![Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ](https://www.udayavani.com/wp-content/uploads/2024/07/shiruru-415x249.jpg)
LS elections; ಮೈಸೂರಿನಿಂದ 26 ಲಕ್ಷ ಬಾಟಲಿ ಅಳಿಸಲಾರದ ಶಾಯಿ ಸರಬರಾಜು
ಈ ಶಾಯಿಯ ವಿಶೇಷತೆಗಳೇನು? ನಿಯಮಗಳು ಏನು ಹೇಳುತ್ತವೆ ?
Team Udayavani, Feb 21, 2024, 6:32 PM IST
![1-dsadasd](https://www.udayavani.com/wp-content/uploads/2024/02/1-dsadasd-1-620x349.jpg)
ಮೈಸೂರು: ಎಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗಾಗಿ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ವಿವಿಧ ರಾಜ್ಯಗಳಿಗೆ ಮತದಾರರ ಎಡಗೈ ತೋರುಬೆರಳಿನ ಮೇಲೆ ಆಳವಾದ ನೇರಳೆ ಗುರುತು ಹಾಕಲಾಗುವ ಅಳಿಸಲಾಗದ ಶಾಯಿಯ 26 ಲಕ್ಷ ಬಾಟಲಿಗಳನ್ನು ಒದಗಿಸುವ ಕಾರ್ಯವನ್ನು ವಹಿಸಿಕೊಂಡಿದೆ.
“ನಮ್ಮ ಒಟ್ಟು ಆರ್ಡರ್ ಸುಮಾರು 26.5 ಲಕ್ಷ ಬಾಟಲಿಗಳ ಶಾಯಿಯಾಗಿದ್ದು, ಇಲ್ಲಿಯವರೆಗೆ, ಒಟ್ಟು 60 ಪ್ರತಿಶತವನ್ನು ರಾಜ್ಯಗಳಿಗೆ ರವಾನಿಸಲಾಗಿದೆ. ಸುಮಾರು 24 ರಾಜ್ಯಗಳ ಪಾಲಿನ ಶಾಯಿಯನ್ನು ಒದಗಿಸಲಾಗಿದೆ. ಉಳಿದುದನ್ನು ಮಾರ್ಚ್ 20 ರ ಸುಮಾರಿಗೆ ಪೂರ್ಣಗೊಳಿಸಲಾಗುವುದು ಎಂದು ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಕೆ ಮೊಹಮ್ಮದ್ ಇರ್ಫಾನ್ ತಿಳಿಸಿದ್ದಾರೆ. ಕರ್ನಾಟಕ ಸರಕಾರವು 1962 ರಿಂದ ಚುನಾವಣ ಆಯೋಗಕ್ಕೆ ಮೈಸೂರಿನಲ್ಲಿ ಶಾಯಿಯನ್ನು ತಯಾರಿಸುತ್ತಿದೆ.
ಒಂದು ಮತಗಟ್ಟೆಯಲ್ಲಿ ಸುಮಾರು 1,200 ಮತದಾರರಿದ್ದು, 700 ಜನರ ಬೆರಳುಗಳನ್ನು ಗುರುತಿಸಲು ಶಾಯಿಯ 10 ಮಿಲಿ ಬಾಟಲಿಯನ್ನು ಬಳಸಬಹುದಾಗಿದೆ. ಚುನಾವಣೆಗಾಗಿ 12 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಚುನಾವಣ ಆಯೋಗದ ಪ್ರಕಾರ, ಜನವರಿಯಲ್ಲಿ ಭಾರತವು ಸುಮಾರು 97 ಕೋಟಿ ಮತದಾರರನ್ನು ಹೊಂದಿದ್ದು ಅದರಲ್ಲಿ ಗರಿಷ್ಠ 15.30 ಕೋಟಿ ಮತದಾರರು ಉತ್ತರ ಪ್ರದೇಶದಲ್ಲಿದ್ದು, ಕನಿಷ್ಠ 57,500 ಮಂದಿ ಲಕ್ಷದ್ವೀಪದಲ್ಲಿದ್ದಾರೆ.
