ಮೋಗ್ರಫಿ ಎಂಬ ತಂತ್ರಜ್ಞಾನ ಹೊಂದಿದ್ದು, ಹೃದಯ ಸಂವೇದಕವು ಪ್ರತಿ ನಿಮಿಷಕ್ಕೆ 30 ರಿಂದ 210 ರವರೆಗಿನ ಬಡಿತಗಳವರೆಗೂ ಕೆಲಸ ನಿರ್ವಹಿಸುತ್ತದೆ.

ವೈದ್ಯರ ಸಲಹೆಯಿಂದ ಎಚ್ಚೆತ್ತ ಶರತ್ ಅವರು ತಾವಿದ್ದ ಕಂಪನಿಯಲ್ಲಿ ಮುಂದುವರಿಯುವುದು ಯೋಗ್ಯವಲ್ಲ ಎಂದು ನಿರ್ಧರಿಸಿ, ಹೊಸ ಕಂಪನಿ ಸೇರಿದರು.

“ಹಳೆಯ ಕಂಪೆನಿ ಬಿಟ್ಟ ಒಂದು ವಾರಕ್ಕೇ ನನ್ನ ವಿಶ್ರಾಂತಿ ಸಂದರ್ಭದ ಹೃದಯ ಬಡಿತ 71 ಕ್ಕೆ ಇಳಿಯಿತು! ಮಾನಸಿಕ ಆರೋಗ್ಯದ ಮಹತ್ವವನ್ನು ಅರಿತುಕೊಂಡ ಕಾರಣ ನಾನು ಟಿಮ್ ಕುಕ್ (ಆಪಲ್ ಸಿಇಒ) ಅವರಿಗೆ ಇಮೇಲ್ ಬರೆದಿದ್ದೇನೆ. ನಾನು ಆಪಲ್ ವಾಚ್ ರೀಡಿಂಗ್ಗಳನ್ನು ಅನುಸರಿಸದಿದ್ದರೆ ಮತ್ತು ವೈದ್ಯರ ಬಳಿಗೆ ಹೋಗದಿದ್ದರೆ, ನನ್ನ ಆರೋಗ್ಯ, ಹದಗೆಡುತ್ತಿತ್ತು. ಕೆಲವು ತಿಂಗಳುಗಳಲ್ಲಿ ಇತರ ಗಂಭೀರ ಸಮಸ್ಯೆಗಳು ಉಂಟಾಗುತ್ತಿದ್ದವು” ಎಂದು ಶರತ್ ಹೇಳುತ್ತಾರೆ.

ಟಾಪ್ ನ್ಯೂಸ್

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

g t devegowda

Mysore; ನಾನು ಮುಡಾದಿಂದ ಎಲ್ಲಿಯೂ ನಿವೇಶನ ಪಡೆದುಕೊಂಡಿಲ್ಲ: ಜಿ ಟಿ ದೇವೇಗೌಡ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

Protest across the state if Ramanagara name is changed: pramod muthalik

Bengaluru South; ರಾಮನಗರ ಹೆಸರು ಬದಲಾಯಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಮುತಾಲಿಕ್ ಕಿಡಿ

Nature:ವಿಶ್ವ ಪ್ರಕೃತಿ ಸಂರಕ್ಷಣ ದಿನ: ಪ್ರಕೃತಿ ಹೇಳುತ್ತಿದೆ…”ನೀ ನನಗಿದ್ದರೆ ನಾ ನಿನಗೆ ‘

Nature:ವಿಶ್ವ ಪ್ರಕೃತಿ ಸಂರಕ್ಷಣ ದಿನ: ಪ್ರಕೃತಿ ಹೇಳುತ್ತಿದೆ…”ನೀ ನನಗಿದ್ದರೆ ನಾ ನಿನಗೆ ‘


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Google

Google ಮ್ಯಾಪ್ ಗೆ  6 AI ವೈಶಿಷ್ಟ್ಯ ಪರಿಚಯಿಸಿದ ಗೂಗಲ್ ದಾರಿ ಹುಡುಕಾಟ ಸುಲಭ!!

TATA ಕರ್ವ್‌ ಐಸಿಇ, ಇವಿ ಮಾರುಕಟ್ಟೆಗೆ

TATA ಕರ್ವ್‌ ಐಸಿಇ, ಇವಿ ಮಾರುಕಟ್ಟೆಗೆ

OnePlus ಬೆಂಗಳೂರಿನಲ್ಲಿ ಒನ್ ಪ್ಲಸ್ ಮೆಟಲ್ವರ್ಸ್ ಪಾಪ್ ಅಪ್ ಕಾರ್ಯಕ್ರಮ

OnePlus; ಬೆಂಗಳೂರಿನಲ್ಲಿ ಒನ್ ಪ್ಲಸ್ ಮೆಟಲ್ವರ್ಸ್ ಪಾಪ್ ಅಪ್ ಕಾರ್ಯಕ್ರಮ

Honor 200 Pro 5G, Honor 200 5G ಫೋನ್ ಗಳು ಭಾರತದಲ್ಲಿ ಬಿಡುಗಡೆ

Honor 200 Pro 5G, Honor 200 5G ಫೋನ್ ಗಳು ಭಾರತದಲ್ಲಿ ಬಿಡುಗಡೆ

Microsoft ಬೆನ್ನಲ್ಲೇ ಯುಟ್ಯೂಬ್‌ನಲ್ಲೂ ಅಡಚಣೆ

Microsoft ಬೆನ್ನಲ್ಲೇ ಯುಟ್ಯೂಬ್‌ನಲ್ಲೂ ಅಡಚಣೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

Screenshot (7) copy

Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!

ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು

Hubli; ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

belagavBelagavi; ಮುಂದುವರಿದ ವರುಣಾರ್ಭಟ; ಮುಳುಗಡೆಯಾಯ್ತು 40 ಸೇತುವೆಗಳು

Belagavi; ಮುಂದುವರಿದ ವರುಣಾರ್ಭಟ; ಮುಳುಗಡೆಯಾಯ್ತು 40 ಸೇತುವೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.