![1-assam](https://www.udayavani.com/wp-content/uploads/2024/07/1-assam-415x233.jpg)
Viral: ಪ್ರಿಯತಮೆ ಭೇಟಿ ಆಗಲು ಹೆಣ್ಣಿನ ವೇಷ ಧರಿಸಿ ಮನೆಗೆ ಬಂದು ಸಿಕ್ಕಿಹಾಕಿಕೊಂಡ ಪ್ರಿಯಕರ.!
Team Udayavani, May 27, 2024, 4:09 PM IST
![Viral: ಪ್ರಿಯತಮೆ ಭೇಟಿ ಆಗಲು ಹೆಣ್ಣಿನ ವೇಷ ಧರಿಸಿ ಮನೆಗೆ ಬಂದು ಸಿಕ್ಕಿಹಾಕಿಕೊಂಡ ಪ್ರಿಯಕರ.!](https://www.udayavani.com/wp-content/uploads/2024/05/17-14-620x372.jpg)
ಭೋಪಾಲ್: ಪ್ರೀತಿ ಅದೃಷ್ಟವಂತರಿಗೆ ಮಾತ್ರ ಸಿಕ್ಕರೆ, ಪ್ರೀತಿಸಿದವರನ್ನೇ ಮದುವೆ ಆಗುವ ಯೋಗ ಆ ಅದೃಷ್ಟವಂತರಲ್ಲಿ ಕೆಲವರಿಗಷ್ಟೇ ಸಿಗುತ್ತದೆ. ಆದರೆ ಇಲ್ಲೊಬ್ಬ ಯುವಕ ತನ್ನ ಪ್ರಿಯತಮೆಯನ್ನು ಭೇಟಿ ಆಗಲು ಹೋಗಿ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾನೆ.
ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ನಡೆದ ಈ ಘಟನೆ ಪ್ರೀತಿ ಮಾಡಿದರೆ ಜಗಕ್ಕೆ ಹೆದರಬಾರದು ಎನ್ನುವ ಮಾತಿಗೆ ಹೊಂದಿಕೆ ಆಗುತ್ತದೆ.!
ಛಿಂದ್ವಾರಾದ ಸೋನ್ಪುರ್ ನಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಭೇಟಿ ಆಗಲು ಇಚ್ಛಿಸಿದ್ದ. ಆದರೆ ಮನೆಯವರ ಕಣ್ಣು ತಪ್ಪಿಸಿ ಯುವತಿಯ ಮನೆಗೆ ಹೋಗಿ ಆಕೆಯನ್ನು ಭೇಟಿ ಆಗುವುದು ಅಷ್ಟು ಸುಲಭವಾಗಿರಲಿಲ್ಲ.
ಅದಕ್ಕಾಗಿ ಯುವಕ ತನ್ನ ಪ್ರಿಯತಮೆ ಬಳಿ ಹೇಳಿ ಒಂದು ಪ್ಲ್ಯಾನ್ ಮಾಡಿದ್ದಾನೆ. ಹೆಣ್ಣಿನ ವೇಷ ಧರಿಸಿ, ಸಲ್ವಾರ್ ಸೂಟು, ಬಳೆ, ಮತ್ತು ಬಿಂದಿ ಹಾಕಿಕೊಂಡು ಸ್ಕೂಟಿಯಲ್ಲಿ ಪ್ರಿಯತಮೆಯ ಮನೆಗೆ ತೆರಳಿದ್ದಾನೆ. ಆದರೆ ಮನೆಯಿಂದ ವಾಪಾಸ್ ಆಗುವ ವೇಳೆ ಸ್ಥಳೀಯರು ಯುವಕನ ನಡಿಗೆ ನೋಡಿ ಸಂಶಯಪಟ್ಟಿದ್ದಾರೆ.
ಹೆಣ್ಣಿನ ವೇಷ ಧರಿಸಿಕೊಂಡು ಬಂದಿದ್ದ ಯುವಕನನ್ನು ವಿಚಾರಿಸಿದಾಗ, ಸ್ಥಳೀಯರು ಆತ ಹಾಕಿದ್ದ ಸ್ಕಾರ್ಫ್ ತೆಗೆದು ನಿಜಮುಖ ಬಯಲು ಮಾಡಿ ಥಳಿಸಿದ್ದಾರೆ.