ದೆಹಲಿ ಮೂಲದ ಕೌನ್ಸಿಲ್ ಆಫ್ ಇಂಡಸ್ಟ್ರಿಯಲ್ ರಿಸರ್ಚ್-ನ್ಯಾಷನಲ್ ಫಿಸಿಕಲ್ ಲ್ಯಾಬೋರೇಟರಿ ಈ ಶಾಯಿಯನ್ನು ಅಭಿವೃದ್ಧಿಪಡಿಸಿದ್ದು, ಶಾಯಿಯ ಗುರುತು ಸಾಮಾನ್ಯವಾಗಿ ಚರ್ಮದ ಮೇಲೆ ಅನ್ವಯಿಸಿದಾಗ ಮೂರು ದಿನಗಳವರೆಗೆ ಇರುತ್ತದೆ ಆದರೆ ಉಗುರಿನ ಮೇಲೆ ಕೆಲವು ವಾರಗಳವರೆಗೆ ಉಳಿಯುತ್ತದೆ.
ಚುನಾವಣಾ ಉದ್ದೇಶ ಹೊರತು ಪಡಿಸಿ ಕೋವಿಡ್ -19 ವೇಳೆ ಶಾಯಿಯನ್ನು ಬಳಸಲು ಅನುಮತಿಸಿದ ಏಕೈಕ ಸಮಯವಾಗಿದ್ದು, ಹೋಮ್ ಕ್ವಾರಂಟೈನ್ನಲ್ಲಿರುವ ಜನರನ್ನು ಗುರುತಿಸಲು ಕೆಲವು ರಾಜ್ಯಗಳು ಶಾಯಿಯನ್ನು ಬಳಸಿದ್ದವು.ಮೊದಲು ಶಾಯಿಯನ್ನು ಗಾಜಿನ ಬಾಟಲಿಯಲ್ಲಿ ಸರಬರಾಜು ಮಾಡಲಾಗುತ್ತಿತ್ತು, ಈಗ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಮಾಡಲಾಗುತ್ತದೆ .
CSIR ನ ಆರಂಭಿಕ ಸಾಧನೆಗಳಲ್ಲಿ ಒಂದಾದ ಶಾಯಿಯನ್ನು ವಂಚನೆ ಮೂಲಕ ಕಳ್ಳ ಮತದಾನದ ಸವಾಲನ್ನು ಎದುರಿಸಲು ವಿನ್ಯಾಸಗೊಳಿಸಲಾಗಿದೆ. ಸಂಶೋಧನಾ ಕಾರ್ಯವನ್ನು 1950 ರ ದಶಕದಲ್ಲಿ ಹಿಂದಿನ ರಾಸಾಯನಿಕ ವಿಭಾಗದ ವಿಜ್ಞಾನಿಗಳು ಪ್ರಾರಂಭಿಸಿದ್ದರು ನಂತರ ರಾಷ್ಟ್ರೀಯ ಸಂಶೋಧನಾ ಅಭಿವೃದ್ಧಿ ನಿಗಮ (NRDC), ನವದೆಹಲಿಯಿಂದ ಪೇಟೆಂಟ್ ಪಡೆದಿತ್ತು.
ಈ ಶಾಯಿಯನ್ನು ಕೆನಡಾ, ಘಾನಾ, ನೈಜೀರಿಯಾ, ಮಂಗೋಲಿಯಾ, ಮಲೇಷ್ಯಾ, ನೇಪಾಳ, ದಕ್ಷಿಣ ಆಫ್ರಿಕಾ ಮತ್ತು ಮಾಲ್ಡೀವ್ಸ್ ಸೇರಿದಂತೆ 25 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ವಿವಿಧ ದೇಶಗಳು ಶಾಯಿಯನ್ನು ಅನ್ವಯಿಸಲು ವಿಭಿನ್ನ ವಿಧಾನಗಳನ್ನು ಅನುಸರಿಸುವುದರಿಂದ, ಕಂಪನಿಯು ಗ್ರಾಹಕರ ವಿಶೇಷಣಗಳ ಪ್ರಕಾರ ಶಾಯಿಯನ್ನು ಪೂರೈಸುತ್ತಿದೆ.
ಕಾಂಬೋಡಿಯಾ ಮತ್ತು ಮಾಲ್ಡೀವ್ಸ್ನಲ್ಲಿ, ಬುರ್ಕಿನಾ ಫಾಸೊದಲ್ಲಿ ಶಾಯಿಯನ್ನು ಬ್ರಷ್ನಿಂದ ಅನ್ವಯಿಸಿದಾಗ ಮತದಾರರು ತಮ್ಮ ಬೆರಳನ್ನು ಶಾಯಿಯಲ್ಲಿ ಅದ್ದಬೇಕು ಮತ್ತು ಟರ್ಕಿಯಲ್ಲಿ ಅದರ ಬಳಕೆಗಾಗಿ ನಳಿಕೆಗಳನ್ನು ಬಳಸಲಾಗುತ್ತಿದೆ.ಶಾಯಿಯು ಫೋಟೋ-ಸೆನ್ಸಿಟಿವ್ ಆಗಿದ್ದು ನೇರ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳದಂತೆ ಅದನ್ನು ರಕ್ಷಿಸಬೇಕಾಗಿದೆ.ಶಾಯಿಯನ್ನು ಹಿಂದೆ ಕಂದು ಬಣ್ಣದ ಗಾಜಿನ ಬಾಟಲಿಗಳಲ್ಲಿ ಸಂಗ್ರಹಿಸಲಾಗುತ್ತಿತ್ತು.
ಶಾಯಿಯು ಬೆಳ್ಳಿಯ ನೈಟ್ರೇಟ್ ಅನ್ನು ಹೊಂದಿದ್ದು, ಉಗುರಿನೊಂದಿಗೆ ಪ್ರತಿಕ್ರಿಯೆ ಮತ್ತು ಬೆಳಕಿಗೆ ಒಡ್ಡಿಕೊಂಡಾಗ ಬಣ್ಣ ಗಾಢವಾಗುತ್ತದೆ. ನೀರು-ಆಧಾರಿತ ಶಾಯಿಯು ಆಲ್ಕೋಹಾಲ್ ನಂತಹ ದ್ರಾವಕವನ್ನು ಸಹ ಹೊಂದಿದ್ದು, ವೇಗವಾಗಿ ಒಣಗಲು ಅನುವು ಮಾಡಿಕೊಡುತ್ತದೆ.
ತೋರು ಬೆರಳು ಇಲ್ಲದಿದ್ದಲ್ಲಿ?
ನಿಯಮಗಳ ಪ್ರಕಾರ, ಮತದಾರರು ಎಡಗೈ ತೋರುಬೆರಳು ಇಲ್ಲದೇ ಇದ್ದ ಸಂದರ್ಭದಲ್ಲಿ, ಅವರ ಎಡಗೈಯಲ್ಲಿರುವ ಇತರ ಯಾವುದೇ ಬೆರಳಿಗೆ ಶಾಯಿಯನ್ನು ಅನ್ವಯಿಸಲಾಗುತ್ತದೆ.ಒಂದು ವೇಳೆ ಎಡಗೈಯ ಎಲ್ಲಾ ಇಲ್ಲದೇ ಇದ್ದರೆ,ಕೈಯೇ ಇಲ್ಲದಿದ್ದರೆ ಮತದಾರನ ತೋರುಬೆರಳು ಅಥವಾ ಬಲಗೈಯ ಯಾವುದೇ ಬೆರಳಿಗೆ ಶಾಯಿಯನ್ನು ಅನ್ವಯಿಸಲಾಗುತ್ತದೆ.ಎರಡೂ ಕೈಗಳ ಎಲ್ಲಾ ಬೆರಳುಗಳು ಇಲ್ಲದಿರುವ ಸಂದರ್ಭದಲ್ಲಿ ಎಡ ಅಥವಾ ಬಲಗೈಯ ಭಾಗದ ತೋಳಿನ ತುದಿಗೆ ಹಚ್ಚಬೇಕು ಎಂದು ನಿಯಮವಿದೆ.