ಯುವಕ ಸಿಕ್ಕಿಬಿದ್ದ ತಕ್ಷಣ ಸ್ಥಳದಲ್ಲಿ ಕೋಲಾಹಲ ಉಂಟಾಗಿದೆ. ಜೊತೆಗೆ ಪ್ರಿಯಕರನಿಗೆ ಥಳಿಸುತ್ತಿರುವುದನ್ನು ನೋಡಿದ ಗೆಳತಿ ಕೂಡ ಮನೆಯಿಂದ ಹೊರಗೆ ಓಡಿ ಬಂದು ನಿಜ ಸಂಗತಿಯನ್ನು ಹೇಳಿ ಜನರಿಂದ ಪ್ರೇಮಿಯನ್ನು ರಕ್ಷಿಸಿದ್ದಾಳೆ. ಹುಡುಗಿಯ ಮಾತು ಕೇಳಿ ಜನರ ಸಿಟ್ಟು ತಗ್ಗಿ ಇಬ್ಬರಿಗೂ ಸಲಹೆ ಕೊಟ್ಟು ಕಳುಹಿಸಿದ್ದಾರೆ.
ಟಾಪ್ ನ್ಯೂಸ್
![1-assam](https://www.udayavani.com/wp-content/uploads/2024/07/1-assam-415x233.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Viral: ಮದುವೆಯಾಗಿ ಮೂರೇ ನಿಮಿಷದಲ್ಲಿ ನಡೆಯಿತು ವಿಚ್ಚೇದನ; ಈ ನಿರ್ಧಾರಕ್ಕೆ ಕಾರಣವೇನು?](https://www.udayavani.com/wp-content/uploads/2024/07/9-15-150x90.jpg)
Viral: ಮದುವೆಯಾಗಿ ಮೂರೇ ನಿಮಿಷದಲ್ಲಿ ನಡೆಯಿತು ವಿಚ್ಚೇದನ; ಈ ನಿರ್ಧಾರಕ್ಕೆ ಕಾರಣವೇನು?
![Video: ರಸ್ತೆಗಾಗಿ ಇಬ್ಬರು ಮಹಿಳೆಯರನ್ನು ಜೀವಂತ ಸಮಾಧಿ ಮಾಡಲು ಮುಂದಾದ ದುಷ್ಕರ್ಮಿಗಳು](https://www.udayavani.com/wp-content/uploads/2024/07/madhyapradesh-1-150x83.jpg)
Shocking: ರಸ್ತೆಗಾಗಿ ಇಬ್ಬರು ಮಹಿಳೆಯರನ್ನೇ ಜೀವಂತ ಸಮಾಧಿ ಮಾಡಲು ಮುಂದಾದ ದುರುಳರು…
![Video: ಮಕ್ಕಳು ತರಗತಿಯಲ್ಲಿ ಇದ್ದ ವೇಳೆಯೇ ಕುಸಿದು ಬಿದ್ದ ಗೋಡೆ… ವಿದ್ಯಾರ್ಥಿಗೆ ಗಾಯ](https://www.udayavani.com/wp-content/uploads/2024/07/school-2-150x84.jpg)
Wall Collapses: ಮಕ್ಕಳು ತರಗತಿಯಲ್ಲಿರುವಾಗಲೇ ಕುಸಿದು ಬಿದ್ದ ಗೋಡೆ.. ಭಯಾನಕ ವಿಡಿಯೋ ವೈರಲ್
![1-insta](https://www.udayavani.com/wp-content/uploads/2024/07/1-insta-150x104.jpg)
Instagram Influencer ಆನ್ವಿ ಕಾಮ್ದಾರ್ ಕಮರಿಗೆ ಬಿದ್ದು ಮರಣ
![best](https://www.udayavani.com/wp-content/uploads/2024/07/best-150x79.jpg)
Crow-ded Bus: Best ಬಸ್ಸಲ್ಲಿ ಕಾಗೆಗಳ ಸವಾರಿ… ನೆಟ್ಟಿಗರಿಂದ ಬೆಸ್ಟ್ ಬೆಸ್ಟ್ ಕಾಮೆಂಟ್ಸ್
MUST WATCH
ಹೊಸ ಸೇರ್ಪಡೆ
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-150x79.jpg)
New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
![robbers](https://www.udayavani.com/wp-content/uploads/2024/07/robbers-1-150x89.jpg)
Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.