ಟಾಪ್ ನ್ಯೂಸ್
![Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ](https://www.udayavani.com/wp-content/uploads/2024/07/shiruru-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Kargil War’s@25: ಹಿಮ ಪರ್ವತಗಳಲ್ಲಿ ಪಾಕ್ ಅನ್ನು ತಣ್ಣಗಾಗಿಸಿದ ಬೋಫೋರ್ಸ್ ಹವಿಟ್ಜರ್ ನೆನಪು](https://www.udayavani.com/wp-content/uploads/2024/07/Kargil-150x84.jpg)
Kargil War’s@25: ಹಿಮ ಪರ್ವತಗಳಲ್ಲಿ ಪಾಕ್ ಅನ್ನು ತಣ್ಣಗಾಗಿಸಿದ ಬೋಫೋರ್ಸ್ ಹವಿಟ್ಜರ್ ನೆನಪು
![ಕುಸಿದು ಬಿತ್ತಾ ಗುಜರಾತ್ ಟೈಟಾನ್ಸ್ ಸಾಮ್ರಾಜ್ಯ; ಅದಾನಿ ಪಾಲಾಗುತ್ತಾ ಐಪಿಎಲ್ ತಂಡ?](https://www.udayavani.com/wp-content/uploads/2024/07/GT-main-150x83.jpg)
IPL 2025;ಕುಸಿದು ಬಿತ್ತಾ ಗುಜರಾತ್ ಟೈಟಾನ್ಸ್ ಸಾಮ್ರಾಜ್ಯ; ಅದಾನಿ ಪಾಲಾಗುತ್ತಾ ಐಪಿಎಲ್ ತಂಡ?
![Rani Ki Vav: ನೂರಾರು ವರ್ಷ ಭೂಗತವಾಗಿದ್ದ “ರಾಣಿ ಕೀ ವಾವ್” ಮೆಟ್ಟಿಲು ಬಾವಿಯ ಸ್ವರ್ಗ!](https://www.udayavani.com/wp-content/uploads/2024/07/Beauty01-150x72.jpg)
Rani Ki Vav: ನೂರಾರು ವರ್ಷ ಭೂಗತವಾಗಿದ್ದ “ರಾಣಿ ಕೀ ವಾವ್” ಮೆಟ್ಟಿಲು ಬಾವಿಯ ಸ್ವರ್ಗ!
![6–bamboo-shoot](https://www.udayavani.com/wp-content/uploads/2024/07/6-bamboo-shoot-150x90.jpg)
Bamboo shoot: ಬಿದಿರಿನ ಚಿಗುರಿನ ಆರೋಗ್ಯ ಮಹತ್ವ-ಮಲೆನಾಡಿನ ನೆಚ್ಚಿನ ಖಾದ್ಯ!
![ಪ್ರವಾಸಿ ತಾಣವಾದ ಸ್ಮಶಾನ… ಇಲ್ಲಿ Pre-Wedding, Birthday ಪಾರ್ಟಿ ಕೂಡ ಇಲ್ಲಿ ನಡೆಯುತ್ತೆ](https://www.udayavani.com/wp-content/uploads/2024/07/gujarath-150x84.jpg)
ಪ್ರವಾಸಿ ತಾಣವಾದ ಸ್ಮಶಾನ… ಇಲ್ಲಿ Pre-Wedding Shoot, Birthday ಪಾರ್ಟಿ ಕೂಡ ನಡೆಯುತ್ತೆ
MUST WATCH
ಹೊಸ ಸೇರ್ಪಡೆ
![Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ](https://www.udayavani.com/wp-content/uploads/2024/07/shiruru-150x90.jpg)
Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.